ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ಸ್ಥಾನ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ತಾಲ್ಲೂಕಿನ ನಾಲತವಾಡದ ನಿವಾಸಿ ಸೃಷ್ಟಿ ಎಸ್.ಪಾಟೀಲ ವಿದ್ಯಾರ್ಥಿನಿ ಇದೀಗ 625ಕ್ಕೆ 625 ಅಂಕ ಪಡೆದುಕೊಂಡು ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿದ್ದಾಳೆ.ಮೊದಲು ಫಲಿತಾಂಶ ಪ್ರಕಟಗೊಂಡಾಗ ಕನ್ನಡ 125,ಗಣಿತ 100,ಹಿಂದಿ 100,ಸಮಾಜ ವಿಜ್ಞಾನ 100, ಇಂಗ್ಲಿಷ್ಗೆ 99 ಹಾಗೂ ವಿಜ್ಞಾನ ವಿಷಯದಲ್ಲಿ 97 ಅಂಕ ಸೇರಿ ಒಟ್ಟು ಸೃಷ್ಟಿಗೆ 621 ಅಂಕ ಬಂದಿದ್ದವು.ಅಷ್ಟಕ್ಕೆ ಸಮಾಧಾನಗೊಳ್ಳದೇ ಪಾಲಕರು,ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ವಿಜ್ಞಾನ ವಿಷಯದಲ್ಲಿ ಮೂರು, ಇಂಗ್ಲಿಷ್ ವಿಷಯದಲ್ಲಿ ಒಂದು ಅಂಕ ಸೇರಿ ಒಟ್ಟು 625 ಅಂಕ ಪಡೆದುಕೊಂಡು ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ನಾಲತವಾಡದ ವೈದ್ಯ ದಂಪತಿ ಸಿದ್ದನಗೌಡ ಪಾಟೀಲರ ಪುತ್ರಿಯಾಗಿರುವ ಸೃಷ್ಟಿ ಸಾಧನೆ ಇಡೀ ಜಿಲ್ಲೆಯ ಹೆಸರನ್ನು ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಮಿಂಚುವAತೆ ಮಾಡಿದೆ.
ಮರುಮೌಲ್ಯಪಾಪನದಲ್ಲಿ ಪೂರ್ಣ ಅಂಕ ಬಂದ ಸುದ್ದಿ ತಿಳಿಯುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ನಮ್ಮ ಸಂಸ್ಥೆಯಿoದ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ sಸೌಜನ್ಯ ಕಂದಕೂರ ನಂತರ ಎರಡನೇ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿರುವುದು ಖುಷಿ ತಂದಿದೆ.ಮರುಮೌಲ್ಯಮಾಪನದಲ್ಲಿ ನಮಗೆ ಪೂರ್ಣ ಅಂಕ ಬರುವ ವಿಶ್ವಾಸ ಇತ್ತು.ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿಯಿAದ ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ,ಕಾರ್ಯದರ್ಶಿ ವಿಜಯಕುಮಾರ ಪಾಟೀಲ,ಮಾರ್ಗದರ್ಶಕರಾದ ಎನ್.ಎ.ಬಿರಾಜದಾರ,ನಿರ್ದೇಶಕ ದರ್ಶನಗೌಡ ಪಾಟೀಲ,ಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ,ರೇವಣಸಿದ್ದ ಚಲವಾದಿ(ಮುರಾಳ) ಮತ್ತಿತರರು ಅಭಿನಂದಿಸಿದ್ದಾರೆ.







