Inauguration of the new chariot at Kuntoji

ಕುಂಟೋಜಿಯಲ್ಲಿ ನೂತನ ರಥದ ಲೋಕಾರ್ಪಣೆ

ಕುಂಟೋಜಿಯಲ್ಲಿ ನೂತನ ರಥದ ಲೋಕಾರ್ಪಣೆ

ತನ್ನನ್ನು ಪರಿವರ್ತಿಸಿಕೊಳ್ಳುವುದೇ ನಿಜವಾದ ಧರ್ಮ-ಕೊಪ್ಪಳ ಶ್ರೀ

ಮುದ್ದೇಬಿಹಾಳ : ಮನುಷ್ಯ ಸಂತೋಷವಾಗಿ ಬದುಕಲು ಅನ್ನ, ಆಶ್ರಯ, ಅರಿವೆ ಬೇಕು. ಅದರ ಜೊತೆಗೆ ನಾನು ಈ ಭೂಮಿಯ ಮೇಲೆ ಹೇಗೆ ಬದುಕುಬೇಕು ಎಂಬ ಅರಿವು ಇಟ್ಟುಕೊಂಡು ಬದುಕುಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕುಂಟೋಜಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ನೂತನ ರಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಅರಿವಿಲ್ಲದೇ ಬದುಕಬಾರದು,ಜ್ಞಾನ ತಿಳಿವಳಿಕೆ ಇಲ್ಲದ ಬದುಕು ಅಲ್ಲಿ ದುಃಖ,ಚಿಂತೆ ಮನೆ ಮಾಡುತ್ತದೆ. ಮನೆಯಲ್ಲಿ ಸೊಳ್ಳೆಯನ್ನು ಓಡಿಸಲು ಗುಡನೈಟ್ ಹಚ್ಚಿದಂತೆ ಬದುಕಿನಲ್ಲಿ ಕೆಟ್ಟ ವಿಚಾರಗಳು ಹೋಗುವುದಕ್ಕೆ ಗುಡಲೈಫ್ ಹಚ್ಚಬೇಕು. ಇಲ್ಲಿ ಯಾರಿಗೆ ಯಾರೂ ಬದಲಾವಣೆ ಮಾಡುವುದಿಲ್ಲ. ಜಗತ್ತಿನಲ್ಲಿ ತನ್ನನ್ನು ತಾನೇ ಪರಿವರ್ತನೆಯೇ ನಿಜವಾದ ಧರ್ಮವಾಗಿದೆ ಎಂದು ಹೇಳಿದರು.

ಮನಸ್ಸನ್ನು ಒಳ್ಳೆಯ ವಿಷಯಗಳಿಂದ ತುಂಬಿಸಿಕೊಳ್ಳಬೇಕು. ಸುಖ ದುಃಖದ ಪರಿಕಲ್ಪನೆಗಳು ಬೇರೆಲ್ಲೂ ಇಲ್ಲ. ನಮ್ಮಲ್ಲಿಯೇ ಇದೆ. ಕಲ್ಲು ಒಡೆಯುವವನ ಕೈಗೆ ಸಿಕ್ಕರೆ ಕಂಕರ ಆಗುತ್ತದೆ. ಶಿಲ್ಪಿ ಕೈಯ್ಯಲ್ಲಿ ಕೊಟ್ಟರೆ ಅದು ಶಂಕರ ಆಗುತ್ತದೆ. ಕಲ್ಲಿನಲ್ಲಿ ಏನೂ ಇಲ್ಲ. ಕಲ್ಲನ್ನು ರೂಪಿಸುವವನ ಕೈಯ್ಯಲ್ಲಿ ಅದು ಕಂಕರ, ಶಂಕರ ಆಗುವ ಶಕ್ತಿ ಹೊಂದಿದೆ ಎಂದರು.

ದೇವನ ಮನೆಯಲ್ಲಿರುವ ನಾವು ದೇವರಿಗೆ ಮನೆಯನ್ನು ಕಟ್ಟಿದ್ದೇವೆ ಎಂದು ಹೇಳುತ್ತ ತಿರುಗುತ್ತೇವೆ. ಭೂಮಿಗೆ ಬರಬೇಕಾದರೆ ಬರಿಗೈಯ್ಯಲ್ಲಿ ನಾವು ಬಂದಿದ್ದೇವೆ. ದೇವರು ಎಂತಹ ಕರುಣಾಮಯಿ ಎಂದರೆ ನಾವು ಹುಟ್ಟುವುದಕ್ಕಿಂತ ಮುಂಚೆಯೇ ನಮ್ಮ ಸಲುವಾಗಿ ತಾಯಿಯ ಎದೆ ಹಾಲಿನಲ್ಲಿ ಪೌಷ್ಟಿಕಾಂಶವುಳ್ಳ ಎಲ್ಲ ರೀತಿಯ ಆಹಾರವನ್ನು ಒದಗಿಸಿದ್ದಾನೆ. ಈ ದೇಹ ಲೋಕಕ್ಕೆ ಅರ್ಪಿತವಾಗಬೇಕು ಎಂದು ಹೇಳಿದರು.

ಕುಂಟೋಜಿ ಇತಿಹಾಸದಲ್ಲಿಯೇ ಇದೊಂದು ಹೊಸ ಅಧ್ಯಾಯ ನೂತನ ರಥ ಲೋಕಾರ್ಪಣೆ ಸಮಾರಂಭ. ಕಟ್ಟಿಗೆಯ ರಥ ಲೋಕಾರ್ಪಣೆಯಾದರೆ ಸಾಲುವುದಿಲ್ಲ.ಈ ದೇಹ ಲೋಕಕ್ಕೆ ಅರ್ಪಿತವಾಗಬೇಕು. ಬಸವಣ್ಣನವರು ಇದಕ್ಕೆ ಯಜ್ಞ ಎಂದು ಕರೆದಿದ್ದಾರೆ ಎಂದು ತಿಳಿಸಿದರು.

ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ವಸುದೈವ ಕುಟುಂಬದ ಕಲ್ಪನೆ, ದ್ವೇಷ, ಎಲ್ಲರೂ ತನ್ನವರೆಂಬ ಭಾವ, ನಿಂದನೆಗಳಿಲ್ಲದಿದ್ದವರು ದೇವರಾಗಲು ಸಾಧ್ಯವಿದೆ. ಆದರೆ ಮನುಷ್ಯ ದ್ವೇಷ, ಮತ್ತೊಬ್ಬರನ್ನು ನಿಂದಿಸುವುದು, ಪರಸ್ಪರ ಸ್ನೇಹಭಾವವನ್ನು ಹೊಂದುವುದನ್ನು ಸಹಿಸುತ್ತಿಲ್ಲ. ಆತ ದೇವರಾಗಲು ಅಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೇ.ಪಡದಯ್ಯ ಮಠ, ವೀರಯ್ಯ ಶಾಸ್ತ್ರಿಗಳು, ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಮುಖಂಡ ಸಂಗನಗೌಡ ಪಾಟೀಲ, ರುದ್ರಯ್ಯ ಮಠ, ಶಿವಲಿಂಗಪ್ಪ ಗಸ್ತಿಗಾರ, ಶಿಲ್ಪಿ ಮಲ್ಲಪ್ಪ ಬಡಿಗೇರ, ರಾಘವೇಂದ್ರ ಬಡಿಗೇರ, ಮಹೇಶ ಅಂಬಿಗೇರ, ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ, ಪಿಡಿಒ ಪರಶುರಾಮ ನಾಯ್ಕೋಡಿ, ಶಿವಣ್ಣ ಚಿನಿವಾಲರ, ಶರಣು ಹಿರೇಮಠ ಇದ್ದರು. ಸಿಂಧೂ ಹಿರೇಮಠ ಪ್ರಾರ್ಥಿಸಿದರು. ಶರಣು ಹಿರೇಮಠ ನಿರೂಪಿಸಿದರು.ಮನಸ್ವಿ ಬಿರಾದಾರ ವಚನ ಗಾಯನಕ್ಕೆ ನೃತ್ಯ ಮಾಡಿದಳು.

Latest News

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್‌ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಎಲ್‌ಓಗಳ ಸಹಕಾರದಿಂದ ಉತ್ತಮ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ