ಶಾಸಕರೇ ನಮ್ಮೂರಿಗೆ ನೀರಾವರಿ ಭಾಗ್ಯ ಯಾವಾಗ..? ಅಂಗಡಗೇರಿ ಗ್ರಾಮಸ್ಥರ ಆಕ್ರೋಶ

ಶಾಸಕರೇ ನಮ್ಮೂರಿಗೆ ನೀರಾವರಿ ಭಾಗ್ಯ ಯಾವಾಗ..? ಅಂಗಡಗೇರಿ ಗ್ರಾಮಸ್ಥರ ಆಕ್ರೋಶ

ಗೊಳಸಂಗಿ: ಇದು ಪ್ರಸ್ತುತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸದ್ಯ ನಿಡಗುಂದಿ ತಾಲೂಕಿನ ಅಂಗಡಗೇರಿ ಗ್ರಾಮದ ರೈತರ ಹಾಗು ಯುವಕರ ಅಳಲು ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ನಮ್ಮೂರಿಗೂ ಕೂಡ ನೀರಾವರಿ ಭಾಗ್ಯ ಬರುತ್ತದೆ ನಮ್ಮ ಬದುಕು ಕೂಡ ಹಸನಾಗುತ್ತದೆ ಎಂದು ಕಾಯ್ದುಕೊಂಡು ಕುಳಿತ ರೈತರಿಗೆ ಇನ್ನೂ ದೊರೆಯದ ನೀರಾವರಿ ಭಾಗ್ಯ ಪಟ್ಟಣದಲ್ಲಿ ನಿರುದ್ಯೋಗವನ್ನು ಅನುಭವಿಸಿ ತಮ್ಮುರಿನತ್ತ ಬಂದು ವ್ಯವಸಾಯ ಕೃಷಿ ಮಾಡಬೇಕೆಂಬ ಹಂಬಲವಿರುವ ಅನೇಕ ಯುವಕರಲ್ಲಿ ನಮ್ಮೂರಿಗೆ ನೀರಾವರಿ ಭಾಗ್ಯ ಇಂದಲ್ಲ ನಾಳೆ ಲಭಿಸುವುದು ಎಂಬ ಆಶಾಭಾವನೆ ಇಟ್ಟುಕೊಂಡ ರೈತ ಯುವಕರ ಆಕ್ರೋಶದ ಕಟ್ಟೆ ಹೊಡೆಯುತ್ತಿದೆ.

ಜನಪ್ರತಿನಿಧಿಗಳ ಹಾಗೂ ಶಾಸಕರ ಮುತ್ತಿಗೆ ಹಾಕುವ ಕಾಲ ಇನ್ನೇನು ದೂರವಿಲ್ಲ ಎಂಬ ಭಾವನೆ ರೈತ ಹಾಗೂ ಯುವಕರಲ್ಲಿ ಮೂಡುತ್ತಿದೆ ಸುತ್ತಮುತ್ತಲ ಎಲ್ಲ ಗ್ರಾಮಗಳಿಗೂ ನೀರಾವರಿ ವ್ಯವಸ್ಥೆ ಆದರೂ ಕೂಡ ಅಂಗಡಗೇರಿ ಗ್ರಾಮದ ಪಾಲಿಗೆ ಇನ್ನೂ ಕನಸಾಗಿ ಉಳಿದ ನೀರಾವರಿ ವ್ಯವಸ್ಥೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಾವರಿಯ ಭಾಗ್ಯ ಇದೆ ತೆಲಗಿ, ಮಟ್ಟಿಹಾಳ,ಚೀರಲದಿನ್ನಿ, ಕೂಡಗಿ,ಮಸೂತಿ,ಮಲಘಾನ, ಸಿದ್ದನಾಥ ಕವಲಗಿ, ಅರಷಣಗಿ, ಗಣಿ, ಚೀಮ್ಮಲಗಿ, ವಂದಾಲ, ಈಗಾಗಲೇ ನೀರಾವರಿಯ ಭೂಮಿಗಳಾಗಿದ್ದು ಜಾಕ್ವೇಲ್ ಮುಖಾಂತರ ನೀರಾವರಿಯ ಸೌಲಭ್ಯವನ್ನು ಏಕೆ ಒದಗಿಸಲಾಗುತಿಲ್ಲ…..?

‌ಕಾರಣ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೋ ಅಥವಾ ನಮ್ಮೂರಿನ ಅಂಗಡಗೇರಿ ಗ್ರಾಮದ ಯಾವ ಜನಪ್ರತಿನಿಧಿಗಳಿಗೂ ಅರವಿಗೆ ಬಂದಿಲ್ಲವೊ ಅಥವಾ ನಮ್ಮ ಊರು ಅತ್ಯಂತ ಎತ್ತರ ಪ್ರದೇಶದಲ್ಲಿದೆಯೊ ಅಥವಾ ಶಾಸಕರಿಗೆ ಇಚ್ಚಾಶಕ್ತಿಯ ಕೊರತೆಯೋ ಅಥವಾ ನಮ್ಮ ಊರಿನಿಂದ ಯಾರೊಬ್ಬರೂ ಮತದಾನ ಮಾಡಿಲ್ಲವೆಂದು ಸಂಶಯವಿದೆಯಾ….? ಎಂಬುವುದನ್ನೂ ಗ್ರಾಮದ ಜನ ಚರ್ಚಿಸುತ್ತಿದ್ದಾರೆ.

ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೂ ನೀರಾವರಿಯಾದರೂ ಕೂಡಾ ನಮ್ಮೂರಿಗೆ ಇನ್ನೂ ನೀರಾವರಿಯ ಸೌಲಭ್ಯ ದೊರಕುತ್ತಿಲ್ಲ.ನೀರಾವರಿ ಆದರೆ ರೈತರ ಬಾಳು ಹಸನಾಗುವುದು ಎಂಬ ಆಶಾಭಾವನೆಯೊಂದಿಗೆ ರೈತರು ಇನ್ನೂ ಕಾಲಕಳೆಯುತ್ತಿದ್ದಾರೆ. ಇನ್ನೂ ಆದಷ್ಟು ಬೇಗ ಸರ್ಕಾರ ಮತ್ತು ಶಾಸಕರು ನಮ್ಮೂರಿನತ್ತ ಕಣ್ಣಾಯಿಸಿ ರೈತರ ಗೊಳು ಆಲಿಸುವರೆಂದು ಅಂದುಕೊಂಡಿದ್ದೇವೆ.ಈ ತಾರತಮ್ಯವನ್ನು ಹೋಗಲಾಡಿಸಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡುವುದನ್ನು ಬಿಟ್ಟು ಬಸವನ ಬಾಗೇವಾಡಿ ಹಾಗೂ ನಿಡುಗುಂದಿ ತಾಲೂಕು ಸಂಪೂರ್ಣ ನೀರಾವರಿ ಗ್ರಾಮಗಳನ್ನಾಗಿ ಮಾಡಬೇಕು ನೀರು ಪ್ರತಿಯೊಂದು ಗ್ರಾಮಕ್ಕೂ ಅತಿ ಅವಶ್ಯಕ ಕೃಷಿ ಜನ ಜಾನುವಾರುಗಳಿಗೆ. ನೀರು ಒದಗಿಸಿ ಆದಷ್ಟು ಬೇಗ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಕಣ್ಣು ಹಾಯಿಸಿ ಶೀಘ್ರದಲ್ಲಿ ಅಂಗಡಗೇರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ನೀರಾವರಿ ಗೊಳಿಸಲು ಮತ್ತು ಅದಕ್ಕೆ ಬೇಕಾಗುವ ಎಲ್ಲಾ ತಯಾರಿಗಳನ್ನು ಶೀಘ್ರದಲ್ಲಿ ಮಾಡಬೇಕೆಂದು ರೈತರು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾರೆ.

Latest News

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮೇ.29 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಜಮಖಂಡಿ: ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲಿ ವರ ಸಾವನಪ್ಪಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಸಮಾಜ ಸೇವಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಭರ್ಜರಿ ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಮುದ್ದೇಬಿಹಾಳ : ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮುದ್ದೇಬಿಹಾಳ ಪಟ್ಟಣದಲ್ಲಿ ಮೇ.30 ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದ ದಾಸೋಹ ಭವನದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದು ಸಾರ್ವತ್ರಿಕವಾಗಿ ಎಲ್ಲ ಧರ್ಮೀಯರು ಸೇರಿಕೊಂಡು ಮಾಡುವ ಜಾತ್ರೆಯಾಗಿದ್ದು ಸರ್ಕಾರ ಎಂದರೆ ಸಾರ್ವಜನಿಕರು, ಸಾರ್ವಜನಿಕರೆಂದರೆ ಸರ್ಕಾರ

ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತ ಸಾವು

ಮುದ್ದೇಬಿಹಾಳ : ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರೈತ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟಿ(47) ಹೊಲಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹೊಲದಲ್ಲಿದ್ದ ಹುಣಸೆ ಮರದ ಕೆಳಗಡೆ ಆಶ್ರಯ ಪಡೆದುಕೊಂಡಾಗ ಸಿಡಿಲು ಬಡಿದು ರೈತ ಸ್ಥಳದಲ್ಲೇ ಅಸುನೀಗಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ, ನೇಬಗೇರಿ, ಗೆದ್ದಲಮರಿ, ಶಿರೋಳ, ಮುದ್ನಾಳ, ಮುದ್ದೇಬಿಹಾಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ