ಮುದ್ದೇಬಿಹಾಳ : ರೈತರು ಕೃಷಿ ಚಟುವಟಿಕೆಗಳಿಗೆಂದು ಕಡಿಮೆ ಬಡ್ಡಿದರದಲ್ಲಿ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಸಂಘಗಳಿಗೆ ತುಂಬಿದರೆ ಸಂಘದ ಆರ್ಥಿಕ ಸ್ಥಿತಿಯ ಜೊತೆಗೆ ಸಹಕಾರಿ ಸಂಘಗಳು ರೈತರ ಮೇಲಿನ ವಿಶ್ವಾಸ ಅಧಿಕಗೊಳಿಸುವಂತೆ ಮಾಡುತ್ತವೆ ಎಂದು ವಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಬಸವರಾಜ ಬಡದಾನಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ತಾಲ್ಲೂಕಿನ ಕುಂಟೋಜಿಯಲ್ಲಿ ಸೋಮವಾರ ಆಯೋಜಿಸಿದ್ದ ಮುದ್ದೇಬಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 49ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ವಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುದ್ದೇಬಿಹಾಳ ಪಿ.ಕೆ.ಪಿ.ಎಸ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿ.ಬಿ.ಅಗ್ಗಿಮಠ ಮಾತನಾಡಿ, 1976ರಲ್ಲಿ 150 ಸದಸ್ಯರಿಂದ 25 ಸಾವಿರ ರೂ. ಶೇರು ಬಂಡವಾಳದಿಂದ ವ್ಯವಸಾಯ ಸೇವಾ ಸಹಕಾರಿ ಸಂಘವೆಂದು ಆರಂಭಗೊಂಡು ಇಂದು 2278 ಸದಸ್ಯರನ್ನು ಹೊಂದಿದ್ದು ರೈತರಿಗೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ 706.72 ಲಕ್ಷ ರೂ.ಸಾಲ ಒದಗಿಸಿದೆ.
ಸಂಘವು 6.60 ಲಕ್ಷ ಲಾಭ ಗಳಿಸಿದ್ದು ಸಂಘದ ನಿರ್ದೇಶಕಿಯರಾದ ನಂದಾ ಮಲ್ಲಿಕಾರ್ಜುನ ಬಾಗೇವಾಡಿ ಅವರು ಸಂಘಕ್ಕೆ ಒಂದು ಟೇಬಲ್ ಹಾಗೂ 12 ಖುರ್ಚಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ನಿರ್ದೇಶಕ ಎಂ.ಎಸ್.ಬಿರಾದಾರ ಮಾತನಾಡಿದರು.
ಸಂಘದ ಅಧ್ಯಕ್ಷ ಶಿವಾನಂದ ಹುಲಗಣ್ಣಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಈರಪ್ಪ ಬಿರಾದಾರ, ಪರಶುರಾಮ ಮಡಿವಾಳರ, ಅಪ್ಪಾಜಯ್ಯ ಕೊಡೇಕಲ್ಮಠ, ಗಂಗಾಬಾಯಿ ಬಿರಾದಾರ, ಈರಣ್ಣ ಪಣೇದಕಟ್ಟಿ, ಸೋಮಲಿಂಗಪ್ಪ ಗಸ್ತಿಗಾರ, ಪ್ರದೀಪ ಸುಧಾಕರ, ಶರಣಬಸ್ಸು ಪಲ್ಲೇದ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಚ್.ರಾಠೋಡ, ಸಿಬ್ಬಂದಿ ಭಾರತಿ ನಾಟೇಕಾರ, ನಿಂಗಪ್ಪ ಮಡಿವಾಳರ ಹಾಗೂ ಸಂಘದ ವ್ಯಾಪ್ತಿಯ ಅಬ್ಬಿಹಾಳ, ಕುಂಟೋಜಿ, ಮುದ್ದೇಬಿಹಾಳ, ಶಿರೋಳ, ಹೊಕ್ರಾಣಿ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕುಸಿದ ಅಂಗನವಾಡಿ ಚಾವಣಿ ಅಪಾಯದಿಂದ ಪಾರದ ಮಕ್ಕಳು