ಮುದ್ದೇಬಿಹಾಳ : ತಾಲ್ಲೂಕು ನಾಲತವಾಡ ಪಟ್ಟಣದ ಶರಣ ವೀರೇಶ್ವರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನದ ನಿರ್ದೇಶಕರ ಮಂಡಳಿ ಚುನಾವಣೆ ಇದೇ 29ರಂದು ನಡೆಯಬೇಕಿತ್ತು. ಆದರೆ ಸೋಮವಾರ ಎಂ.ಎಸ್.ಪಾಟೀಲ ಹಾಗೂ ವಕೀಲ ಬಿ.ಎಂ.ತಾಳಿಕೋಟಿ ಅವರು ಕಣದಲ್ಲಿ ಉಳಿದಿದ್ದ 9 ಅಭ್ಯರ್ಥಿಗಳನ್ನು ತಮ್ಮ ನಾಮಪತ್ರ ಹಿಂಪಡೆಯುವAತೆ ಮನವೊಲಿಸಿ ನಿರ್ದೇಶಕರ ಅವಿರೋಧ ಆಯ್ಕೆಗೆ ಕಸರತ್ತು ಮಾಡಿದ್ದಾರೆ.
7 ಸಾಮಾನ್ಯ ಮೀಸಲು ಕ್ಷೇತ್ರದಿಂದ ಬಸವರಾಜ ತಾಳಿಕೋಟಿ, ಮಹಾಂತಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಗುರುಸಂಗಪ್ಪ ಗಡೇದ, ಬಸವಂತಪ್ಪ ಗಂಗನಗೌಡರ, ಶಂಕ್ರಪ್ಪ ನಾಗರದಿನ್ನಿ, ಶಿವಪುತ್ರಯ್ಯ ಸ್ಥಾವರಮಠ ಅವರು ಆಯ್ಕೆಯಾದರೆ, ಪ್ರವರ್ಗ ‘ಅ’ ಮೀಸಲು ವರ್ಗದಿಂದ ಖಾಜಾಹುಸೇನ ಎತ್ತಿನಮನಿ, ಪ್ರವರ್ಗ ‘ಬಿ’ ಮೀಸಲು ವರ್ಗದಿಂದ ಸಂಗಣ್ಣ ಹಡಲಗೇರಿ, ಪರಿಶಿಷ್ಟ ಜಾತಿ ವರ್ಗದಿಂದ ಬಸವರಾಜ ತಿರುಮುಖಿ, ಪರಿಶಿಷ್ಟ ಪಂಗಡ ವರ್ಗದಿಂದ ಬಾಲಪ್ಪ ಹಟ್ಟಿ, ಮಹಿಳಾ ಮೀಸಲು ವರ್ಗದಿಂದ ಸುಮಿತ್ರಾ ದೇಶಮುಖ, ಭಾರತಿ ಪಾಟೀಲ (ಮೇಟಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್.ಎಲ್.ಧಮ್ಮೂರಮಠ ತಿಳಿಸಿದ್ದಾರೆ.ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಇದ್ದರು.