ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

Ad
Ad

ಬೀಳಗಿ: ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ಬಂದಿದಲ್ಲದೆ, ನಮ್ಮ ಕುಟುಂಬ ವರ್ಗದಲ್ಲಿ ಅನಾರೋಗ್ಯಕೀಡಾದ ಸಂದರ್ಭದಲ್ಲಿ ಉಚಿತ ಚಿಕಿತ್ದೆಗಾಗಿ ಆರೋಗ್ಯ ಸಂಜವೀನಿ ಅನುಷ್ಟಾನಗೊಳಿಸಲು ಯಶಸ್ಬಿಯಾಗಿದ್ದು, 2006 ರಿಂದ ನೇಮಕಗೊಂಡ ಸರಕಾರಿ ನೌಕರರ ಹಿತ ದೃಷ್ಡಿಯಿಂದ ಸರಕಾರ ಜಾರಿಗೊಳಿಸಿದ ಎನ್ ಪಿ ಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಯಾಗಲು ಹೋರಾಟ ಮಾಡಿ ಯಶಸ್ವಿಯಾಗಲು ಪ್ರತಿಯೊಬ್ಬರು ಸಂಘಟೀತರಾಗೋಣ ಎಂದು ಕ.ರಾ.ಸ. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್. ಬಿ. ಬಳ್ಳಾರಿ ಸರಕಾರಿ ನೌಕರರಿಗೆ ಕರೆ ನೀಡಿದರು.

Ad
Ad

ಪಟ್ಟಣದ ರುದ್ರಗೌಡ ಪಾಟೀಲ ಸರಕಾರಿ ಪಥಮ ದರ್ಜೇ ಕಾಲೇಜು ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಯೊಬ್ಬ ನೌಕರರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ನೌಕರರ ಸಂಘ 22 ಕೋಟಿ ಹಣವನ್ನು ಎಪ್.ಡಿ. ಮಾಡಿದ್ದು, ಕ್ರೀಡಾಕೂಟ ಹಾಗೂ ಮಹಿಳಾದಿನಾಚರಣೆ ಸೇರಿದಂತೆ ವಿವಿಧ ಸಾಂಸ್ಕತೀಕ ಕಾರ್ಯಕ್ರಮಗಳಿಗೆ ಸರಕಾರ ಅನುದಾನ ನೀಡುತ್ತಿದ್ದು, ನಮ್ಮ ಬಾಗಲಕೋಟೆ ಜಿಲ್ಲೆಗೆ 2 ಕೋಟಿ ಅನುದಾನ ಬಂದಿದ್ದು ಬೀಳಗಿ ಸರಕಾರಿ ನೌಕರರ ಭವನ ನವೀಕರಣಗೊಳಿಸಲು 25 ಲಕ್ಷ ರೂಪಾಯಿಗಳ ಅನುಧಾನ ನೀಡಲಾಗುವದು ಎಂದು ಎಮ್ ಬಿ ಬಳ್ಲಾರಿ ಹೇಳಿದರು.

ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಯುವ ಅನ್ನದಾತ ರೈತನು ಕೃಷಿ ಮಾಡಿ ವರ್ಷಕ್ಕೆ ಲಕ್ಷಾಂತರ ರೂಗಳು ಆದಾಯ ಗಳಿಸಿದರೂ ಆತನಿಗೆ ಕನ್ಯೆ ಕೊಡುತ್ತಿಲ್ಲ, ಇಂದಿನ ದಿನಮಾನದಲ್ಲಿ ಕಡಿಮೆ ಸಂಬಳದ ನೌಕರಿ ಇದ್ದರೂ ಅವರನ್ನು ಈಗಿನ ಕನ್ಯೆಯರು ಮದುವೆಯಾಗಲು ಮಂದೆ ಬರುತ್ತಾರೆ ಎಂದ ಅವರು ಸರಕಾರಿ ನೌಕರಿ ಮಾಡುವರು ಅದೃಷ್ಟವಂತರು ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ನೂತನ ಪದಾಧಿಕಾಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ತಹಶೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಭಯಕುಮಾರ ಮೊರಭ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೆಂದ್ರ ಧನಪಾಲ, ಸಿ.ಪಿ.ಆಯ್ ಬಸವರಾಜ ಹಳಬನ್ನವರವರನ್ನು ಮುಖ್ಯ ಅತಿಥಿಗಳಾಗಿ ಅಹ್ವಾನ ನೀಡಿದರೂ ತಾವು ರಾಜ್ಯ ಸರಕಾರಿ ನೌಕರಾಗಿದ್ದರು ಕಾರ್ಯಕ್ರಮಕ್ಕೆ ಗೈರು ಹಾಜರಿಯಾಗಿದ್ದು ಎದ್ದು ಕಾಣತಿತ್ತು. ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಎರಡು ಬಣಗಳಾಗಿದ್ದು ಅದರ ಪರಿಣಾಮದ ಸಲುವಾಗಿ ಕಾರ್ಯಕ್ರಮದಿಂದ ದೂರ ಉಳಿದಿದ್ದರಬಹುದು ಎಂದು ನಿವೃತ್ತ ನೌಕರರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಡಿ.ವಾಯ್ ಅಂಬಿಗೇರ ಕಾರ್ಯದರ್ಶಿ ಮಹೇಶ ಜಗಲಿ, ಖಜಾಂಚಿ ದಾನಪ್ಪ ತಳವಾರ, ಪದಾಧಿಕಾರಿಗಳಾದ ಸಿದ್ದು ನಕ್ಕರಗುಂದಿ, ಎಸ್.ಎಸ್. ನಾರಾಯಣಿ, ಎಸ್.ಬಿ. ಮುಂಡರಗಿ, ಅಪ್ಪಾಸಾಹೇಬ ಮೋದಿ, ಎಲ್.ಡಿ. ಹಳ್ಳಿ, ಬಸವರಾಜ ನಿರಾಕರಿ ಜಿ.ಕೆ. ಸುಳ್ಳದ, ಅನಿಲ ಹೂಗಾರ,‌ಸುಜಾತಾ ರಜಪೂತ, ಆರ್. ಕೆ. ರಾಠೋಡ ಬಸವರಾಜ ಡಾವಣಗೇರಿ ಸೇರಿದಂತೆ ವೃಂದ ನೌಕರರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥೀತರಿದ್ದರು.

Latest News

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ಮುದ್ದೇಬಿಹಾಳ : ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ರಂಭಾಪುರಿ ಸ್ವಾಮೀಜಿಯವರು ಸೇರಿದಂತೆ ಹಲವು ಮಠಾಧೀಶರು

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಮುದ್ದೇಬಿಹಾಳ: ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ನಿಡಗುಂದಿ : ಕಲಿಕಾ ಸಾಮಗ್ರಿ ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ ಎಂದು

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಮುದ್ದೇಬಿಹಾಳ : ಪರೀಕ್ಷೆ ನಡೆಯುವ ಶಿಕ್ಷಣ ಸಂಸ್ಥೆ, ಪ್ರೌಢಶಾಲೆ ಮುಖ್ಯಗುರುಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮುಖ್ಯ ಅಧೀಕ್ಷಕರಾಗಿ ಅದೇ ಶಾಲೆಯಲ್ಲಿರುವ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ.ಆದರೆ ಇಲ್ಲಿನ ತಾಲ್ಲೂಕು ಶಿಕ್ಷಣಾಧಿಕಾರಿಗಳು ನಿಯೋಜಿಸಿರುವ ಶಾಲೆಯ ವೇಳಾ ಪಟ್ಟಿಯಲ್ಲಿ ಸ್ಥಳೀಯ ಪರೀಕ್ಷಾ ಕೇಂದ್ರದ ಶಾಲೆಯ ಮುಖ್ಯಶಿಕ್ಷಕರಿಗೆ ಮುಖ್ಯ ಅಧೀಕ್ಷಕರ ಜವಾಬ್ದಾರಿಯನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ತಾಳಿಕೋಟಿಯ ಎರಡು ಪರೀಕ್ಷಾ ಕೇಂದ್ರಗಳು ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಿಗೆ ಆಯಾ

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಹೈದರಾಬಾದ್: ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್‌ ರಾಜ್, ನಟರಾದ ವಿಜಯ್‌ ದೇವರಕೊಂಡ, ರಾಣಾ ದಗ್ಗುಭಾಟಿ ಸೇರಿದಂತೆ 25ಕ್ಕೂ ಹೆಚ್ಚು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ 25 ನಟ,ನಟಿಯರ ವಿರುದ್ದ ತೆಲಂಗಾಣದಲ್ಲಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸಂಬ್ರಿಟಿಗಳು ಮತ್ತು ಪ್ರಭಾವಿಗಳಲ್ಲಿ ಪ್ರಣೀತಾ, ನಿಧಿ ಅಗರ್‌ವಾಲ್,