Rampur Public Fund Festival Committee completes 58 years

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ಮುಧೋಳ : ರನ್ನನಗರಿ ಮುಧೋಳದ ಗಣೇಶ ಉತ್ಸವಕ್ಕೆ ತನ್ನದೆಯಾದ ಇತಿಹಾಸ ಇದೆ. 58 ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರು ಸೇರಿ ಮೊದಲ ಭಾರಿಗೆ ಇಲ್ಲಿನ ರಾಂಪುರ ಗಲ್ಲಿಯಲ್ಲಿ ಹಿಂದು ಧರ್ಮ ಜಾಗೃತಿಗಾಗಿ ಸಾರ್ವಜನಿಕ ಗಣೇಶ ಉತ್ಸವ ಪ್ರಾರಂಭವಾಗಿದ್ದು ಒಂದು ವರ್ಷವೂ ಬಿಡದೆ ನಡೆದುಕೊಂಡು ಬಂದ ನಗರದ ಮೊದಲ ಮಹಾಗಣಪತಿ ಉತ್ಸವ ಇದಾಗಿದೆ.

ನಗರಕ್ಕೂ ಪಕ್ಕದ ಮಹಾರಾಷ್ಟ್ರದ ಕೆಲವು ನಗರಗಳಿಗೂ ಆರ್ಥಿಕ, ಸಾಮಾಜಿಕ, ಕೌಟಿಂಬಿಕ, ಧಾರ್ಮಿಕ ಅವಿನಾಭಾವ ಸಂಬಂಧಗಳಿಂದ ಇಲ್ಲಿ ಹೆಚ್ಚಾಗಿ ಮರಾಠಿ ಭಾಷಿಕರು ಹೆಚ್ಚಾಗಿದ್ದ ಸಮಯವದು, ನಗರದಿಂದ ಇಬ್ಬರು ವ್ಯಕ್ತಿಗಳು ಪ್ರತಿನಿತ್ಯ ಪುಣೆ ನಗರಕ್ಕೆ ವಿವಿದ ವಾಣಿಜ್ಯ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಚಾಲಕರಾಗಿ ಕಾಯಕ ಮಾಡುವಾಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರಿ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವ ನೋಡಿ ಬಂದು ನಮ್ಮೂರಲ್ಲಿ ಯಾಕೆ ಮಾಡಬಾರದು ಎಂದು ತಿರ್ಮಾನಿಸಿ ಪ್ರಾರಂಭಿಸಿದ ಸಾರ್ವಜನಿಕ ಗಜಾನನ ಉತ್ಸವ ಸಮಿತಿಯ ಗಣೇಶನೇ ಮುಧೋಳದ ಪ್ರಪ್ರಥಮ ಸಾರ್ವಜನಿಕ ಗಣಪತಿ.

ಕೇವಲ ಕೆಲವು ಸಮುದಾಯದ ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುವ ಈ ಸಂಪ್ರದಾಯವನ್ನು ಪ್ರಪ್ರಥಮವಾಗಿ ಸಾರ್ವಜನಿಕವಾಗಿ 1968ರಲ್ಲಿ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶ ಉತ್ಸವ ನಂತರ ಕಡಿಮೆಯಾಗಿ ನಂತರ ಅರವತ್ತರ ದಶಕದಲ್ಲಿ ಮತ್ತೆ ಪ್ರಾರಂಭವಾಯಿತು. ಅಂತಹ ಸಮಯದಲ್ಲಿ ಮೊದಲಿನಿಂದಲು ಹಿಂದು ಸಂಪ್ರದಾಯ, ಸಂಸ್ಕೃತಿಗೆ ಹೆಚ್ಚು ಪ್ರಾದ್ಯಾನ್ಯತೆ ಕೊಡುತ್ತಿದ್ದ ಮುಧೋಳ ಸಂಸ್ಥಾನದ ಬಾಜಿರಾವ್, ವೆಂಕಟೇಶ, ಮಾಲೋಜಿರಾವ್ ಘೋರ್ಪಡೆ ರಾಜರ ಕುಟುಂಬ ಸ್ವತಂತ್ರ್ಯ ನಂತರವೂ ಈ ತರಹದ ಸಂಪ್ರದಾಯಕ್ಕೆ ಆಧ್ಯತೆ ನೀಡುತ್ತಾ ಬಂದಿದೆ.

ಇತಿಹಾಸ: ಟ್ರಕ್ ಚಾಲಕರಾಗಿದ್ದ ಇಬ್ಬರನ್ನು ಕರೆದುಕೊಂಡು ಮಹಾರಾಷ್ಟದ ಪುಣೆ ನಗರದಲ್ಲಿ ಗಣೇಶ ಉತ್ಸವ ನೋಡಿಕೊಂಡು ಬಂದ ರಾಂಪುರ ಗಲ್ಲಿಯ ಬ್ರಾಹ್ಮಣ ಹಾಗೂ ಮರಾಠಾ ಸಮುದಾಯ ಜೊತೆಗೆ ಇತರ ಹಿಂದು ಮುಖಂಡರು 1968ರಲ್ಲಿ ಪ್ರಥಮ ಭಾರಿಗೆ ಸಾರ್ವಜನಿಕ ಗಜಾನನ ಉತ್ಸವ ಸಮಿತಿ ಸ್ಥಾಪನೆ ಮಾಡಿ ಗಣೇಶ ಉತ್ಸವವನ್ನು ಬಹು ವಿಜೃಂಭಣೆಯಿಂದ ಪ್ರಾರಂಭಿಸಿದರು. ಮೊದಲ ವರ್ಷ ಐದು ದಿನದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಸಲುವಾಗಿ ಮುಷ್ಟಾನ ಭೋಜನವನ್ನು ಸಾರ್ವಜನಿಕರಿಗೆ ದಾರಿ ಹೋಕರಿಗೆ ಹಾಕಿ ಖ್ಯಾತಿ ಪಡೆದ ಈ ಸಮಿತಿ ಅಂದಿನಿಂದ ಇಂದಿನವರೆಗೆ ಏಳು ದಿನದ ಗಣೇಶ ಉತ್ಸವದ ವಿಸರ್ಜನ ಮುಂಚೆ ಅದೇ ಮೃಷ್ಠಾನ್ನ ಭೋಜವನನ್ನು ಹಾಕುತ್ತಾ ಬಂದಿದ್ದಾರೆ. ಈ ಗಣೇಶ ಉತ್ಸವದಲ್ಲಿ ಪ್ರಸಾದ ಸವಿಯದ ಮುಧೋಳಿಗರು ಇಲ್ಲ, ಎನ್ನಬಹುದಾದಷ್ಟು ಇಲ್ಲಿನ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ.

ಮಹಾರಾಷ್ಟ್ರದ ಸಂಪ್ರದಾಯ ಹಾಗೂ ಸಂಘಟನೆ ಮತ್ತು ಹಿಂದು ಧರ್ಮದ ಉಳಿವಿಗಾಗಿ ಸ್ಥಾಪನೆಯಾದ ಈ ಗಣೇಶ ಉತ್ಸವ ಸಮಿತಿ ಅದರಂತೆ ಆ ಉದ್ದೇಶ ಈಡೇರಿಕೆಗಾಗಿ ಸಾಕಷ್ಟು ಯತ್ನಗಳು ನಡೆಯುತ್ತಾ ಬಂದಿವೆ. ಹೀಗಾಗಿ ಈ ಗಣೇಶ ಎಲ್ಲರಿಗೂ ಮಾದರಿಯಾಗಿದ್ದಾನೆ. ಜೊತೆಗೆ ತೆರಬಂಡಿ, ವಿದ್ಯಾರ್ಥಿಗಳ ನೃತ್ಯ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಸೇರಿದಂತೆ ಐವತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಸೈಕಲ್ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ಐವತ್ತನೆಯ ವರ್ಷದ ಸಂಭ್ರಮಾಚರಣೆಯಲ್ಲಿ ಲೋಗೋ ಬಿಡುಗಡೆ ಕಾರ್ಯ ಪ್ರಾರಂಭವಾಗಿದ್ದು ಅಂದಿನಿಂದ ಇಂದಿನವರೆಗೆ ಮುಂಚಿತವಾಗಿ ಲೋಗೋ ಬಿಡುಗಡೆ ಕಾರ್ಯಕ್ರಮ ಜರುತ್ತದೆ. ಮುಂಬೈದಲ್ಲಿನ ಲಾಲಬಾಗ್ ರಾಜಾ ರೀತಿಯಲ್ಲಿ ಇಲ್ಲಿ ಡಬಲ್ ಶೇಟ್ ಗಣೇಶ ಸ್ಥಾಪನೆ ಸಾಮಾನ್ಯವಾಗಿದೆ.

ಸಂಘಟಿಕರು, ರಾಂಪುರ ಗಲ್ಲಿಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದರಿಂದ ಈ ಉತ್ಸವವನ್ನು ದಾಖಲಿಸಿ ಇಂದಿನವರೆಗೆ ನಡೆಸಿಕೊಂಡು ಬಂದಿರುವ ಅಣ್ಣಾರಾವ್ ಭಕ್ಷಿ, ಭೀಮರಾವ್ ಟಂಕಸಾಲಿ, ಮಾಧವರಾವ್ ಮಸೂರಕರ, ಬಾಬುರಾವ ಮಾನೆ, ಶಂಕರ ಘೋರ್ಫಡೆ, ರಾಘವೇಂದ್ರ ಭಕ್ಷಿ, ಡಾ.ಜಿ.ಎಸ್..ಬೀಡೆ, ಮಾಜಿ ಎಂ.ಪಿ ಎಸ್. ಟಿ. ಪಾಟೀಲ್ ರತ್ನಾಕರ ಮಸೂರಕರ ಅಂದು ಪ್ರಾರಂಭಿಸಿದ ಗಣೇಶ ಉತ್ಸವವನ್ನು ಅವರ ಕುಟುಂಬಸ್ತರು ಇಂದಿಗೂ ಈ ಗಲ್ಲಿಯ ಮುಖಂಡರು ಯುವಕರು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿರುತ್ತಾರೆ.

“ಹಿಂದು ಸಂಪ್ರದಾಯ,ಸಂಸ್ಕೃತಿ ಉಳಿದು ಬೆಳೆಯುವ ಸದುದ್ದೇಶದಿಂದ ಕಳೆದ ೫೮ ವರ್ಷಗಳಿಂದ ಈ ಗಣೇಶ ಉತ್ಸವ ಸಮಿತಿ ಕಾರ್ಯ ಮಾಡಿ ರಾಜ್ಯ ಮಟ್ಟದ ತೆರಬಂಡಿ,ಸೈಕಲ್ ರೇಶ ಸ್ಪರ್ಧೆಗನ್ನು ಆಯೋಜನೆ ಮಾಡುತ್ತಾ ಬಂದಿದೆ”
ವಸಂತ ಮಾನೆ
ವೆಂಕಟೇಶ ಗುಡೆಪ್ಪನವರ

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ