ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!

ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!



ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ನಿವಾಸಿ ಬುಡ್ಡೇಸಾಬ ಚಪ್ಪರಬಂದ ಸಿಂಜೆಂಟಾ ಕಂಪನಿಯ (Syngenta Company) ಮೋಸದ ವಿರುದ್ಧ ಕಾರ್ಮಿಕ ಇಲಾಖೆಯ ಆಯುಕ್ತರಿಗೆ, ಇಲ್ಲಿನ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಸಲ್ಲಿಸಿದ ಮನವಿಯಲ್ಲಿ ಮೂರು ವರ್ಷಗಳ ಕಾಲ “ಸಿಂಜೆಂಟಾ” (Syngenta Company) ಎಂಬ ಖಾಸಗಿ ಕಂಪನಿಯಲ್ಲಿ ಎಂ.ಡಿ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಕರ್ನಾಟಕದ ಕಂಪನಿಯ ನನ್ನ ಮೇಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನನ್ನು ದಿನಾಂಕ 06-03-2024 ರಂದು ನನಗೆ ನೋಟಿಸ್ ಪಿರಿಯಡ್ ನೀಡದೇ, ಕಾರ್ಮಿಕ ಕಾಯ್ದೆ ನಿಯಮಗಳನ್ನು ಅನುಸರಿಸದೇ ಹಾಗೂ ನನ್ನಿಂದ ರಾಜೀನಾಮೆ ಪಡೆಯದೇ ಏಕಾಏಕಿ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Join Our Telegram: https://t.me/dcgkannada

ಈ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲಾ ಕಾರ್ಮಿಕ ಸಂಧಾನಾಧಿಕಾರಿಗಳಿಗೆ ದೂರನ್ನು ನೀಡಿದ್ದೇನೆ.ನನ್ನ ದೂರಿನನ್ವಯ ಸಂಧಾನಾಧಿಕಾರಿಗಳು ಕಂಪನಿಯವರಿಗೆ ಮೊದಲನೇ ನೋಟಿಸ್‌ನ್ನು 27-3-2024 ರಂದು ಜಾರಿ ಮಾಡಿ ಅದರಲ್ಲಿ ದಿನಾಂಕ 15-4-2024 ರಂದು ಸಂಧಾನ ಸಭೆ ನಿಗದಿ ಮಾಡಿದ್ದರು.ಅದು ಕಂಪನಿಯ ಅಧಿಕಾರಿಗಳು ಹಾಗೂ ಅರ್ಜಿದಾರನಾದ ನನ್ನ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದದ್ದರಿಂದ ಅದು ವಿಫಲವಾಯಿತು.

ಇದನ್ನೂ ಓದಿ: ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ! ಮೊಟ್ಟೆ ಕೊಟ್ಟು ಕಿತ್ತುಕೊಂಡವರನ್ನು ಮನೆಗೆ ಕಳುಹಿಸಿದ ಸಚಿವೆ ಹೆಬ್ಬಾಳ್ಕರ್ ಈಗ ಏನು ಮಾಡ್ತಾರೆ? (ವಿಡಿಯೋ ನೋಡಿ)

ನಂತರ ಎರಡನೇ ಸಭೆಯನ್ನು 24-5-2024 ರಂದು ಮತ್ತೆ ಸಂಧಾನಕ್ಕೆ ಕರೆಯಲಾಯಿತು.ಅಂದಿನ ದಿನ ಕಂಪನಿಯವರು ಕೆಲಸ ಮತ್ತು ಬಾಕಿ ಇರುವ ಎರಡೂವರೆ ತಿಂಗಳ ಸಂಬಳ ನೀಡುತ್ತೇವೆ. ಆದರೆ ಪ್ರೋತ್ಸಾಹಕ ಹಣ(ಇನ್ಸೆಂಟಿವ್) ನೀಡುವುದಿಲ್ಲ ಎಂದು ವಾದ ಮಾಡಿದರು. ಎಲ್ಲ ವಿಚಾರಗಳನ್ನು ಗಮನಿಸಿದ ಮಾನ್ಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು,ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಪತ್ರವೊಂದನ್ನು ಬರೆದರು.ಅದಕ್ಕೆ ಸಿಂಜೆಂಟಾ ಕಂಪನಿಯ ಅಧಿಕಾರಿಗಳು ಸಹಿ ಮಾಡಲು ಧಿಕ್ಕರಿಸಿ ವಾಪಸ್ ಹೋದರು.

ಮತ್ತೆ ಸಂಧಾನ ಅಧಿಕಾರಿಗಳು 24-6-2024 ರಂದು ಆ ಸಂಧಾನ ಸಭೆಗೆ ಕಂಪನಿಯವರು ಬಾರದೇ ಮ್ಯಾನಪವರ್ ಎಂಬ ಏಜೆನ್ಸಿಯವರನ್ನು ಕಳುಹಿಸಿ ನಿಮಗೆ ಕೆಲಸ ನೀಡಲಾಗುವುದಿಲ್ಲ.ನಿಮ್ಮ ಬಾಕಿ ಇರುವ ಪ್ರೋತ್ಸಾಹಕ ಹಣವನ್ನು ಮಾತ್ರ ನೀಡುತ್ತೇವೆ ಎಂದು ಸೂಚಿಸಿದರು.

ಆಗ ನನ್ನ ಸಂಬಳವನ್ನಾದರೂ ಇವರಿಂದ ಪಡೆದುಕೊಂಡು ಇವರು ತಪ್ಪು ಮಾಡಿದ್ದನ್ನು ಸಾಬೀತುಪಡಿಸುವಲ್ಲಿ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಅದರಂತೆ ದೀರ್ಘ ಕಾಲದ ನಂತರ ಅಂದರೆ 30-6-2024 ರಂದು ಮ್ಯಾನಪವರ್ ಏಜೆನ್ಸಿಯವರು ಬಂದು ಮೂರುವರೆ ತಿಂಗಳ ಸಂಬಳ ಮತ್ತು ನನ್ನ ಪ್ರೋತ್ಸಾಹಕ ಹಣವನ್ನು ಚೆಕ್(ಚೆಕ್ ನಂ.664898) ರೂಪದಲ್ಲಿ ನೀಡಿದ್ದಾರೆ.

ಈ ಪ್ರಕ್ರಿಯೆಯನ್ನು ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕೇವಲ ನನ್ನ ಸಂಬಳ ಮತ್ತು ಪ್ರೋತ್ಸಾಹಕ ಹಣವನ್ನು ಕೊಡಿಸುವ ಪ್ರಕ್ರಿಯೆ ಎಂದು ಪರಿಗಣಿಸಿ ಕಂಪನಿಯವರಿಗೆ ನನ್ನ ಕೆಲಸವನ್ನು ಮರಳಿ ನೀಡಲು ಸೂಚಿಸಬೇಕು. ಏಕಾಏಕಿ ಕೆಲಸದಿಂದ ತಗೆದು ಹಾಕಿದ್ದರಿಂದ ನನ್ನ ಕುಟುಂಬದ ಉಪಜೀವನ ನಡೆಸಲು ಕಷ್ಟಕರವಾಗಿತ್ತು. ಸದರಿ ವಿಷಯವಾಗಿ ಕಂಪನಿಯಿಂದ ನನಗಾದ ಅನ್ಯಾಯವನ್ನು ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ಉಸ್ತುವಾರಿ ಸಚಿವರು,ಕಾರ್ಮಿಕ ಇಲಾಖೆಯ ಆಯುಕ್ತರು ಇವರೆಲ್ಲರ ಗಮನಕ್ಕೆ ತಂದಿರುತ್ತೇನೆ. ಮಾನ್ಯ ದಯಾಳುಗಳಾದ ತಾವು ನನಗಾದ ಈ ಅನ್ಯಾಯವನ್ನು ಸರಿಪಡಿಸಿ ಕೆಲಸ ಕೊಡಿಸಬೇಕು ಇಲ್ಲದಿದ್ದಲ್ಲಿ ಸಿಂಜೆಂಟಾ ಕಂಪನಿಯ ಅಧಿಕಾರಿಗಳ ಏಕಚಕ್ರಾಧಿಪತ್ಯದ ಆಡಳಿತದ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆದುಕೊಳ್ಳಲು ಅಧಿಕೃತವಾಗಿ ಇಲಾಖೆಯಿಂದ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳುವುದಾಗಿ ತಹಶೀಲ್ದಾರ್‌ಗೆ ಶನಿವಾರ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

Latest News

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ