ಮುದ್ದೇಬಿಹಾಳ : ಪಟ್ಟಣದ ಜನನಿಬೀಡ ಪ್ರದೇಶವಾದ ಅಂಬೇಡ್ಕರ್ ಸರ್ಕಲ್ ಹತ್ತಿರದಲ್ಲಿರುವ ಬೇಕರಿಯೊಂದರ ಬಾಗಿಲು ಬೀಗ ಮುರಿದು ಒಳ ಹೊಕ್ಕಿರುವ ಕಳ್ಳನೋರ್ವ ತನಗೆ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಅ.21ರ ರಾತ್ರಿ ನಡೆದಿದೆ.
ಪಟ್ಟಣದ ನಿವಾಸಿ ಅಲ್ಲಾಭಕ್ಷ ಬಿದರಕೋಟಿ ಎಂಬುವರಿಗೆ ಸೇರಿದ ಕೇಕ್ ಪ್ಯಾಲೇಸ್ ಬೇಕರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಘಟನಾವಳಿಯ ದೃಶ್ಯಗಳು ಅವರದ್ದೇ ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಂಗಡಿಕಾರ ಅಲ್ಲಾಭಕ್ಷ ಬಿದರಕೋಟಿ, ಅಂಗಡಿಯಲ್ಲಿಟ್ಟಿದ್ದ 30 ಸಾವಿರ ರೂಪಾಯಿಗಳನ್ನು ಕದ್ದೊಯ್ದಿದ್ದಾನೆ.ಶೆರ್ಸ್ನ ಬೀಗ ಮುರಿಯುವುದು, ಒಳಗಡೆ ಹೋಗಿ ಕ್ಯಾಶ್ ಕೌಂಟರ್ನಿAದ ಬ್ಯಾಗ್ ತೆಗೆದುಕೊಳ್ಳುವುದು,ಬಾಯಾರಿಕೆ ಆದಾಗ ನೀರಿನ ಬಾಟಲ್ನ್ನು ಕಳುವು ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಪಿಎಸ್ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿ.ಎಸ್.ಐ ಆರ್.ಎಲ್.ಮನ್ನಾಭಾಯಿ
ಅವರನ್ನು ಮಾತನಾಡಿಸಿದಾಗ, ಘಟನೆ ಗಮನಕ್ಕೆ ಬಂದಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಅತ್ಯಂತ ಜನನಿಬೀಡ ಪ್ರದೇಶದಲ್ಲಿ ಮಧ್ಯರಾತ್ರಿ ಯಾರ ಭಯವೂ ಇಲ್ಲದೇ ಮುಖಕ್ಕೆ ಮಾಸ್ಕ್ ಕೂಡ ಧರಿಸದೇ ಕಳುವು ಮಾಡಿರುವುದನ್ನು ಕಂಡಾಗ ಈತ ಬೇರೆ ಜಿಲ್ಲೆಯವನೇ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಬೇಕರಿ ಅಂಗಡಿಯಲ್ಲಿ ಕಳ್ಳತನ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಬೇಕರಿ ಅಂಗಡಿಯಲ್ಲಿ ಕಳ್ಳತನ
Latest News
ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ
ಬಾಗಲಕೋಟೆ: ಎರಡು ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು
ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ
ಬಾಗಲಕೋಟೆ: ಎರಡು ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ
ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ
ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ
ಮುದ್ದೇಬಿಹಾಳ : ಕೆಬಿಜೆಎನ್ಎಲ್ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ
ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ
ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ
ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.
ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ