ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಬಿಎಲ್ಓಗಳ ಸಹಕಾರದಿಂದ ಉತ್ತಮ ಶೇ.100 ರಷ್ಟು ಸಾಧನೆ ತೋರಿದ ಮೇಲ್ವಿಚಾರಕರಾದ ಬಸವರಾಜ ಮಾದರ ನಾಲತವಾಡ, ಮಲ್ಲಿಕಾರ್ಜುನ ಅಮರವಾದಗಿ ತಂಗಡಗಿ,ಬಿಎಲ್ಓಗಳಾದ ಬಿ.ಎಚ್.ಭಗವತಿ,ಖಾಜಾಬಿ ಅವಟಿ,ದೇವರೆಡ್ಡಿ ಜಾವೂರ,ನೀಲಮ್ಮ ಹಿರೇಮಠ,ರೇಣುಕಾ ಬಾರಡ್ಡಿ,ಚೆನ್ನಮ್ಮ , ಮುತ್ತಣ್ಣ ತಳವಾರ,ಎಂ.ಎ.ನಾಡದಾಳ,ಎA.ಆಯ್.ಹಾವರಗಿ,ಮಹಾದೇವಿ ಹವಾಲ್ದಾರ, ಬಸವರಾಜ ರೂಢಗಿ,ಬಸಮ್ಮ ಕುಂಬಾರ,ಬಸವರಾಜ ಕಲ್ಲಪ್ಪಣ್ಣವರ,ಹೀನಾಕೌಸರ ಕಳ್ಳಿ, ಮಹಾಂತಮ್ಮ ಗೌಡರ,ಶಿವರಾಜ ಹಿರೇಲಿಂಗಣ್ಣವರ,ಮೋಹನ ಚವ್ಹಾಣ,ಅಜ್ಜಿಸಾಬ ಮುತ್ತಣ್ಣವರ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಕೀರ್ತಿ ಚಾಲಕ್,ಶಿರಸ್ತೇದಾರ ಹಣಮಂತಪ್ಪ ಶಿವಣಗಿ,ಉಪ ತಹಶೀಲ್ದಾರ್ ಎನ್.ಬಿ.ದೊರೆ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ,ಚುನಾವಣಾ ಶಾಖೆ ಸಿಬ್ಬಂದಿ ಮಹೇಶ ಪಾಟೀಲ ಮೊದಲಾದವರು ಇದ್ದರು.







