ಮುದ್ದೇಬಿಹಾಳ : ಸನ್ 2025-26ನೇ ಸಾಲಿನ ವರದಿ ವರ್ಷದಲ್ಲಿ ಸಂಘದ ಆದಾಯ ಒಟ್ಟು 1.04 ಕೋಟಿ ರೂ.ಗಳಷ್ಟಾಗಿದ್ದು ಖರ್ಚು-ವೆಚ್ಚ ಕಳೆದ ಒಟ್ಟು 13.56 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿದರು.
ಪಟ್ಟಣದ ಬಸವ ಗಾರ್ಡನ್ ಮುಂಭಾಗದಲ್ಲಿ ಗುರುವಾರ ನಡೆದ ಸಂಘದ 18 ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನುದ್ದೇಶಿ ಅವರು ಮಾತನಾಡಿದರು.
ಸಮಾಜದ ಹಾಗೂ ಸಂಘದ ಹಿರಿಯರ ಪರಿಶ್ರಮದ ಫಲದಿಂದ ಸಂಘ ಸ್ಥಾಪಿಸಿದ್ದು ಸಹಕಾರಿ ಸಂಘದಲ್ಲಿ ಸದ್ಯ ಸಾಕಷ್ಟು ನಿಯಮಗಳು ಬದಲಾವಣೆ ಆಗಿವೆ. ಪಡೆದಂತ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು.ಸಾಲಗಾರನಿಗಿಂತ ಜಾಮೀನುದಾರನ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಹೆಸ್ಕಾಂ ಎಇಇ ಆರ್.ಆರ್.ಹಂಡಿ,ಸAಘದ ನಿರ್ದೇಶಕ ಸಿ.ಎಂ.ಹಾವರಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಶೋಭಾ ಅಕ್ಕನವರು ನಶೆಮುಕ್ತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಎಸ್.ಕಡಿ, ನಿರ್ದೇಶಕರುಗಳಾದ ಎ.ಎಸ್.ಕೋಟಿ, ಬಿ.ಎಸ್.ಅಮರಾವತಿ, ಜಿ.ಎಸ್.ಕಡಕೋಳ, ಸಿ.ಎಸ್.ಬೇನಾಳ, ಬಿ.ಸಿ.ಕಲ್ಲೂರ,ಶ್ರೀಮತಿ ಜಿ.ಎಂ. ಉಪ್ಪಲದಿನ್ನಿ, ಎಸ್.ಜಿ.ಚಿತ್ತವಾಡಗಿ,ಎಂ.ಬಿ.ಕೋಲಕಾರ,ಎA.ಎA.ಗAಜಿಹಾಳ, ಬಿ.ಬಿ.ಹೆಗಡೆ, ಗೌರವ ನಿರ್ದೇಶಕರಾದ ಎಸ್.ಬಿ.ಹೊನ್ನಳ್ಳಿ,ಡಾ.ಎ.ಎ.ಚೌಧರಿ ಸೇರಿದಂತೆ ಪದಾಧಿಕಾರಿಗಳು ಸಂಘದ ಸದಸ್ಯರು ಶೇರುದಾರರು, ಸಿಬ್ಬಂದಿಗಳು ಭಾಗವಹಿಸಿದ್ದರು.
ವಾರ್ಷಿಕ ವರದಿ ವಾಚನವನ್ನು ವ್ಯವಸ್ಥಾಪಕ ಎಸ್.ಎಸ್.ಮಾಗಿ ಮಾಡಿದರು.ಸಿಬ್ಬಂದಿ ವಾಯ್.ಎ.ಹುಬ್ಬಳ್ಳಿ,ಎಸ್.ಆಯ್.ಶಾಬಾದಿ,ಬಿ.ಎಸ್.ಸೋಬಾನದ,ಬಿ.ಎಸ್.ಕುಂಬಾರ,ಎಚ್.ಸಿ.ಕಣಕಾಲ,ಎಚ್.ಎಸ್.ಹೊಳಿ,ಎಸ್.ಜಿ.ಅAಟರದಾನಿ ಮೊದಲಾದವರು ಇದ್ದರು.







