ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡರು ಸತತ ಪಕ್ಷದ ಮೇಲೆ ಹಾಕಿದ ಒತ್ತಡ ಹಾಗೂ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಶಾಸಕ ಸಿ.ಎಸ್.ನಾಡಗೌಡರ ಪರಿಶ್ರಮದಿಂದ ಬರಪೀಡಿತ ತಾಲ್ಲೂಕು ಘೋಷಣೆಯಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಉದ್ಯಮಿ ಶರಣು ಸಜ್ಜನ ಮಾತನಾಡಿ, ಶಾಸಕ ನಾಡಗೌಡರ ಪ್ರಯತ್ನದ ವಿಶೇಷ ಶ್ರಮದಿಂದ ಬರಪೀಡಿತ ತಾಲ್ಲೂಕು ಘೋಷಣೆ ಆಗಿದೆ.ರೈತರ ಹೆಸರಲ್ಲಿ ನಾಟಕ ಮಾಡುವವರಿಂದ ಆಗಿಲ್ಲ ಎಂದು ಹೇಳಿದರು. ಯುವ ಮುಖಂಡ ಮಹ್ಮದರಫೀಕ ಶಿರೋಳ ಮಾತನಾಡಿದರು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮುಖಂಡರಾದ ಸಂಗನಗೌಡ ಬಿರಾದಾರ,ಸಿಕಂದರ ಜಾನ್ವೇಕರ,ಬಾಪುಗೌಡ ಪೀರಾಪೂರ,ಮುತ್ತು ಕಡಿ,ಬಸವರಾಜ ಗೋನಾಳ,ರಂಜಾನ ನದಾಫ,ಗೋಪಿ ಮಡಿವಾಳರ,ಸಂತೋಷ ನಾಯ್ಕೋಡಿ,ಯಲ್ಲಪ್ಪ ನಾಯ್ಕಮಕ್ಕಳ,ಸೋಯೇಬ ಪಟೇಲ ಮೊದಲಾದವರು ಇದ್ದರು.
ಬರ ಬಿದ್ದರೂ ಪಟಾಕಿ ಸಿಡಿಸಿದ ಕಾರ್ಯಕರ್ತರು:
ಮಳೆ,ಬೆಳೆ ಇಲ್ಲದೇ ಹೊಲ ನೋಡದ ಪರಿಸ್ಥಿತಿಯಲ್ಲಿ ಅನ್ನದಾತನಿದ್ದಾನೆ.ಬರಪೀಡಿತ ತಾಲ್ಲೂಕು ಘೋಷಣೆಯ ಪೈಪೋಟಿಗೆ ಬಿದ್ದಿರುವ ಎರಡು ರಾಷ್ಟಿçÃಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ತಮ್ಮ ನಾಯಕರ ಹೋರಾಟದಿಂದಲೇ ಬರಪೀಡಿತ ತಾಲ್ಲೂಕು ಘೊಷಣೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುoಖವಾಗಿ ಸಂದೇಶಗಳನ್ನು ಹರಿಬಿಡುತ್ತಲೇ ಇದ್ದಾರೆ.ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಬರಪೀಡಿತ ಪಟ್ಟಿಯಲ್ಲಿ ಮುದ್ದೇಬಿಹಾಳ ಹೆಸರು ಬಂದಿದ್ದಕ್ಕೇನೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಸಾಮಾನ್ಯ ಜನರು ಇದೇನು ಯಾರಾದರೂ ಪಕ್ಷದವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೋ,ದೇಶದ ಯಾವುದಾದರೂ ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯಿತೆಂದು ಇವರು ಸಂಭ್ರಮಾಚರಣೆ ಮಾಡಿದ್ದಾರೆ ಎಂಬುದು ಹಲವು ಬಗೆಯಲ್ಲಿ ಚರ್ಚೆಯ ವಸ್ತುವಾಗಿದೆ.ರೈತರು ದುಃಖದಲ್ಲಿದ್ದರೂ ಇವರು ವಿಜಯೋತ್ಸವ ಆಚರಿಸಿರುವುದು ಅದು ಸ್ವಪಕ್ಷದ ಸರ್ಕಾರ ಇದ್ದಾಗಲೇ ಈ ಕಾರ್ಯ ಮಾಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿವೆ.







