ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ ಮನೆಯ ಹಕ್ಕುಪತ್ರ ಮತ್ತು ಉತಾರೆ ಹಾಗೂ ಮೂಲಭೂತ ಸೌರ್ಕಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಪಿಲೇಕೆಮ್ಮ ನಗರದ ನಿವಾಸಿಗಳು ಅಪರ ಜಿಲ್ಲಾಧಿಕಾರಿಗಳಾದ ಔದ್ರಾಮ್ ಅವರಿಗೆ ಈಚೇಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸರ್ಕಾರದಿಂದ 24-03-2020 ಆದೇಶದಂತೆ ಕೊಳಗೇರಿ ಮಂಡಳಿಯವರಿಗೆ ಸರ್ವೆ ಮಾಡಿ ಹಕ್ಕುಪತ್ರ ಮತ್ತು ನಿಗದಿತ ಅವಧಿಯೊಳಗೆ ಎಲ್ಲಾ ಸ್ಲಂ ನಿವಾಸಿಗಳಿಗೆ ಉತಾರೆ ಮತ್ತು ಮೂಲಭೂತ ಸೌರ್ಕಾಗಳನ್ನು ನೀಡಲು ಸರಕಾರ ಆದೇಶ ಮಾಡಿದೆ.ಅದರಂತೆ ಕೊಳಗೇರಿ ಮಂಡಳಿಯವರು ಸರ್ವೆ ಮಾಡಿಸಿ ಕೆಲವರಿಗೆ ಹಕ್ಕುಪತ್ರ ನೀಡಿ ಐದಾರು ವರ್ಷಗಳು ಕಳೆದರೂ ಬಹುತೇಕ ಜನರಿಗೆ ಉತಾರೆ ಹಾಗೂ ಇನ್ನುಳಿದ ಹಕ್ಕುಪತ್ರಗಳನ್ನು ನೀಡಿಲ್ಲ.ಸಾಕಷ್ಟು ಸಲ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರೂ ಕೂಡ ಸಂಬAಧಿಸಿದ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದು ಇದರಿಂದ ಸ್ಲಂ ನಿವಾಸಿಗಳ ಮನೆ ದುರಸ್ತಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಯ ಖರ್ಚುವೆಚ್ಚ , ಇನ್ನಿತರರ ಶುಭ ಸಮಾರಂಭಗಳಿಗಾಗಿ ಬ್ಯಾಂಕಿಗೆ ಸಾಲ ಪಡೆಯಲು ಅರ್ಜಿ ಕೊಟ್ಟರೆ ಬ್ಯಾಂಕಿನವರು ಮನೆಯ ಉತಾರೆ ಕೇಳುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರವು ಸ್ಲಂ ನಿವಾಸಿಗಳಿಗಾಗಿಯೇ ಸಾಕಷ್ಟು ಯೋಜನೆಗಳು ಜಾರಿಗೊಳಿಸಿದ್ದರೂ ಅದರ ಪ್ರಯೋಜನ ಇಲ್ಲಿನ ನಿವಾಸಿಗಳಿಗೆ ದೊರೆಯುತ್ತಿಲ್ಲ.ವಾರ್ಡಗಳ ರಸ್ತೆಗಳಂತೂ ಹದಗೆಟ್ಟಿದ್ದು ಚರಂಡಿಗಳು ತುಂಬಿ ಹರಿದರೂ ಸಂಬAಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.ಈ ವಿಷಯವಾಗಿ ಶಾಸಕ ಸಿ.ಎಸ್.ನಾಡಗೌಡರು ಸ್ಲಂ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಕೂಡ ಕೊಳಗೇರಿ ಮಂಡಳಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ಬಾಕಿ ಉಳಿದಿರುವ ಹಕ್ಕುಪತ್ರ ಹಾಗೂ ಉತಾರೆಗಳನ್ನು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಚಂದ್ರಶೇಖರ್ ಎಲ್. ಬಿಳೇಭಾವಿ, ಪ್ರಭಯ್ಯ ಮಠ, ಅಜರುದ್ದೀನ್ ಮೂಲಿಮನಿ, ರಾಜೇಸಾಬ ದೇವೂರ್, ಸಾಹೇಬಲಾಲ ರಿಸಲ್ದಾರ್, ರಾಮು ಲಮಾಣಿ, ಡೊಂಗರಿಸಾಬ್ ಕೂಡಗಿ, ಗುಲಾಬಶಾ ಮಕಾನದಾರ್ , ಸಿದ್ಧಾರ್ಥ್ ಎ. ಪಾದಗಟ್ಟಿ, ಬಸವರಾಜ್ ಕಟ್ಟಿ,ವೈ.ವೈ.ಮಲಘಾಣ, ಶಾಂತಗೌಡ ಪಾಟೀಲ್, ಎಂ. ಎಚ್. ಬಡಿಗೇರ್ ಮೊದಲಾದವರು ಮನವಿಗೆ ಸಹಿ ಮಾಡಿದ್ದಾರೆ.







