ಮುದ್ದೇಬಿಹಾಳ : ಸಮಾಜದಲ್ಲಿ ನಮಗೆ ದೊರೆಯುತ್ತಿರುವ ಗೌರವ,ಸನ್ಮಾನಗಳು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಹಿರಿಯ ಸದಸ್ಯ ಅಬ್ದುಲಗಫೂರ ಮಕಾನದಾರ ಹೇಳಿದರು.
ಪಟ್ಟಣದ ಅಮಾನತ್ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಜುಮನ್ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಹಳ ವರ್ಷಗಳ ನಂತರ ಅಂಜುಮನ್ ಕಮೀಟಿಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದೆ.ಇಸ್ಲಾಂ ಸಮಾಜದ ಏಳ್ಗೆಗೆ ಎಲ್ಲರೂ ಪಣ ತೊಟ್ಟು ಶ್ರಮಿಸೋಣ ಎಂದರು.
ಅಮಾನತ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಲ್.ಎನ್.ನಾಯ್ಕೋಡಿ ,ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ ಮಾತನಾಡಿದರು.ಅಂಜುಮನ್ ಕಮೀಟಿಗೆ ಆಯ್ಕೆಯಾದ ಆಡಳಿತ ಮಂಡಳಿ ಎಲ್ಲ ಪದಾಧಿಕಾರಿಗಳು,ಸದಸ್ಯರನ್ನು ಸನ್ಮಾನಿಸಲಾಯಿತು.
ಅಮಾನತ ಅಲ್ಪಸಂಖ್ಯಾತರ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಮಲಕಾರಿ ನದಾಫ,ಉಪಾಧ್ಯಕ್ಷ ಇಸಾಕ ದಖನಿ, ನಿರ್ದೇಶಕರಾದ ಎಂ.ಬಿ.ಜಕ್ಕೇರಾಳ,ಭಾಷಾ ಮುಲ್ಕಿಸಿಪಾಯಿ, ಇಬ್ರಾಹಿಂ ಮಾಗಿ, ಲಾಳೇಮಶ್ಯಾಕ ನಾಯ್ಕೋಡಿ,ಲಾಳೇಸಾ ಢವಳಗಿ,ವ್ಯವಸ್ಥಾಪಕ ಎ.ಎ.ಮೋಮಿನ,ಇಸಾಕ್ ಮೋಮಿನ,ಬಿ.ಎ.ನಾಯ್ಕೋಡಿ,ಪಿಗ್ಮಿ ಸಂಗ್ರಾಹಕರಾದ ಆಸೀಫ ಕವಡಿಮಟ್ಟಿ,ಕೃಷ್ಣಾ ಅಗ್ನಿಹೋತ್ರಿ ಇದ್ದರು.







