ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ ಮಧ್ಯೆ ಬೆಳೆಯುವುದೇ ದೊಡ್ಡ ಸಾಧನೆಯಾಗಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ,ಬಾಂಗ್ಲಾದೇಶಗಳಿಗೆ ಮಾತಾ ಎಂದು ಕರೆದಿಲ್ಲ.ಆದರೆ ಭಾರತಕ್ಕೆ ಮಾತ್ರ ಮಾತಾ ಎಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಇರುವ ಪ್ರತಿಯೊಬ್ಬರು ಮಾತೆಯ ಸ್ವರೂಪರು,ನಮ್ಮ ದೇಶದ ಮಹಿಳೆಯರೆಲ್ಲರೂ ಮಹಾರಾಣಿಯರು ಎಂದರು.
ಸಂಸಾರದಲ್ಲಿ ಪ್ರೀತಿ ಕಮ್ಮಿ ಆಗದಂತೆ ನೋಡಿಕೊಳ್ಳಬೇಕು.ನಮ್ಮ ಹಿಂದೆ ಮಾತನಾಡುವವರು ಇದ್ದೇ ಇರುತ್ತಾರೆ.ಇನ್ನೊಬ್ಬರ ಟೀಕೆಗಳಿಗೆ ಹೆದರುವುದು ಸಲ್ಲದು.ನಾನು ನಮ್ಮ ಮನೆಯವರು ಇನ್ನೊಬ್ಬರ ಉಸಾಬರಿ ಮಾಡುವುದು ಬಿಡುತ್ತೇವೆ ಎಂದು ಹೇಳಿದರೆ ಸಂಸಾರ,ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ಹೊಸ ವರ್ಷ ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹೊಸ ವರುಷವಾಗಿದೆ.ಅಂದು ಭಾರತೀಯರು ಮೈಗೆ ಎಣ್ಣಿ ಹಚ್ಚಿಕೊಂಡು ಪರಸ್ಪರ ಕೈಮುಗಿಯುತ್ತೇವೆ.ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹೊಟ್ಟೆಗೆ ಎಣ್ಣಿ ಹಾಕಿಕೊಂಡು ರಸ್ತೆ ಬದಿ ಬಿದ್ದುಕೊಂಡರೆ ಅದು ಇಂಗ್ಲಿಷ್‌ರ ಹೊಸ ವರ್ಷ ಎಂದು ತಿಳಿದುಕೊಳ್ಳುವಂತಾಗಿದೆ.ನಾವು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಸುಧಾರಿಸವುದಿಲ್ಲ.ಪಾಶ್ಚಿಮಾತ್ಯರು ನಮ್ಮ ದೇಶೀಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಬಸವನ ಬಾಗೇವಾಡಿ ಒಡೆಯ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ತಾಳಿಕೋಟಿ ಮಠದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತಿರುವ ಸಿದ್ಧಲಿಂಗ ದೇವರು ನಮ್ಮ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸುತ್ತಿರುವುದು ಸಂತಸದ ಸಂಗತಿ ಎಂದರು.ಜAಗಮ ಸಮಾಜದ ಮಾಜಿ ಅಧ್ಯಕ್ಷ ಸಿದ್ಧಲಿಂಗಯ್ಯ ಕಲ್ಯಾಣಮಠ, ವೇ.ಮುರುಗೇಶ ವಿರಕ್ತಮಠ,ಕೋಳೂರಿನ ಸಂತೋಷ ಹಿರೇಮಠ ಇದ್ದರು.

ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ-ಸಿದ್ಧಲಿಂಗ ದೇವರು :
ಖಾಸ್ಗತೇಶ್ವರ ಮಠದಲ್ಲಿ ಹುಟ್ಟಿ ಬೆಳೆದಿರುವ ನನಗೆ ದೊಡ್ಡ ದೊಡ್ಡ ಮಠದ ಆಹ್ವಾನ ಬಂದಿತ್ತು.ಜಗದ್ಗುರು ಪಟ್ಟವು ಇದೆ ಎಂದು ಹೇಳಿದ್ದರು.ಆದರೆ ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ. ವಿರಕ್ತ ಶ್ರೀಗಳ ಆಶಯದಂತೆ ತಾಳಿಕೋಟೆ ಖಾಸ್ಗತೇಶ್ವರ ಭಾಗದಲ್ಲಿ ಬಹುದೊಡ್ಡ ಸಂಗೀತ ಪಾಠಶಾಲೆ, ನಿರಂತರ ನಿತ್ಯ ದಾಸೋಹ, ಶಿಕ್ಷಣದ ದಾಸೋಹ,ಮಹಿಳೆಯರಿಂದಲೇ ಶಾಖಾ ಮಠಗಳಲ್ಲಿ ರಥೋತ್ಸವದ ಕಾರ್ಯಗಳ ಸಂಕಲ್ಪ ಹೊಂದಿದ್ದು ಅದನ್ನು ಈಡೇರಿಸುವರೆಗೂ ವಿರಮಿಸುವುದಿಲ್ಲ ಎಂದು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ನುಡಿದರು.

Latest News

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರಕಾರ ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ನೀಡಲಾಗುವ ಮಾಶಾಸನಕ್ಕೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಶನಿವಾರದಿಂದ ಕೈಗೊಂಡಿದ್ದು ಸಂಕಲ್ಪಪೂರ್ವ ಚಾತುರ್ಮಾಸ್ಯ ದೀಕ್ಷೆ ತನ್ನಿಮಿತ್ಯ ಶ್ರೀಗಳನ್ನು ಚಾತುರ್ಮಾಸ್ಯ ಮಹೋತ್ಸವ ಸಮೀತಿ ಹಾಗೂ ಸಮಸ್ತ ವಿಪ್ರ ಸಮಾಜದ ಬಾಂಧವರು ಭವ್ಯ ಮೆರವಣಿಗೆ ಮೂಲಕ ಶಿವ ಚಿದಂಬರ ದೇವಸ್ಥಾನಕ್ಕೆ ಕರೆದೊಯ್ಯರು. ಪಟ್ಟಣದ ರಾಘವೇಂದ್ರ ಮಠದಿಂದ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಕೂರಿಸಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ