ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು.ಹಿರಿತನದ ವಿಷಯ ಬಂದಾಗ ಉತ್ತರ ಕರ್ನಾಟಕದಲ್ಲಿ ಎಚ್.ಕೆ.ಪಾಟೀಲ ಅವರು ಬಿಟ್ಟರೆ ನಾಡಗೌಡರೆ ಎರಡನೆಯವರು.ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಮಾಡಬೇಕು.ಇಲ್ಲದಿದ್ದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲಕ್ಕಚ್ಚುವಂತೆ ಮಾಡುವ ಶಕ್ತಿ ಕಾರ್ಯಕರ್ತರಿಗಿದೆ ಎಂದು ಖಡಕ್ ಸಂದೇಶವನ್ನು ಇಲ್ಲಿಯ ಕಾರ್ಯಕರ್ತರು ಹೈಕಮಾಂಡ್ಗೆ ರವಾನಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ನಿoದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಪಿಎಂಸಿ ಮಾಜಿ ಉಪಾಧ್ಯಕ್ಷ ವಾಯ್.ಎಚ್.ವಿಜಯಕರ್ ಅವರು, ಬಹುಶಃ ನಾಡಗೌಡರ ಸಂಭಾವಿತನಕ್ಕೆ ಹೈಕಮಾಂಡ್ ಅನಾದರ ಮಾಡುತ್ತಿದೆಯೇ ಎಂಬ ಭಾವನೆ ಕಾರ್ಯಕರ್ತರಿಗೆ ಬಂದಿದೆ.ಶರಣ ತತ್ವದಲ್ಲಿ ನಂಬಿಕೆ ಇರಿಸಿಕೊಂಡು ಪಕ್ಷ ನಿಷ್ಠರಾಗಿರುವ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕು.ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಪಕ್ಷದ ಕಾರ್ಯಕರ್ತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಶರಣಬಸ್ಸು ಚಲವಾದಿ ಮಾತನಾಡಿ, ಮತಕ್ಷೇತ್ರದಲ್ಲಿ ನೀರಾವರಿ,ಮೂಲಸೌರ್ಯ ಸೇರಿದಂತೆ ಹಲವು ಕೆಲಸಗಳಲ್ಲಿ ಅಭಿವೃದ್ದಿಗೆ ಆದ್ಯತೆ ಕೊಟ್ಟಿರುವ ಶಾಸಕ ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಬೇಕು.ನಷ್ಟದಲ್ಲಿದ್ದ ಕೆಎಸ್ಡಿಎಲ್ ನಿಗಮವನ್ನು ಲಾಭದತ್ತ ತಂದು ನಿಲ್ಲಿಸಿದ ಕೀರ್ತಿ ಅಪ್ಪಾಜಿ ನಾಡಗೌಡರಿಗೆ ಸಲ್ಲುತ್ತದೆ.ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ನಾಡಗೌಡರಿಗೆ ಮಂತ್ರಿ ಮಾಡಬೇಕು.ಕೊಟ್ಟಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದಾರೆ.ಅವರು ಹಿರಿಯ ಅನುಭವಿ ರಾಜಕಾರಣಿಯಾಗಿದ್ದು ಸಿಎಂ ಅವರು ಅವರು ಶಾಸಕ ನಾಡಗೌಡರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ, ಪಕ್ಷದ ಹೈಕಮಾಂಡ್ ಯಾಕೆ ನಾಡಗೌಡರಿಗೆ ಮಂತ್ರಿ ಸ್ಥಾನ ಕೊಡುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಮಂತ್ರಿ ಆಗಲು ಫಂಡ್ ಏನಾದರೂ ಕೊಡಬೇಕಾ ? ಈ ಬಾರಿ ನಾಡಗೌಡರಿಗೆ ಮಂತ್ರಿ ಮಾಡಲು ನಾವು ಪಕ್ಷದ ಹೈಕಮಾಂಡ್ ವಿರುದ್ದವೇ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.ಮುದ್ದೇಬಿಹಾಳ ಬಂದ್,ಬಸ್ ಬಂದ್,ಟೈರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಹೇಳಿದರು.
ಯುವ ಮುಖಂಡ ತಿಪ್ಪಣ್ಣ ದೊಡಮನಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿ ಆಗುವುದಕ್ಕೆ ಹೈಕಮಾಂಡ್ ಯಾವ ಮಾನದಂಡ ಅನುಸರಿಸುತ್ತದೆ ಎಂಬುದನ್ನು ಮೊದಲು ಕಾರ್ಯಕರ್ತರಿಗೆ ಸ್ಪಷ್ಟಪಡಿಸಬೇಕು.ಮಂತ್ರಿ ಮಾಡಲು ಪಕ್ಷಕ್ಕೆ ಹಣವನ್ನು ನೋಡಿ ಮಂತ್ರಿ ಮಾಡುತ್ತೀರಾ ? ಪಕ್ಷವನ್ನು ಕಟ್ಟುವ ಹಿನ್ನೆಲೆ ಪರಿಗಣಿಸುತ್ತೀರೋ ? ಯಾಕೆ ನಾಡಗೌಡರನ್ನು ಪಕ್ಷ ಕಡೆಗಣಿಸುತ್ತಿದೆ ? ಎಂಬುದು ಕಾರ್ಯಕರ್ತರಿಗೆ ಅರ್ಥವಾಗುತ್ತಿಲ್ಲ.ಪಕ್ಷ ನಾಡಗೌಡರನ್ನು ಗುರುತಿಸದಿದ್ದರೆ ಕಾಂಗ್ರೆಸ್ನಲ್ಲಿರುವ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಕೊಟ್ಟು ಪಕ್ಷವನ್ನು ಧಿಕ್ಕರಿಸಿ ಮತಕ್ಷೇತ್ರದಲ್ಲಿ ಕಾಂಗ್ರೆಸನ್ನು ನೆಲಕ್ಕಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಡಿ.ಕೆ.ಶಿವಕುಮಾರ ಹಾಗೂ ನಾಡಗೌಡರು ಸಮಕಾಲೀನರಾಗಿದ್ದಾರೆ.ಮುದ್ದೇಬಿಹಾಳ ಮತಕ್ಷೇತ್ರದ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಡಿ.ಕೆ.ಶಿವಕುಮಾರ್,ಮಾಜಿ ಸಿಎಂ ಸಿದ್ದರಾಮಯ್ಯ,ಪಕ್ಷದ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರಲ್ಲಿ ನಾಡಗೌಡರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.
ಮುದ್ದೇಬಿಹಾಳದ ಪರಿಸ್ಥಿತಿ ಹೇಗಾಗಿದೆ ಎಂದರೆ ಸಣ್ಣ ಹುಡುಗರು ಅತ್ತಾಗ ಒಂದು ಚಾಕ್ಲೆಟ್,ಬಿಸ್ಕೆಟ್ ಕೊಟ್ಟು ಸುಮ್ಮನೆ ಕೂಡಿಸುವ ಪರಿಸ್ಥಿತಿ ಮುದ್ದೇಬಿಹಾಳದ್ದಾಗಿದೆ.ಯಾಕೆ ಈ ಮಾತು ಹೇಳಿದ್ದೆಂದರೆ ಸಣ್ಣ ಹುಡುಗರಿಗೆ ಚಾಕ್ಲೆಟ್,ಬಿಸ್ಕಿಟ್ ಕೊಟ್ಟಂತೆ ನಿಗಮ ಮಂಡಳಿ,ದಿಲ್ಲಿ ಪ್ರತಿನಿಧಿ ಮಾಡಿ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ನಾಯಕಿ ಸರಸ್ವತಿ ಪೀರಾಪೂರ , ಸಚಿವರಾದ ಎಂ.ಬಿ.ಪಾಟೀಲರು ಶಾಸಕ ನಾಡಗೌಡರ ಹೆಸರನ್ನೆ ಮಂತ್ರಿ ಸ್ಥಾನಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಸದಸ್ಯ ಬಿ.ಆರ್.ಚಪ್ಪರಬಂದ,ಪ್ರಚಾರ ಸಮಿತಿ ಅಧ್ಯಕ್ಷ ರಾಜು ರಾಯಗೊಂಡ,ಬಹಾದ್ದೂರ ರಾಠೋಡ,ಸಿ.ಜಿ.ವಿಜಯಕರ್ ಮತ್ತಿತರರು ಮಾತನಾಡಿ ನಾಡಗೌಡರನ್ನು ಎರಡನೇ ಬಾರಿ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಮಾಡಲೇಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಸತೀಶ ಓಸ್ವಾಲ್, ರಾಯನಗೌಡ ತಾತರಡ್ಡಿ, ಸುರೇಶಗೌಡ ಪಾಟೀಲ ಇಂಗಳಗೇರಿ,ಹೆಸ್ಕಾA ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇಕರ,ಕೆ.ಯು.ಸಿ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ,ಶರಣು ದೇಗಿನಾಳ,ಲಕ್ಷö್ಮಣ ಲಮಾಣಿ,ಸಂಗನಗೌಡ ಪಾಟೀಲ,ಯಲ್ಲಪ್ಪ ಚಲವಾದಿ,ಗುತ್ತಿಗೆದಾರ ರಾಜು ನಾಯಕ,ಸಂಗನಗೌಡ ಬಿರಾದಾರ(ಜಿಟಿಸಿ),ಯಲ್ಲಪ್ಪ ನಾಯ್ಕಮಕ್ಕಳ,ಗುರುಸ್ವಾಮಿ ಬೂದಿಹಾಳಮಠ,ಸಂತೋಷ ನಾಯ್ಕೋಡಿ, ನಾಗೇಶ ಭಜಂತ್ರಿ,ಸAಗಣ್ಣ ಮೇಲಿನಮನಿ, ಮುಖಂಡ ಶರಣಬಸ್ಸು ಚಲವಾದಿ, ಮಹ್ಮದರಫೀಕ ಶಿರೋಳ,ನೀಲಮ್ಮ ಚಲವಾದಿ,ಮಾಬುಬಿ ಬಾಗವಾನ,ರಾಮಣ್ಣ ರಾಜನಾಳ, ಸೇರಿದಂತೆ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಮೆಯಾಚಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ :
ಪತ್ರಿಕಾಗೋಷ್ಠಿಯಲ್ಲಿ ಶಾಸಕ ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಿ ಎನ್ನುವ ಭರದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡ ತಿಪ್ಪಣ್ಣ ದೊಡಮನಿ ಅವರು ಪಕ್ಷದ ಹೈಕಮಾಂಡ್ ಮಂತ್ರಿ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದೆಯೇ ? ಎನ್ನುವ ಪ್ರಶ್ನೆ ಎತ್ತಿದರು.ಇದಕ್ಕೆ ಸುದ್ದಿಗಾರರು ಸ್ಪಷ್ಟನೆ ಕೇಳಿದಾಗ, ಪ್ರತಿಕ್ರಿಯಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನಮ್ಮ ಕಾರ್ಯಕರ್ತರು ಆವೇಶದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.ಅದಕ್ಕೆ ನೀವು (ಮಾಧ್ಯಮದವರು) ಗಂಭೀರವಾಗಿ ಪರಿಗಣಿಸಬೇಡಿ.ಆ ವಿಷಯವಾಗಿ ನಾನು ಪಕ್ಷದ ಕ್ಷಮೆಯಾಚಿಸುತ್ತೇನೆ ಎಂದು ಹೇಳಿ ಸುದ್ದಿಗೋಷ್ಠಿಯಿಂದ ಎದ್ದು ಹೊರ ನಡೆದರು.







