ತುಮಕೂರು: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಬಾಲಕ ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಈ ದುರ್ಘಟನೆ ಮಧುಗಿರಿ ತಾಲ್ಲೂಕಿನ ಕಾಟಗೊಂಡನಹಳ್ಳಿ ಬಳಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನು 29 ವರ್ಷದ ಜನಾರ್ದನ್ ವರ್ಷದ ಸಿಂಧು, 08 ವರ್ಷದ ವೇದಾಂತ್ ಎನ್ನಲಾಗಿದ್ದು, ಮತ್ತಿಬ್ಬರ ಹೆಸರು ತಿಳಿದು ಬಂದಿಲ್ಲ.
ಉಳಿದಂತೆ ಗೀತಾ, ಆನಂದ್, ಯೋದ ಮತ್ತು ಒಂದು ವರ್ಷದ ಗಂಡು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರಿನಿಂದ ಮಧುಗಿರಿ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಪಾವಗಡದಿಂದ ಬೆಂಗಳೂರಿಗೆ ಕಡೆಗೆ ಹೊರಟಿದ್ದ ಮತ್ತೊಂದು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.
ಇದನ್ನೂ ಓದಿ: Accident: ಸಾರಿಗೆ ಬಸ್-ಖಾಸಗಿ ಬಸ್ ಡಿಕ್ಕಿ, ಕಂಡಕ್ಟರ್ ದುರ್ಮರಣ
ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.