ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು ಸರ್ಕಾರದ ಹೆಸರಿಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇವರ ದಯೆಯಿಂದ ಮಹಾರಾಷ್ಟçದಲ್ಲಿ ಮಳೆಯಾಗಿ ಆಲಮಟ್ಟಿ ಡ್ಯಾಂಗೆ ನೀರು ಬಂದಿದೆ. ಕುಡಿಯಲು, ಜಾನುವಾರುಗಳಿಗೆ,ಸ್ವಲ್ಪ ಬೆಳೆಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿದೆ.ಆದರೆ ಕೆಲವರು ನೆಪಕ್ಕೋಸ್ಕರ ಆಡಳಿತ ನ್ಯೂನ್ಯತೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯುವ, ಇರುವ ಶಾಂತಿಯನ್ನು ಕದಡಿಸುವ ರಾಜಕಾರಣ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಕೆಲಸ ಜನರ ಮೇಲಿದೆ ಎಂದರು.ಎಲ್ಲಿಯವರೆಗೆ ಧರ್ಮದ ಹೆಸರಿನಲ್ಲಿ ಆಚರಣೆಗಳು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ತಹಶೀಲ್ದಾರ್ ಆನಂದ ಕೋಲಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿರಿಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ.ಅವರ ಸ್ಮರಣೆಯನ್ನು ಮಾಡುವ ದಿನವಾಗಿದೆ.ಭಾರತೀಯ ಪರಂಪರೆ ಸಾಂಸ್ಕೃತಿಕ ಸಿರಿವಂತಿಕೆ ಎಲ್ಲೆಡೆ ಮಾದರಿಯಾಗಿದೆ.ಈ ನೆಲದಲ್ಲಿ ನಾವು ಜನಿಸಿದ್ದಕ್ಕೆ ಸಾರ್ಥಕತೆಯನ್ನು ಕಂಡಿದ್ದೇವೆ.ಸೈನಿಕ ಬಂಧುಗಳ ಸೇವೆ ನೆನವು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಓ ಸಂಗನಗೌಡ ಬಿರಾದಾರ, ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಅಬ್ದುಲಗಫೂರ ಮಕಾನದಾರ, ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸೈ ಸಂಜಯ ತಿಪರೆಡ್ಡಿ,ವಾಯ್.ಎಚ್.ವಿಜಯಕರ್, ಪ್ರಭು ಕಡಿ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜುಗೌಡ ತುಂಬಗಿ, ಗೋಪಿ ಮಡಿವಾಳರ,ಅಧಿಕಾರಿಗಳಾದ ಡಾ.ಸತೀಶ ತಿವಾರಿ,ಬಸಂತಿ ಮಠ,ಎಸ್.ಡಿ.ಭಾವಿಕಟ್ಟಿ, ಎಸ್.ಎಸ್.ಕುಂಬಾರ, ಎಸ್.ಕೆ.ಘಾಟಿ,ಶಿವಲೀಲಾ ಕೊಣ್ಣೂರ, ಶಾಲಿನಿ ,ಎಂ.ಎo.ಬೆಳಗಲ್,ಲಕ್ಷ್ಮಣ ಲಮಾಣಿ,,ಅರೋಗ್ಯ ರಕ್ಷಾ ಸಮೀತಿ ಅಧ್ಯಕ್ಷ ವಿಜಯಕುಮಾರ ಗೂಳಿ ,ಶಿವಾನಂದ ಮೇಟಿ,ಅಯ್ಯಪ್ಪ ರೆಡ್ಡಿ,ಬಿ.ಎಚ್.ಮುದ್ನೂರ,ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ ಇತರರು ಇದ್ದರು. ಟಿ.ಡಿ.ಲಮಾಣಿ ಹಾಗೂ ಜಿ.ಎಚ್.ಚವ್ಹಾಣ ನಿರೂಪಿಸಿದರು.ಪ್ರಭಾರ ಬಿಇಒ ಆರ್.ಬಿ.ಧಮ್ಮೂರಮಠ ಸ್ವಾಗತಿಸಿದರು.ತಾಲ್ಲೂಕು ಆಡಳಿತದಿಂದ ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ, ಕರಾಟೆ ಸಾಧಕರಾದ ವಿಕ್ರಾಂತ ಶಾರದಳ್ಳಿ ಹಾಗೂ ಶಕುಂತಲಾ ಶಾರದಳ್ಳಿ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ,ಪಥಸoಚಲ ಕಾರ್ಯಕ್ರಮದ ವಿಜೇತರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಅಂಜುಮನ್ ಪ್ರೌಢಶಾಲೆ ಪ್ರಥಮ,ವಿಬಿಸಿ ಪ್ರೌಢಶಾಲೆ ದ್ವಿತೀಯ ಹಾಗೂ ಎಂಜಿಎoಕೆ ತೃತೀಯ ಸ್ಥಾನ ಪಡೆದುಕೊಂಡರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಚಿನ್ಮಯ ಜೆಸಿ ಶಾಲೆ ದ್ವಿತೀಯ ಹಾಗೂ ಆಕ್ಸಫರ್ಡ್ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು.
50 ನಿಮಿಷ ತಡವಾದ ಧ್ವಜಾರೋಹಣ; ತಾಲ್ಲೂಕು ಆಡಳಿತದಿಂದ ಸಾರ್ವಜನಿಕ ಧ್ವಜಾರೋಹಣ ಬೆಳಗ್ಗೆ 9 ಗಂಟೆಗೆ ಎಂದು ಪೂರ್ವಭಾವಿ ಸಭೆಯಲ್ಲಿ ನಿಗದಿ ಮಾಡಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.ಆದರೆ ತಾಲ್ಲೂಕು ಆಡಳಿತದಿಂದಲೇ ಸಮಯವನ್ನು ಪಾಲಿಸದಿರುವುದು ಕಂಡು ಬಂದಿತು.9.55ಕ್ಕೆ ರಾಷ್ಟçಧ್ವಜಾರೋಹಣವನ್ನು ತಹಶೀಲ್ದಾರ್ ಆನಂದ ಕೋಲಾರ ನೆರವೇರಿಸಿದರು.ಶಾಸಕ ಸಿ.ಎಸ್.ನಾಡಗೌಡರು ಕಾರ್ಯಕ್ರಮದ ಸ್ಥಳಕ್ಕೆ ವಿಳಂಬ ಮಾಡಿದ್ದರಿಂದಲೇ ಧ್ವಜಾರೋಹಣ ನಿಗದಿತ ಸಮಯಕ್ಕೆ ಮಾಡಲಾಗಲಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆಯನ್ನು ತೋಡಿಕೊಂಡರು.ಸಾoಸ್ಕೃತಿಕ ಕಾರ್ಯಕ್ರಮದಲ್ಲಿ ರಿಮಿಕ್ಸ್ ಹಾಡುಗಳೇ ಹೆಚ್ಚು ಕಂಡು ಬಂದವು.ವಿದ್ಯಾರ್ಥಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಹೆಚ್ಚಿನ ಪ್ರಮಾಣದಲ್ಲಿ ಮಾಡಿರಲಿಲ್ಲ







