ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ ಮಾರ್ಗದರ್ಶನ ಸಿಬ್ಬಂದಿ ವರ್ಗದವರ ನಿರಂತರ ಪರಿಶ್ರಮದಿಂದ ಬ್ಯಾಂಕಿಗೆ 1.15 ಕೋಟಿ ರೂ.ಲಾಭ ಗಳಿಸಿದೆ ಎಂದು ನಾಲತವಾಡದ ಶ್ರೀ ಶರಣ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎಸ್.ಪಾಟೀಲ ಹೇಳಿದರು.
ಇಲ್ಲಿಯ ರತ್ನ ಸಂಗಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಸಂಘದ 30ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಸುಮಾರು ಇಲ್ಲಿಯವರೆಗೆ 114 ಕೋಟಿ ರೂ. ಮಿಕ್ಕಿ ವ್ಯವಹಾರ ನಡೆಸಿದ್ದು 1.15 ರೂ.ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಇಲ್ಲಿಯವರೆಗೆ ಬ್ಯಾಂಕ್ 199.50 ಕೋಟಿ ರೂ. ಠೇವಣಿ ಹೊಂದಿದ್ದು 114 ಕೋಟಿ ಸಾಲ ನೀಡಿದೆ. 99 ಕೋಟಿ ರೂ. ವಿವಿಧ ಕಡೆಗಳಲ್ಲಿ ಹೂಡಿಕೆ ಇದೆ ಎಂದು ತಿಳಿಸಿದರು.
ಸಂಘದ ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಮಾತನಾಡಿ, ಬ್ಯಾಂಕಿನ ಪ್ರಧಾನ ಕಚೇರಿ ಹಾಗೂ ಮುದ್ದೇಬಿಹಾಳ ಶಾಖೆಗಳು ಸ್ವಂತ ನಿವೇಶನ, ಕಟ್ಟಡ ಹೊಂದಿದ್ದು, ಪ್ರಧಾನ ಕಟ್ಟಡದ ನವೀಕರಣ ಮಾಡಲಾಗಿದೆ. ಸದಸ್ಯರ ಸ್ವಾವಲಂಬಿ ಬದುಕಿಗೆ ಆರ್ಥಿಕ ಶಕ್ತಿ ನೀಡುವ ಜೊತೆಗೆ ಶಿಕ್ಷಣ, ಆರೋಗ್ಯ ಸೇವೆ, ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಸೃಷ್ಟಿ ಸಿದ್ದನಗೌಡ ಪಾಟೀಲ, ದ್ವಿತೀಯ ರ್ಯಾಂಕ್ ಪಡೆದ ಪಡೆದ ಪೂಜಾ ಈರಪ್ಪ ಲಮಾಣಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅಮರೇಶ ಶರಣಪ್ಪ ಟಕ್ಕಳಕಿ, ಸೃಷ್ಟಿ ಅ.ದೇಶಮುಖ ಸೇರಿದಂತೆ ಎಂಟು ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ನಾಲತವಾಡ, ಹುಣಸಗಿ, ಮುದ್ದೇಬಿಹಾಳ, ಲಿಂಗಸೂಗೂರು, ತಾಳಿಕೋಟಿ ಶಾಖೆಗಳ ಉತ್ತಮ ಗ್ರಾಹಕರನ್ನು, ಸಾಧಕರನ್ನು ಸನ್ಮಾನಿಸಲಾಯಿತು.ಪ್ರಾಸ್ತಾವಿಕವಾಗಿ ಸಂಗಣ್ಣ ಹಡಲಗೇರಿ ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಎಂ.ಬಿ.ಅoಗಡಿ, ಬಸವರಾಜ ಎಂ.ತಾಳಿಕೋಟಿ ವಕೀಲರು,ಕುಮಾರ ಚಿಂಚೋಳಿ,ಬಿ.ಎ.ಗAಗನಗೌಡ, ಶಿವಪುತ್ರಯ್ಯ ಸ್ಥಾವರಮಠ, ಕೆ.ಆರ್.ಎತ್ತಿನಮನಿ, ಬಿ.ಟಿ.ತಿರಮುಖೆ,ಎಸ್.ಸಿ.ನಾಗರದಿನ್ನಿ,ಜಿ.ಎಸ್.ಗಡೇದ,ಬಿ.ಎಚ್.ಹಟ್ಟಿ,ಎಸ್.ಸಿ.ದೇಶಮುಖ,ಬಿ.ಎಸ್.ಪಾಟೀಲ,ಐ.ಬಿ.ಚಿನಿವಾರ, ಎಸ್.ಎಸ್.ಮಣ್ಣೂರ,ಸಂಗಣ್ಣ ವೈಲಿ,ಪ್ರಕಾಶ ಅಂಗಡಿ, ಶಶಿಧರ ಬೆಣ್ಣೂರ ಇದ್ದರು.







