ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಶನಿವಾರದಿಂದ ಕೈಗೊಂಡಿದ್ದು ಸಂಕಲ್ಪಪೂರ್ವ ಚಾತುರ್ಮಾಸ್ಯ ದೀಕ್ಷೆ ತನ್ನಿಮಿತ್ಯ ಶ್ರೀಗಳನ್ನು ಚಾತುರ್ಮಾಸ್ಯ ಮಹೋತ್ಸವ ಸಮೀತಿ ಹಾಗೂ ಸಮಸ್ತ ವಿಪ್ರ ಸಮಾಜದ ಬಾಂಧವರು ಭವ್ಯ ಮೆರವಣಿಗೆ ಮೂಲಕ ಶಿವ ಚಿದಂಬರ ದೇವಸ್ಥಾನಕ್ಕೆ ಕರೆದೊಯ್ಯರು.
ಪಟ್ಟಣದ ರಾಘವೇಂದ್ರ ಮಠದಿಂದ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಕೂರಿಸಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ವಿಪ್ರ ಸಮಾಜದ ಭಜನಾ ಸಮೀತಿಯ ಪದಾಧಿಕಾರಿಗಳು ಹಾಗೂ ಡೊಳ್ಳಿನ ಮೇಳ,ಮಹಿಳೆಯರು ವಿಶೇಷ ಮೆರಗು ತಂದಿತು. ಮಹೋತ್ಸವ ಸಮೀತಿಯ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ, ಬಾಪುರಾವ ದೇಸಾಯಿ ಹಡಗಲಿ,ವೇ.ಗುಂಡಭಟ್ ಜೋಷಿ,ವೆಂಕಟೇಶಾಚಾರ್ಯ ಗ್ರಾಮಪುರೋಹಿತ , ಸಮೀತಿಯ ಕಾರ್ಯದರ್ಶಿ ಕೃಷ್ಣಾಜಿ ಕುಲಕರ್ಣಿ, ಸಹ ಕಾರ್ಯದರ್ಶಿ ಪುಟ್ಟು ಕುಲಕರ್ಣಿ,ಪ್ರಶಾಂತ ಸರಾಫ,ವಾಸುದೇವ ಸಾಲವಾಡಗಿ,ಚಂದ್ರಕಾoತ ಕುಲಕರ್ಣಿ, ಪ್ರದೀಪ ಕುಲಕರ್ಣಿ,ಸುಹಾಸ ದೇಶಪಾಂಡೆ,ಶ್ರೀಧರ ದೇಶಪಾಂಡೆ,ಸುರೇಶ ಕುಲಕರ್ಣಿ,ದಿನೇಶ ಕುಲಕರ್ಣಿ,ರಾಘವೇಂದ್ರ ಕುಲಕರ್ಣಿ,ಸುಭಾಷ ಕುಲಕರ್ಣಿ,ಗುರುರಾಜ ಕುಲಕರ್ಣಿ,ಪ್ರಕಾಶ ದೇಶಪಾಂಡೆ ಸೇರಿದಂತೆ ಸಮೀತಿಯ ಸದಸ್ಯರು ಇದ್ದರು.
58 ವರ್ಷಗಳ ಬಳಿಕ ಚಾತುರ್ಮಾಸ್ಯ :
ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ ತೀರ್ಥರು ಚಾತುರ್ಮಾಸ್ಯ ಅನುಷ್ಠಾನ ಕೈಗೊಂಡಿದ್ದರು.ಜು.30,1968 ರಿಂದ ಆ.25,1968ರವರೆಗೆ ಆಗಿನ ಚಾತುರ್ಮಾಸ್ಯ ಕಿಲ್ಲಾಗಲ್ಲಿಯಲ್ಲಿದ್ದ ಖಾದಿ ಗ್ರಾಮೋದ್ಯೋಗ ನೂಲುವ ಕಟ್ಟಡದಲ್ಲಿ ರಾಮರಾವ ಸಾಲವಾಡಗಿ,ಮಾಧವರಾಜ ಸಾಲವಾಡಗಿ,ಬಾಬುರಾವ ಕುಲಕರ್ಣಿ,ರಂಗರಾಜ ದೊಡ್ಡಿಹಾಳ,ವೆಂಕಪ್ಪಚಾರ್ಯ ಪುರಾಣಿಕ,ಶ್ಯಾಮರಾವ ಕುಲಕರ್ಣಿ,ವಿಠ್ಠಲರಾವ ಕುಲಕರ್ಣಿ, ನೀಲಕಂಠರಾವ ಜಹಾಗೀರದಾರ,ನರಸಿಂಹಾಚಾರ್ಯ ಜೋಷಿ ಇವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸಲಾಗಿತ್ತು.







