ಮುದ್ದೇಬಿಹಾಳ : ಅಸುರಕ್ಷಿತ ಕ್ರಮಗಳಿಂದ ಏಡ್ಸ್ ರೋಗ ಹರಡುತ್ತಿದ್ದು ಅದನ್ನು ತಡೆಗಟ್ಟಲು ಸ್ವಯಂ ನಿಯಂತ್ರಣದಿOದ ಸಾಧ್ಯ ಎಂದು ಬೆಂಗಳೂರು ಸರ್ದಾರ್ ವಲ್ಲಭ್ಬಾಯಿ ಪಟೇಲ್ ಸೊಸೈಟಿ ಮುಖ್ಯಸ್ಥ ಡಾ.ಬಾಲಕೃಷ್ಣ ರೆಡ್ಡಿ ಹೇಳಿದರು.
ತಾಲ್ಲೂಕು ಢವಳಗಿ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಬೆಂಗಳೂರಿನ ಸರ್ದಾರ್ ವಲ್ಲಭ್ಬಾಯಿ ಪಟೇಲ್ ಸೊಸೈಟಿ ನೇತೃತ್ವದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಈಚೇಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಏಡ್ಸ್ ರೋಗ ಬಂದಾಗ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಸಂಭವನೀಯ ಸಾವನ್ನು ತಪ್ಪಿಸಬಹುದಾಗಿದೆ.ಇದಕ್ಕೆಂದು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ,ಔಷಧೋಪಚಾರ ದೊರೆಯುತ್ತದೆ.ಆದರೆ ರೋಗ ಬಂದ ಮೇಲೆ ಪರದಾಡುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಶಿಬಿರದ ಸಂಘಟಕ ಮಲ್ಲಿಕಾರ್ಜುನ ಸಿದರೆಡ್ಡಿ ಮಾತನಾಡಿ, ಪ್ರತಿ ಅಮವಾಸ್ಯೆಯ ಮರುದಿನ ಶಿಬಿರ ಢವಳಗಿ ಬದಲಾಗಿ ಮುದ್ದೇಬಿಹಾಳ ನಗರದಲ್ಲಿ ಸಂಘಟಿಸಲು ನಿರ್ಧರಿಸಲಾಗಿದೆ.ಸ್ಥಳವನ್ನು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಆಕ್ಯುಪ್ರೆಶರ್ ಮೂಲಕ ಉಚಿತವಾಗಿ ತಪಾಸಣೆ ನಡೆಸಲಾಯಿತು.ಇದೇ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡವರು ಗುಣಮುಖರಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.ಈ ಸಂದರ್ಭದಲ್ಲಿ ಸೊಸೈಟಿಯ ಉಮೇಶ ಕಮ್ಮಾರ, ಸಂದೇಶ, ಹರೀಶ, ಅನು, ಮಾಲೀನಿ, ಪ್ರೊ.ಪರಮೇಶಪ್ಪ ಕೊರವರ, ಎಸ್.ಬಿ.ಬಿರಾದಾರ, ಮಲ್ಲಣ್ಣ ಗೂಳಿ, ಅಂಬರೀಶ ಗಂಗನಗೌಡರ ಮೊದಲಾದವರು ಇದ್ದರು.