ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಸಿ.ಎಸ್.ನಾಡಗೌಡ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು,ತಾವು ಹಿಂದೆ ನ್ಯಾಮಗೌಡ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿಯೇ ಚುನಾವಣೆಯ ಉಸ್ತುವಾರಿ ವಹಿಸಿದ್ದಾಗಿ ತಿಳಿಸಿದರು ಅಲ್ಲದೇ, ಎಂ.ಬಿ.ಪಾಟೀಲರ ಉಪ ಚುನಾವಣೆ ಮಾಡಿದ್ದೇವೆ.ಬೆಳಗಾವಿ,ಧಾರವಾಡ ,ಬಳ್ಳಾರಿ ಚುನಾವಣೆಯಲ್ಲಿ ತನುಮನ ಧನದಿಂದ ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು.
ಹಿರಿತನ,ಪಕ್ಷದ ದೃಷ್ಟಿಯಿಂದ ಕೊಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ನಾಡಗೌಡರು ಹೇಳಿದರು. ಸಿಎಂ ಡಿಕೆ ಶಿವಕುಮಾರ ಹಾಗೂ ನಾವು ಒಟ್ಟಿಗೆ ಬೆಳೆದು ಬಂದಿದ್ದೇವೆ ಎಂಬುದು ಡಿಕೆಗೂ ಗೊತ್ತಿದೆ.ನಿರೀಕ್ಷೆಯಲ್ಲಿ ಇದ್ದರೂ ನನಗೆ ಮಂತ್ರಿ ಮಾಡಲಿಲ್ಲ.ಸಾಬೂನು ಮಾರ್ಜಕ ನಿಗಮವನ್ನು ಎರಡು ವರ್ಷದಲ್ಲಿ ಲಾಭದಲ್ಲಿ ಮುನ್ನಡೆಸಿದ್ದೇನೆ.ಉತ್ತರ ಕರ್ನಾಟಕದಲ್ಲಿ ಹಿರಿಯ ಶಾಸಕನಾಗಿದ್ದರೂ ಪರಿಗಣಿಸಿಲ್ಲ ಎಂದು ಉತ್ತರಿಸಿದರು.
ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷದ ವಿರೋಧಿ ಚಟುವಟಿಕೆ ಮಾಡುವುದಿಲ್ಲ..ರಾಜೀನಾಮೆ ಕೊಡುವ ಪ್ರಶ್ನೆಯೂ ಇಲ್ಲ.ರಾಜೀನಾಮೆ ಕೊಡುವ ವಿಷಯ ಬಂದರೆ ಜನರ ಮುಂದೆ ಹೋಗುತ್ತೇವೆ.ಹೈಕಮಾಂಡ್ ನವರು ಹೀಗೆ ಪಕ್ಷದಲ್ಲಿ ಷಡ್ಯಂತ್ರ ಮಾಡುವವರನ್ನು ಮುಂದಿಟ್ಟುಕೊಂಡು ಹೋಗುತ್ತದೆಯೇ ? ಎಂದು ಪ್ರಶ್ನಿಸಿದರು.ನನ್ನ ಜನರು ರಾಜೀನಾಮೆ ಕೊಡು ಎಂದರೆ ಕೊಡುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.







