ಮುದ್ದೇಬಿಹಾಳ : ಉದ್ಯೋಗ ಮೇಳಗಳು (Job Fair) ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ನಿವಾರಣೆಗೆ ಸಹಕಾರಿಯಾಗಿದ್ದು ಯುವಕರಿಗೆ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಒದಗಿಸುವ ತಾಣಗಳಾಗಿ ರೂಪುಗೊಂಡಿರುವುದು ಸಮಾಧಾನದ ಸಂಗತಿ ಎಂದು ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ಎಂ.ಜಿ.ವಿ.ಸಿ ಕಾಲೇಜಿನಲ್ಲಿ ಬುಧವಾರ ಎಂ.ಜಿ.ವಿ.ಸಿ ಕಾಲೇಜು ಹಾಗೂ ಎಲ್.ಸಿ.ಸಿ ಧಾರವಾಡ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ (Job Fair) ಚಾಲನೆ ನೀಡಿ ಅವರು ಮಾತನಾಡಿದರು.
ನಿರುದ್ಯೋಗಿಗಳ ಸಂಖ್ಯೆ ಇಂತಹ ಮೇಳಗಳಿಂದ ಕಡಿಮೆಯಾಗುತ್ತದೆ. ಉದ್ಯೋಗ ದೊರೆತ ಬಳಿಕ ಹೆತ್ತ ತಂದೆ ತಾಯಿಯವರನ್ನು ಮರೆಯಬಾರದು. ಅವರನ್ನು ಗೌರವದಿಂದ ನಡೆಸಿಕೊಳ್ಳುವ ಕೆಲಸ ಯುವ ಜನಾಂಗ ಮಾಡಬೇಕು ಎಂದರು.
ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್, ಗ್ಯಾರಂಟಿ ಯೋಜನೆ ರದ್ದು? ಸಚಿವ ಎಂ.ಬಿ.ಪಾಟೀಲ ಕ್ಲಾರಿಟಿ
ಸಂಸ್ಥೆಯ ಕಾರ್ಯದರ್ಶಿ ಅಶೋಕ ತಡಸದ, ಪ್ರಾಚಾರ್ಯ ಎಸ್.ಎನ್.ಪೊಲೇಶಿ ಮಾತನಾಡಿ, ಕಾಲೇಜು ಕ್ಯಾಂಪಸ್ನಲ್ಲಿ ಉದ್ಯೋಗ ಮೇಳ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಕಾಲೇಜುಗಳೆಂದರೆ ಬರೀ ವಿದ್ಯಾರ್ಥಿಗಳಿಗೆ ಪದವಿ ಮುಗಿಸಿ ಹೊರ ಕಳಿಸುವುದಲ್ಲ. ಅದರೊಟ್ಟಿಗೆ ಅವರಿಗೆ ಜೀವನ, ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗ ಮೇಳಗಳನ್ನು ಪ್ರತಿವರ್ಷ ಆಯೋಜಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಧಾರವಾಡ ಎಲ್.ಸಿ.ಸಿ ನಿರ್ದೇಶಕ ಮಹೇಶ ಭಟ್ , ಆಡಳಿತಾಧಿಕಾರಿ ಎ.ಬಿ.ಕುಲಕರ್ಣಿ,ಪ್ರಮುಖರಾದ ಶಿವರಾಜ ತಡಸದ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಎಂ.ಐ.ಬಿರಾದಾರ, ಎ.ಎ.ಮುಲ್ಲಾ, ಆರ್.ಜಿ.ವಸ್ತ್ರ ದ,ಎ.ಎಸ್.ಬಾಗವಾನ, ಎಸ್.ಎಂ.ನಿಂಬಲಗುಂದಿ, ಶ್ರೀಶೈಲ್ ಹತ್ತಿ,ಪ್ರಕಾಶ ನರಗುಂದ ಇದ್ದರು.
410 ಜನಕ್ಕೆ ಉದ್ಯೋಗಪತ್ರ: ಮೇಳದಲ್ಲಿ ಟಾಟಾ, ಹೋಂಡಾ, ಹುಂಡಯೈ, ಎಚ್.ಡಿ.ಎಫ್.ಸಿ, ಕ್ಯಾಡಮಾಕ್ಸ್, ನೀಡೀ ಫೌಂಡೇಶನ್, ಅಪೋಲೋ, ಏರಟೆಕ್ ಸೇರಿದಂತೆ 26 ಕಂಪನಿಗಳು ಪಾಲ್ಗೊಂಡಿದ್ದವು. ಒಟ್ಟು 910 ಜನ ನೋಂದಾಯಿಸಿಕೊಂಡಿದ್ದು ಅದರಲ್ಲಿ 410 ಜನಕ್ಕೆ ಉದ್ಯೋಗಪತ್ರ ವಿತರಿಸಲಾಗಿದೆ. 180 ಜನರನ್ನು ಅಂತಿಮ ಸುತ್ತಿನ ಆಯ್ಕೆಗೆ ಪರಿಗಣಿಸಲಾಗಿದೆ ಎಂದು ಮೇಳದ ಆಯೋಜಕರು ತಿಳಿಸಿದರು.