ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ ಸ್ಥಾಪಿಸುವ ಯತ್ನ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ,ಕಮೀಟಿಗೆ ಸ್ಪರ್ಧಿಸಿರುವ ಅಬ್ದುಲಗಫೂರ ಮಕಾನದಾರ ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1936ರಲ್ಲಿ ಇಲ್ಲಿನ ಅಂಜುಮನ್ ಸಂಸ್ಥೆಯನ್ನು ಹಿರಿಯರು ಹುಟ್ಟು ಹಾಕಿದ್ದಾರೆ.ಅಂಜುಮನ್ ಸಂಸ್ಥೆಯ ಬೆಳವಣಿಗೆಯಲ್ಲಿ ಹಿಂದೂ ಬಾಂಧವರ ಸಹಕಾರವೂ ಇತ್ತು.ಆದರೆ ಕಾರಣಾಂತರಗಳಿAದ ಸಂಸ್ಥೆಯ ಅಭಿವೃದ್ಧಿ ಕುಂಠಿತಗoಡಿದೆ. ಹೊಸಬರು,ಒಳ್ಳೆಯವರ ಆಯ್ಕೆಗೆ ಮತದಾರರು ಮುಂದಾಗಬೇಕು ಎಂದು ಮನವಿ ಮಾಡಿದರು.
ಇನ್ನೊರ್ವ ಅಭ್ಯರ್ಥಿ,ಜನರಕೂಗು ವಾಹಿನಿ ಸಂಸ್ಥಾಪಕ ಗುಲಾಮ್ಮೊಹ್ಮದ್ ವೈ.ದಫೇದಾರ ಮಾತನಾಡಿ, ಮುದ್ದೇಬಿಹಾಳದ ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಶಾಂತ ರೀತಿಯಲ್ಲಿ ಮಾದರಿಯಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ.ಸಂಸ್ಥೆಯಡಿ ಆಸ್ಪತ್ರೆ,ಅಂಜುಮನ್ ಶಾಲೆ,ಮಳಿಗೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಸಮಾಜದ ಬಾಂಧವರಿಗಾಗಿ ಕಾರ್ಯಗತಗೊಳಿಸಬೇಕಾಗಿದೆ.ಸಮಾನ ಮನಸ್ಕರೆಲ್ಲ ಸೇರಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಆಸರೆಯಾಗುವವರನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ವಿನಂತಿಸುವುದಾಗಿ ಹೇಳಿದರು. ಅಭ್ಯರ್ಥಿ ಅಲ್ಲಾಭಕ್ಷ ದೇಸಾಯಿ, ಮುಖಂಡರಾದ ಮಹೆಬೂಬ ಮುಲ್ಲಾ, ಬಾಪ್ ಢವಳಗಿ,ಮಹೆಬೂಬ ಹಡಲಗೇರಿ ಸಂಸ್ಥೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಡಾ.ಯಾಸೀನ್ ಮುಲ್ಲಾ,ಅಬ್ದುಲಸಲಾಂ ಮುಲ್ಲಾ,ಹುಸೇನ್ಭಾಷಾ ಹುಣಚಗಿ,ಯಾಸೀನ ಸೋಠೆ,ಮುರ್ತುಜ ದಖನಿ, ಹೆಸ್ಕಾಂ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇರ್,ಅಸ್ಲಾಂ ಕಿತ್ತೂರ,ಅಲ್ಲಾಭಕ್ಷö್ಯ ಮಕಾನದಾರ,ಅಬ್ದುಲಮಜೀದ ಮಕಾನದಾರ,ಮೈನೂದ್ದೀನ ಹವಾಲ್ದಾರ,ಆರೀಫ ಮುಲ್ಲಾ, ರಹೆಮಾನ ದಫೇದಾರ,ಅಕ್ಬರ ದೇಸಾಯಿ, ಮೋದಿನ ಕಾರಿಗನೂರ ಮೊದಲಾದವರು ಇದ್ದರು.
ಕಡೆಯ ದಿನ 62 ನಾಮಪತ್ರ ಸಲ್ಲಿಕೆ..! :
ಅಂಜುಮನ್ ಕಮೀಟಿಗೆ ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು
ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಕಮೀಟಿ ಆಡಳಿತ ಮಂಡಳಿಗೆ ಆಯ್ಕೆ ಬಯಸಿ ಗುರುವಾರ ಒಂದೇ ದಿನ 62 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ.
ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ಅಂಜುಮನ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ನೆರೆದಿದ್ದು ಕಂಡು ಬಂದಿತು.ಬೆಳಗ್ಗೆ 11 ರಿಂದ ಮದ್ಯಾಹ್ನ 3ಗಂಟೆಯವರೆಗೆ ಸಮಯ ಮೀರುತ್ತಿದ್ದಂತೆ ತಂಡೋಪತoಡವಾಗಿ ಆಗಮಿಸಿದ ಹಲವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ತಬಸ್ಸುಮ ಮುಲ್ಲಾ , ಚುನಾವಣೆ ಅಧಿಸೂಚನೆ ನಂತರ ನಾಮಪತ್ರ ಸಲ್ಲಿಕೆಯ ಕಡೆಯ ದಿನದವರೆಗೆ ಒಟ್ಟು 77 ಜನರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.ಜು.31 ರಂದು ನಾಮಪತ್ರಗಳ ಪರಿಶೀಲನೆ , ಆ.1 ರಂದು ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಕರು ಅಂಜುಮನ್ ಸಂಸ್ಥೆಗೆ ಹೊಸ ಆಡಳಿತ ತರುವ ಉತ್ಸಾಹದಲ್ಲಿ ಇರುವುದು ಕಂಡು ಬಂದಿತು.







