ಮುದ್ದೇಬಿಹಾಳ : ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಜಿ.ನಾಗರಾಳ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಭುನಾಥ ಕಂಚ್ಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಿ.ಜಿ.ನಾಗರಾಳ ಅವರ ಹೆಸರನ್ನು ಸಂಗಣ್ಣ ಕಂಚ್ಯಾಣಿ ಸೂಚಿಸಿದರು.ಮುದ್ದೇಬಿಹಾಳ ತಾಲೂಕಾ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಶೋಕ ಮಣಿ ಅನುಮೋದಿಸಿದರು.
ಅಧಿಕಾರ ವಹಿಸಿಕೊಂಡು ಶಸಾಪ ನೂತನ ಅಧ್ಯಕ್ಷ ಸಿ.ಜಿ.ನಾಗರಾಳ ಮಾತನಾಡಿ,ನಾನು ಎಂದೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ.ಆದರೆ ಸಭೆಯಲ್ಲಿರುವ ಎಲ್ಲಾ ಗಣ್ಯಮಾನ್ಯರು ,ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಮಾಡಿದ್ದೀರಿ.ತಮ್ಮೆಲ್ಲರ ಆಶಯದಂತೆ ಹಾಗೂ ಪರಿಷತ್ತಿನ ನಿಯಮಾವಳಿಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಹಾಗೂ ತಮ್ಮೆಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಹಿರಿಯ ಸಾಹಿತಿ ಪ್ತೊ.ಬಿ.ಎಂ.ಹಿರೇಮಠ ಮಾತನಾಡಿ,ಮನುಷ್ಯನಿಗೆ ಅಧಿಕಾರದ ಮದ ಹಾಗೂ ಅಹಂಕಾರ ಇರಬಾರದು.ನಿಸ್ವಾರ್ಥ ರೀತಿಯಿಂದ ಸೇವೆ ಸಲ್ಲಿಸಬೇಕು,ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ನಾಗರಾಳ ಅವರು ಸಮರ್ಥರಿದ್ದಾರೆ.ಸುತ್ತೂರು ಶ್ರೀಗಳು ಹಾಗೂ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಈ ಮುದ್ದೇಬಿಹಾಳ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ.ಇದರ ಸಂಸ್ಥಾಪಕ ಅಧ್ಯಕ್ಷನಾಗಿ ನಾನು ನಿಯತ್ತಿನಿಂದ ಕಾರ್ಯನಿರ್ವಹಿಸಿದ್ದೇನೆ ಎಂದು ತಮ್ಮ ಗತಕಾಲದ ಸವಿ ನೆನಪುಗಳನ್ನು ಹಂಚಿಕೊAಡರು.
ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಭುನಾಥ ಕಂಚ್ಯಾಣಿ,ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತವಾಡ,ಪ್ರೊ.ವ್ಹಿ.ಡಿ.ಐಹೊಳ್ಳಿ, ವ್ಹಿ.ಸಿ.ನಾಗಠಾಣ,ಬಸವರಾಜ ಕೋರಿ ಮಾತನಾಡಿದರು.ಸಭೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಚ ಎಂ.ಜಿ.ಯಾದವಾಡ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ,ಹಿರಿಯ ಸಾಹಿತಿಗಳಾದ ಪ್ತೊ.ಬಿ.ಎಂ.ಹಿರೇಮಠ ಹಾಗೂ ಪ್ರೊ.ವ್ಹಿ.ಡಿ.ಐಹೊಳ್ಳಿ ಇದ್ದರು.
ಹಿರಿಯ ಸಾಹಿತಿಗಳಾದ ಚಂದ್ರಶೇಖರ ಇಟಗಿ,ರುದ್ರೇಶ ಕಿತ್ತೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್,ಬಾಪೂಗೌಡ ಪಂ. ಪಾಟೀಲ್, ಸಿದ್ದನಗೌಡ ಬಿಜ್ಜೂರ, ಬಸವರಾಜ ಲಿಂಗದಳ್ಳಿ,ಶ್ರೀಶೈಲ ಎಸ್.ಕೆ, ಎಸ್.ಎಸ್.ಹುನಗುಂದ, ಎಂ.ಎಸ್.ಬಿರಾದಾರ, ಎಸ್.ಆರ್.ಗೌಡರ, ಪತ್ರಕರ್ತ ದಾನಯ್ಯ ಹಿರೇಮಠ, ಎಸ್.ಎಸ್.ಕಲ್ಯಾಣಿ,ಸಂಗಣ್ಣ ಕಂಚ್ಯಾಣಿ,ನ್ಯಾಯವಾದಿ ಎನ್.ಆರ್.ಮೊಕಾಶಿ,ಎಚ್.ಬಿ.ದಳವಾಯಿ,ಎಂ.ಬಿ.ಗುಡಗುAಟಿ,ಎA.ಬಿ.ಪಾಟೀಲ್, ಸಂಗಣ್ಣ ಶಿವಣಗಿ ಮೊದಲಾದವರು ಪಾಲ್ಗೊಂಡಿದ್ದರು.
ಬಸವ ಮಹಾಮನೆ ಸಮೀತಿಯ ಅಧ್ಯಕ್ಷ ಎಸ್.ಎ.ಬೇವಿನಗಿಡದ ಸ್ವಾಗತಿಸಿದರು.ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ವಂದಿಸಿದರು,ಹಿರಿಯ ಸಾಹಿತಿ ಅಶೋಕ ಮಣಿ ಕಾರ್ಯಕ್ರಮ ನಿರೂಪಿಸಿದರು.







