ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು.

ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರ, ಉತ್ತಮ ಶಿಕ್ಷಕ,ಶಿಕ್ಷಕಿಯರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಮಕ್ಕಳನ್ನು ವ್ಯವಹಾರಿಕ ಜ್ಞಾನ ಹೊಂದಿದವರನ್ನಾಗಿ ಬೆಳೆಸಬೇಕು.ಸಚ್ಛಾರಿತ್ರ‍್ಯವಂತರಾಗಲು ಸಲಹೆ ಮಾಡಬೇಕು.ಓದು ಬರಹ ಮುಖ್ಯವಲ್ಲ, ಹೃದಯವೈಶಾಲ್ಯತೆಯುಳ್ಳ ಮಕ್ಕಳನ್ನು ತಯಾರು ಮಾಡಬೇಕು ಎಂದು ಶಿಕ್ಷಕರಿಗೆ ಸಲಹೆ ಮಾಡಿದರು.ಮೌಲ್ಯ ಶಿಕ್ಷಣ ಕೊಡುವ ಕಾರ್ಯ ಮುಖ್ಯವಾಗಿದೆ. ಪ್ರಾಮಾಣಿಕರಾಗಿರುವವರಿಗೆ ಸಮಾಜದಲ್ಲಿ ಬೆಲೆ ಹೆಚ್ಚು ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಡಿ.ಗಾಂಜಿ ಮಾತನಾಡಿ,ಸಾವಿತ್ರಿಬಾಯಿ ಫುಲೆ ಎಲ್ಲ ಮಕ್ಕಳಿಗೆ ತಾಯಿಯಾಗಿ ನಾಡಿಗೆ ಅಕ್ಷರದ ಮೂಲಕ ಬೆಳಕು ಕೊಟ್ಟವರು.ಮಹಿಳೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬಾರದಿರುವ ದಿನಗಳಲ್ಲೇ 18 ಶಾಲೆಗಳನ್ನು ಸ್ಥಾಪನೆ ಮಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟವರು.ಪತ್ನಿಯ ಹಂಬಲಕ್ಕೆ ಅವರ ಪತಿ ಜ್ಯೋತಿಬಾ ಫುಲೆ ಬೆಂಬಲ ನೀಡಿದರು.ರಾಜಕೀಯ,ಶೈಕ್ಷಣಿಕ,ಸಾಮಾಜಿಕವಾಗಿ ಬೆಳವಣಿಗೆಗೆ ಹೆಣ್ಣು ಮಕ್ಕಳು ಇಂದು ಬೆಳವಣಿಗೆ ಸಾಧಿಸಲು ಅದರಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರವಿದೆ ಎಂದರು.

ಕುAಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಸೇವಾ ಅವಧಿಯಲ್ಲಿಯೇ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಗೌರವಿಸುವ ಕೆಲಸ ಮಾಡುತ್ತಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಇನ್ನಷ್ಟು ಉನ್ನತ ಸ್ಥಾನಕ್ಕೆ ಬೆಳೆಯಲಿ.ಸಮಯದ ಪ್ರಜ್ಞೆ,ಅರಿವು ಎಲ್ಲರಲ್ಲೂ ಬರಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಂ.ಜಿ.ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ನೀಡಿರುವ ಕೊಡುಗೆ ಮಾದರಿಯಾದದ್ದು ಅವರ ಹೆಸರಿನಲ್ಲಿ ರಾಜ್ಯ,ರಾಷ್ಟçಮಟ್ಟದಲ್ಲಿ ಸಂಘಗಳು ರಚನೆಗೊಂಡು ಫುಲೆ ದಂಪತಿ ಹೆಸರು ಚಿರಸ್ಥಾಯಿ ಆಗಿದೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಗುತ್ತಿಗೆದಾರಿಕೆಯಲ್ಲಿ ಹೆಸರು ಮಾಡಿದ್ದ ಡಿ.ವೈ.ಉಪ್ಪಾರ ಈಚೇಗೆ ನಿಧನರಾಗಿದ್ದು ವಾರ್ಷಿಕ 20 ಸಾವಿರ ಕೋಟಿ ಕೆಲಸಗಳನ್ನು ಅವರು ಮಾಡುತ್ತಿದ್ದರು.ಅಂತಹ ಗುತ್ತಿಗೆದಾರರನ್ನು ಎತ್ತರ ಮಟ್ಟಕ್ಕೆ ಬೆಳೆಯುವಂತೆ ಮಾಡಿದ್ದು ಶಿಕ್ಷಕರ ಮಾರ್ಗದರ್ಶನ ಎಂಬುದನ್ನು ಮರೆಯುವಂತಿಲ್ಲ.ಸಾವಿತ್ರಿಬಾಯಿ ಫುಲೆ ಸಂಘದವರು ಸಂಘದ ಸಭಾಭವನ ಕಟ್ಟಡ ನಿರ್ಮಿಸಲು ಮುಂದಾದರೆ ಅದಕ್ಕೆ ತಮ್ಮಿಂದ ವಯಕ್ತಿಕ ಸಹಕಾರ ಮಾಡುವುದಾಗಿ ಹೇಳಿದರು.

ಗಣ್ಯರಾದ ಐ.ಜಿ.ಬೆನಕೊಪ್ಪ,ಬಿ.ಇ.ಒ ಬಿ.ಎಸ್.ಸಾವಳಗಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ, ಬಿಇಒ ಬಿ.ಎಸ್.ಸಾವಳಗಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ, ಸಂಘದ ಜಿಲ್ಲಾಧ್ಯಕ್ಷ ಎ.ಬಿ.ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ಆರ್.ಬಿ.ಧಮ್ಮೂರಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಜೆ.ದಖನಿ , ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಚ್.ಮುದ್ನೂರ, ಸರ್ಕಾರಿ ನೌಕರರ ಸಂಘದ ಸದಸ್ಯ ಬಿ.ಎಸ್.ಶೇಖಣ್ಣವರ, ಆಲೂರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಳ್ಳಗಿ,ಎಸ್,ಎಂ,ಪವಾರ,ಮೋಹನ ಚವ್ಹಾಣ ಉಪಸ್ಥಿತರಿದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ದೀಪಾ ಕೇಶಾಪೂರ ಹಾಗೂ ಆರತಿ ರೂಗಿ ಸ್ವಾಗತಿಸಿದರು.ಬಿ.ಎಂ.ಗದ್ದಿ ಹಾಗೂ ಆರ್.ಬಿ.ಮ್ಯಾಗೇರಿ ನಿರೂಪಿಸಿದರು.ಆರ್.ಬಿ.ಮ್ಯಾಗೇರಿ ವಂದಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಟಿ.ಎನ್.ರೂಢಗಿ,ಎಫ್.ಎಸ್.ಬಾಗವಾನ,ಶಾರದಾ ಅಡಗಲ್,ಝಡ್.ಬಿ.ಅಗ್ನಿ,ಸುಜಾತಾ ಕಡಿ,ಎಸ್.ಆರ್.ಬಾಗೇವಾಡಿ,ಶ್ರೀಕಾಂತ ಹಡಲಗೇರಿಎಸ್.ಬಿ.ತಳವಾರ,ಎಚ್.ಜಿ.ಗೌರೋಜಿ,ಅಫ್ತಾಬ ಮನಿಯಾರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ : ಆಲೂರು ಕ್ಲಸ್ಟರ್‌ನಿಂದ ಪಿ.ಎಸ್.ವಡವಡಗಿ,ಶಕುಂತಲಾ ಇಲಕಲ್, ರಕ್ಕಸಗಿ ಕ್ಲಸ್ಟರ್‌ನಿಂದ ಸಂಗಣ್ಣ ಟಕ್ಕಳಕಿ, ಶರಣಮ್ಮ ಬಿರಾದಾರ, ನಾಲತವಾಡ ಕ್ಲಸ್ಟರ್‌ನಿಂದ ಬಾಬು ಲಮಾಣಿ ಹಾಗೂ ಶೃತಿ ಮುರಾಳ , ತಂಗಡಗಿ ಕ್ಲಸ್ಟರ್‌ನಿಂದ ಪಿ.ಬಿ.ಗುಬಚಿ ಹಾಗೂ ಶಾಂತಾ ರಾಮವಾಡಗಿ, ಇಂಗಳಗೇರಿ ಕ್ಲಸ್ಟರ್‌ನಿಂದ ಲಕ್ಷö್ಮಣ ಚಲವಾದಿ, ಆರ್.ಸಿ.ಸಂಗಮ ,ಯರಝರಿ ಕ್ಲಸ್ಟರ್‌ನಿಂದ ಎಚ್.ಬಿ.ಲಮಾಣಿ, ರುಕ್ಮಿಣಿ ಬಾಟಿ, ಬಳಬಟ್ಟಿ ಕ್ಲಸ್ಟರ್‌ನಿಂದ ರವಿ ಹಿಪ್ಪರಗಿ ಹಾಗೂ ಜಯಶ್ರೀ ಸಾಲಿಮಠ, ಮಡಿಕೇಶ್ವರ ಕ್ಲಸ್ಟರ್‌ನಿಂದ ಎಸ್.ಎಸ್.ಮಠ ಹಾಗೂ ಟಿ.ಡಿ.ರಾಠೋಡ, ಢವಳಗಿ ಕ್ಲಸ್ಟರ್‌ನಿಂದ ಬಸಮ್ಮ ಗುಡದಿನ್ನಿ ಹಾಗೂ ಸಿ.ಪಿ.ಮುತ್ತಿನ,ಬಸರಕೋಡ ಕ್ಲಸ್ಟರ್‌ನಿಂದ ಬಿ.ಎಸ್.ಜಮದರಖಾನಿ ಹಾಗೂ ಕೆ.ಆರ್.ದೊರೆಗೋಳ,ಅಡವಿ ಸೋಮನಾಳ ಕ್ಲಸ್ಟರ್‌ನಿಂದ ಈರಪ್ಪ ಮ್ಯಾಗೇರಿ ಹಾಗೂ ಸುವರ್ಣ ಬಡಿಗೇರ,ಪ್ರಿಯಾಂಕಾ ಮುರಾಳ,ಹಡಲಗೇರಿ ಕ್ಲಸ್ಟರ್‌ನಿಂದ ಸಿ.ಬಿ.ಯರಂತೇಲಿ ಹಾಗೂ ಬಿ.ಎಸ್.ಕಡು, ಹುಲ್ಲೂರ ಕ್ಲಸ್ಟರ್‌ನಿಂದ ವಾಯ್.ಬಿ.ನಾಯ್ಕೋಡಿ ಹಾಗೂ ಹಮೀದಾಬೇಗಂ ನದಾಫ, ಹಿರೇಮುರಾಳ ಕ್ಲಸ್ಟರ್‌ನಿಂದ ಎಚ್.ವಾಯ್.ಗಲಗಲಿ ಹಾಗೂ ಎಸ್.ಎಮ್.ಕಟ್ಟಿಮಠ,ಮುದ್ದೇಬಿಹಾಳ ಉರ್ದು ಕ್ಲಸ್ಟರ್‌ನಿಂದ ರಾವುತಪ್ಪ ಕೂಡಗಿ ಹಾಗೂ ಎಂ.ಎಸ್.ಅತ್ತಾರ,ಎ.ಆಯ್.ಮOದ್ರೂಪ, ಮುದ್ದೇಬಿಹಾಳ ಕ್ಲಸ್ಟರ್‌ದಿಂದ ಶಿವಲಿಂಗೇಶ ಗುಂಡಕನಾಳ,ಎ.ಎo.ಘoಟಿಮಠ,ಶ್ರೀಮತಿ ನಾಗರತ್ನಾ, ಬಿದರಕುಂದಿ ಕ್ಲಸ್ಟರ್‌ನಿಂದ ಜಮಾಲ್‌ಶೇಖ, ಎನ್.ಬಿ.ಪಿಂಜಾರ ಅವರುಗಳಿಗೆ ಸಾವಿತ್ರಿಬಾಯಿ,ಜ್ಯೋತಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

NEWS BY: SHANKAR HEBBAL

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,