ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯಲ್ಲಿ ಏ.10 ರಿಂದ 14ರವರೆಗೆ ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ಬುದ್ಧ,,ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಪ್ರಮುಖರಾದ ಅನಿಲ ಹೊಸಮನಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಜಯಪುರದ ದರ್ಬಾರ್ ಹೈಸ್ಕೂಲ್ ಆವರಣದಲ್ಲಿ ಈ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ .ಮೇಳಕ್ಕೆ ಸಾಹಿತ್ಯ ಬಳಗದಿಂದಲೇ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲಾಗುತ್ತಿದ್ದು ಯಾವುದೇ ರಾಜಕಾರಣಿಯ ಬಳಿ ಇದಕ್ಕಾಗಿ ಕೈಒಡ್ಡಿಲ್ಲ ಎಂದು ತಿಳಿಸಿದರು.
ಮೇಳದಲ್ಲಿ ಸಾಂಸ್ಕೃತಿಕ ಸಮಾವೇಶ,ಐದು ದಿನಗಳ ಲೇಖಕರ ಮತ್ತು ಓದುಗರ ಮಹಾಮೇಳ,ಅದಕ್ಕಾಗಿ ಲೇಖಕರ ಜೊತೆ ಸಂವಾದ,ವಿದ್ಯಾರ್ಥಿ ಯುವ ಜನರ ಚಿಂತನೆ ಇರಲಿದೆ.ದಲಿತಪರ ಚಳವಳಿಗಳಲ್ಲಿ ದಲಿತೇತರರು ಹೆಚ್ಚೆಚ್ಚು ಭಾಗವಹಿಸುವುದು ಇಂದಿನ ಅಗತ್ಯವಾಗಿದ್ದು ಪ್ರಗತಿಪರ ಹೋರಾಟಗಳಲ್ಲಿ ದಲಿತರು ದೊಡ್ಡ ಸಂಖ್ಯೆಯಲ್ಲಿ ಭಾವಹಿಸುವುದು ಅಷ್ಟೇ ಮುಖ್ಯವಾದ ಸಂಗತಿಯಾಗಿದೆ.ಈ ಕಾರ್ಯಕ್ರಮಕ್ಕೆ ಹತ್ತಾರು ಸಂಘಟನೆಗಳು ಜೊತೆಗೂಡಿವೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆAಚಿ ಮಾತನಾಡಿ,ಏಪ್ರೀಲ್ 10 ರಿಂದ ಆರಂಭಗೊಳ್ಳುವ ಪುಸ್ತಕ ಮೇಳದಲ್ಲಿ ಪುಸ್ತಕ ಮೇಳ ಉದ್ಘಾಟನೆ,ಡಾ.ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳದ ಸ್ಥಳದವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ನಡೆಯಲಿದೆ.ಏ.11 ರಂದು ಮಹಾತ್ಮಾ ಜ್ಯೋತಿ ಪುಲೆ ಜನ್ಮದಿನ,ಸಾವಿತ್ರಿಬಾಯಿ ಪುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ ನಡೆಸಲಾಗುವುದು.ಏ.12 ರಂದು ಬಸವಾದಿ ಶರಣ ವಚನಗಳ ಕಟ್ಟುಗಳಿಂದಿಗೆ ಬಸವೇಶ್ವರ ವೃತ್ತದಿಂದ ಪುಸ್ತಕ ಮೇಳದ ಸ್ಥಳದವರೆಗೆ ಬಸವಾನುಯಾಯಿಗಳ ಮೆರವಣಿಗೆ ನಡೆಯಲಿದೆ.ಏ.13 ರಂದು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರಖಾನೀಸ್ ಸ್ಮರಣೆ, ಅವರ ಬೋಡಿಂಗನಲ್ಲಿದ್ದು ವಿದ್ಯೆ ಪಡೆದವರು, ಅವರ ಕುಟುಂಬಸ್ಥರಿAದ ಕಾಕಾ ಕಾರಖಾನೀಸ್ ಅವರ ಮನೆಯಿಂದ ಪುಸ್ತಕ ಮೇಳದವರೆಗೆ ಮೆರವಣಿಗೆ ನಡೆಸಲಾಗುತ್ತದೆ.ಎ.14 ರಂದು ಡಾ.ಅಂಬೇಡ್ಕರ್ ಜನ್ಮದಿನ ನಿಮಿತ್ಯ ಅಂಬೇಡ್ಕರ್ ವೃತ್ತದಿಂದ ಸಂವಿದಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೆರವಣಿಗೆ.ಪ್ರತಿ ದಿನ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಕವಿಗೋಷ್ಠಿ,ವಿದ್ಯಾರ್ಥಿಗಳಿಂದ ಪುಸ್ತಕದ ಕುರಿತು ಮಾತು ನಡೆಯಲಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಶಿವಪುತ್ರಪ್ಪ ಅಜಮನಿ ಮಾತನಾಡಿ, ಎಲ್ಲ ಶೋಷಿತರಿಗೆ ,ಅನ್ಯಾಯಕ್ಕೊಳಗಾದ ಬಡವರಿಗೆ, ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವವ ಎಲ್ಲರಿಗೂ ಸಂವಿದಾನ ಮುಖ್ಯ ಬಲವಾಗಿದೆ.ಹೊಸ ಅರಿವನ್ನು ವಿಸ್ತರಿಸುವ ಬುದ್ಧ,ಬಸವ, ಅಂಬೇಡ್ಕರ್ರ ಓದು ಇಂದಿನ ಅಗತ್ಯ.ಈ ಉದ್ದೇಶದಿಂದ ಹಮ್ಮಿಕೊಂಡಿರುವ ಪುಸ್ತಕ ಮೇಳದ ಯಶಸ್ವಿಗೆ ಸರ್ವರೂ ಶ್ರಮಿಸಬೇಕು ಎಂದು ಹೇಳಿದರು.
ಬಳಗದ ಸದಸ್ಯರಾದ ಚನ್ನು ಕಟ್ಟೀಮನಿ, ಎಸ್.ಎಂ.ಬೇವಿನಗಿಡದ , ಸೋಮು ಧರಿದೇವಿ, ಹುಸೇನ ಮುಲ್ಲಾ, ಸುನೀಲ ಮನಗೂಳಿ, ಇದ್ದರು.







