BJP ಎರಡು ಭಾಗ.. ಸ್ಫೋಟಕ ಭವಿಷ್ಯ ನುಡಿದ ಕೆ.ಎಸ್. ಈಶ್ವಪ್ಪ

BJP ಎರಡು ಭಾಗ.. ಸ್ಫೋಟಕ ಭವಿಷ್ಯ ನುಡಿದ ಕೆ.ಎಸ್. ಈಶ್ವಪ್ಪ

ಶಿವಮೊಗ್ಗ: ಅಧಿಕಾರವನ್ನೆಲ್ಲ ಒಂದೇ ಕುಟುಂಬಕ್ಕೆ ನೀಡಿದರೆ ಹೀಗೆಯೇ ಆಗೋದು, ತಮಗೆ ಬೇಕಾದವರಿಗೆ ಸ್ಥಾನಮಾನ ನೀಡಿರುವುರಿಂದಲೇ ಪಕ್ಷಕ್ಕೆ ಇಂಥ ದುಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (K.S. Eshwarappa) ಅವರು, ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿ, ಯಡಿಯೂರಪ್ಪ ಕುಟುಂಬದ ಕಡೆಗೆ ಬೊಟ್ಟು ಮಾಡಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 12 ಜನ ಬೆಳಗಾವಿಯಲ್ಲಿ ಸಭೆ ನಡೆಸಿದ್ದು, ನನಗೆ ಆಘಾತವಾಗಿದೆ. ಅವರು ಬೆಳಗಾವಿಯ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಹೇಳಿದ್ದು, ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಎರಡಾಗುತ್ತದೆ. ಕೇಂದ್ರ ನಾಯಕರು ಮಧ್ಯ ಪ್ರವೇಶಿಸದೇ ಹೋದರೆ ಪ್ರತಿ ತಾಲೂಕಿನಲ್ಲೂ ಪಕ್ಷ ಇಭ್ಭಾಗವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Join Our Telegram: https://t.me/dcgkannada

ಬೆಳಗಾವಿಯಲ್ಲಿ ಸಭೆ ನಡೆಸಿದ ನಾಯಕರು ಸಂಘಟನೆಯಲ್ಲಿದ್ದರು, ಪಕ್ಷ ಕಟ್ಟಿದವರು. ತಮಗೆ ಏನು ನೋವಾಗಿದೆ ಎಂದು ಹೇಳಿಕೊಂಡಿಲ್ಲ. ಅವರು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. 12 ಜನ ಮಾತ್ರ ಸಭೆ ನಡೆಸಿದ್ದಾರೆ ಎಂದುಕೊಂಡು ಕೇಂದ್ರ ನಾಯಕರು ನಿರ್ಲಕ್ಷ್ಯ ಮಾಡಬಾರದು ಎಂದರು.

ಪಕ್ಷದಡಿ ಕೆಲಸ ಮಾಡಿದ್ದರೂ ಬಹಳ ಜನರಿಗೆ ನೋವಿದೆ. ಲೋಕಸಭಾ ಚುನಾವಣೆ ಸಂದರ್ಭ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಯಡಿಯೂರಪ್ಪ ಅವರ ಕುಟುಂಬದ ಕೈಗೆ ಅಧಿಕಾರ ನೀಡಿದ್ದಕ್ಕೇ ಪಕ್ಷ 27 ರಿಂದ 17 ಸ್ಥಾನಕ್ಕೆ ಇಳಿದಿದ್ದು. ಈಗ ಜೆಡಿಎಸ್ ಹೊಂದಾಣಿಕೆ ಮಾಡದೆ ಹೋಗಿದ್ದರೆ ಹೇಗೆ ಎಂದು ಈಶ್ವರಪ್ಪ (K.S. Eshwarappa) ಪ್ರಶ್ನಿಸಿದರು.

ಇದನ್ನೂ ಓದಿ: BJP Rebel Leaders: ಬಿಜೆಪಿಯಲ್ಲೀಗ 20 ಬಣ! ಕೂಡಲಸಂಗಮ to ಬಳ್ಳಾರಿ ಪಾದಯಾತ್ರೆಗೆ ಡೇಟ್ ಫಿಕ್ಸ್?

22 ಭಿನ್ನಮತೀಯ ಶಾಸಕರು ನಡೆಸಬೇಕೆಂದಿರುವ ಪಾದಯಾತ್ರೆಯನ್ನು ತಡೆಯಲೇಬೇಕು, ಈ ಪಾದಯಾತ್ರೆಯ ಬಗ್ಗೆ ಕೇಂದ್ರದ ನಾಯಕರೂ ಕಿವಿಗೆ ಹಾಕಿಕೊಳ್ಳದೆ ಹೋದರೆ ರಾಜ್ಯದಲ್ಲಿ ಪಕ್ಷಕ್ಕೆ ದುರ್ದೆಶೆ ಶುರುವಾಗಿದೆ ಅಂತಲೇ ಅರ್ಥ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನ ಮಾತ್ರ ಗಳಿಸಿದ್ದ ಪಕ್ಷ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆಷ್ಟು ಸ್ಥಾನಗಳಿಗೆ ಕುಸಿಯಲಿದೆಯೋ ಎಂದು ಈಶ್ವರಪ್ಪ ಹೇಳಿದರು.

Latest News

ಗ್ಯಾರಂಟಿ ಯೋಜನೆ:                                                     ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಗ್ಯಾರಂಟಿ ಯೋಜನೆ: ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರ ಹಾಗೂ ಹೊರಪೇಟಿಯಲ್ಲಿ ಮನೆ ಮನೆಗೆ ತೆರಳಿದ ಪಂಚ

ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ದೇಶದ ಗಡಿ ಕಾಯುವ ಸೇವೆಯನ್ನು ಆಯ್ಕೆ ಮಾಡಿಕೊಂಡ ಆಯೇಷಾ ವಾಲೀಕಾರ, ಕಾಶೀಬಾಯಿ

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ:                                                                       ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ: ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿ

ಬಸ್ ನಿಲ್ದಾಣದ ಮೂತ್ರಾಲಯ ಅಶುಚಿತ್ವ :                ಶಾಸಕರಿಗೆ ಮೊಬೈಲ್‌ನಲ್ಲಿ ಅವ್ಯವಸ್ಥೆ ದರ್ಶನ ಮಾಡಿಸಿದ ಪ್ರಯಾಣಿಕ..!

ಬಸ್ ನಿಲ್ದಾಣದ ಮೂತ್ರಾಲಯ ಅಶುಚಿತ್ವ : ಶಾಸಕರಿಗೆ ಮೊಬೈಲ್‌ನಲ್ಲಿ ಅವ್ಯವಸ್ಥೆ ದರ್ಶನ ಮಾಡಿಸಿದ ಪ್ರಯಾಣಿಕ..!

ಮುದ್ದೇಬಿಹಾಳ : ಬಸ್ ನಿಲ್ದಾಣದಲ್ಲಿ ಮೂತ್ರಾಲಯದ ಅವ್ಯವಸ್ಥೆಯನ್ನು ಯುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ದಲ್ಲಿ ಫೋಟೋ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ ಶುಚಿತ್ವಕ್ಕೆ ಅಲ್ಲಿಯ ಆಡಳಿತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ, ಆರೋಗ್ಯ ರಕ್ಷಾ ಸಮಿತಿ,ಅರಣ್ಯ ಇಲಾಖೆ ಹಾಗೂ ಪುರಸಭೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಡವರು,ಮಧ್ಯಮವರ್ಗದವರಿಗೆ ಕೈಗೆಟುಕುವ ಆರೋಗ್ಯ ಸೇವೆ

ವಿಜ್ಞಾನ ಶಿಕ್ಷಕಿ ಸಂಧ್ಯಾಗೆ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ವಿಜ್ಞಾನ ಶಿಕ್ಷಕಿ ಸಂಧ್ಯಾಗೆ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಮುದ್ದೇಬಿಹಾಳ : ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ ವಿಜಯಪುರ ಜಿಲ್ಲಾ ಘಟಕದಿಂದ ಕೊಡಮಾಡುವ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ತಾಲ್ಲೂಕಿನ ಕೋಳೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಂಧ್ಯಾ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಧ್ಯಾ ಅವರು ಸಲ್ಲಿಸಿದ ಸಮಾಜಮುಖಿ ಸೇವೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆ.೮ ರಂದು ವಿಜಯಪುರ ಜಿಲ್ಲೆ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮಾನಸ ಗಂಗೋತ್ರಿ ಮಾದರಿಯ ವಸತಿ