High Court judges meet.. Social coexistence is possible through law: Justice M.Y. Arun

ಹೈಕೋರ್ಟ್ ನ್ಯಾಯಮೂರ್ತಿಗಳ ಭೇಟಿ.. ಕಾನೂನಿಂದ ಸಾಮಾಜಿಕ ಸಹಬಾಳ್ವೆ ಸಾಧ್ಯ: ನ್ಯಾಯಮೂರ್ತಿ ಎಂ.ಆಯ್.ಅರುಣ

ಹೈಕೋರ್ಟ್ ನ್ಯಾಯಮೂರ್ತಿಗಳ ಭೇಟಿ.. ಕಾನೂನಿಂದ ಸಾಮಾಜಿಕ ಸಹಬಾಳ್ವೆ ಸಾಧ್ಯ: ನ್ಯಾಯಮೂರ್ತಿ ಎಂ.ಆಯ್.ಅರುಣ

ಮುದ್ದೇಬಿಹಾಳ : ಸಾಮಾಜಿಕ ಸಹಬಾಳ್ವೆ ಸಾಧ್ಯವಾಗಬೇಕಾದರೆ ಅದು ಕಾನೂನಿಂದ ಮಾತ್ರ ಸಾಧ್ಯವಾಗುತ್ತದೆ. ವಕೀಲರು ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಮಹತ್ವದ ಪಾತ್ರ ನಿಭಾಯಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಆಯ್.ಅರುಣ ಹೇಳಿದರು.

Join Our Telegram: https://t.me/dcgkannada

ಪಟ್ಟಣದ ನ್ಯಾಯಾಲಯಕ್ಕೆ ಭಾನುವಾರ ಔಪಚಾರಿಕವಾಗಿ ಭೇಟಿ ನೀಡಿ ಅವರು ಇಲ್ಲಿನ ವಕೀಲರ ಸಂಘದಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಕೀಲರು ನ್ಯಾಯಾಲಯದಲ್ಲಿ ಕೇಸ್ ಒಂದನ್ನು ನಡೆಸುತ್ತಿರುವಾಗ ಆ ಕಕ್ಷಿದಾರರು ತಮ್ಮ ಕುಟುಂಬದ ಸದಸ್ಯರಂತೆ ವಕೀಲರನ್ನು ಕಾಣುತ್ತಾರೆ. ಅವರಿಗೆ ಸರಿಯಾದ ದಾರಿ ತೋರುವುದು ವಕೀಲರ ಕರ್ತವ್ಯವಾಗಿದೆ ಎಂದರು.

ಕೇವಲ ವಕೀಲ ವೃತ್ತಿಯ ಜೊತೆಗೆ ಬೇರೆ ಬೇರೆ ವೃತ್ತಿಯನ್ನು ಕೈಗೊಳ್ಳುವ ಅವಶ್ಯಕತೆ ಗ್ರಾಮೀಣ ಭಾಗದಲ್ಲಿರುವ ಕೋರ್ಟ್ಗಳಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಇದೆ. ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು ಮುದ್ದೇಬಿಹಾಳದಲ್ಲಿಯೇ ಕೂತು ಕಲಬುರಗಿ, ಬೆಂಗಳೂರು ಕೋರ್ಟ್ನಲ್ಲಿ ಕೇಸ್ ನಡೆಸಬಹುದಾಗಿದೆ. ಅಂತಹ ತಂತ್ರಜ್ಞಾನದ ಬಳಕೆಯನ್ನು ನುರಿತ ತಜ್ಞರಿಂದ ತಿಳಿದು ಅದನ್ನು ಅನುಷ್ಠಾನಕ್ಕೆ ತಂದರೆ ವಕೀಲರ ವೃತ್ತಿಪರತೆಯಲ್ಲಿ ಸುಧಾರಣೆ ಕಾಣಲು ಸಾಧ್ಯವಿದೆ. ಪೇಪರ್‌ಲೆಸ್ ಕೋರ್ಟ್ ನಡೆಸುವ ಕಾರ್ಯಕ್ಕೆ ವಕೀಲರು ಒತ್ತು ನೀಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ನಮ್ಮ ಭಾಗದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಈ ಕಟ್ಟಡ ಈಗಿನ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಅವಧಿಯಲ್ಲಿ ಸದ್ಯದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಶ್ರಮದಿಂದ ನಿರ್ಮಾಣವಾಗಿದೆ.ಲಾಯರ್ ಚೇಂರ‍್ಸ್ ಹಾಗೂ ಎಪಿಪಿ ಕಚೇರಿ ಕಟ್ಟಡ ನಿರ್ಮಾಣವಾಗಿದ್ದು ಅದರ ಲೋಕಾರ್ಪಣೆಗೆ ಶೀಘ್ರ ಆಗಲಿದೆ.ಜಿಲ್ಲಾ ನ್ಯಾಯಾಲಯದ ಬೇಡಿಕೆ, ತಾಳಿಕೋಟಿಯಲ್ಲಿ ಕಾಯಂ ಕೋರ್ಟ್ ಸ್ಥಾಪನೆ ಬಗ್ಗೆ ಆದಷ್ಟು ಬೇಗ ಕಾರ್ಯಗತಗೊಳಿಸುವ ಕಾರ್ಯ ಆಗಬೇಕು ಎಂದರು.

ಜಿಲ್ಲಾ ನ್ಯಾಯಾಧೀಶರಾದ ಶಿವಾಜಿ ನಲವಡೆ, ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಂಪತ್ತಕುಮಾರ ಬಳೂಲಗಿಡದ, ಮಲ್ಲಿಕಾರ್ಜುನ ಅಂಬಲಿ, ಅರವಿಂದ ಹಾಗರಗಿ ಇದ್ದರು.

ಇದನ್ನೂ ಓದಿ: ಸೆ.29 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

ವಕೀಲರಾದ ಎಚ್.ಜಿ.ನಾಗೋಡ ಸ್ವಾಗತಿಸಿದರು. ಎನ್.ಆರ್.ಮೊಕಾಶಿ ನಿರೂಪಿಸಿದರು. ಎಸ್.ಜಿ.ಕುಲಕರ್ಣಿ ಪರಿಚಯಿಸಿದರು.

ಇದಕ್ಕೂ ಮುನ್ನ ಮುದ್ದೇಬಿಹಾಳದ ನ್ಯಾಯಾಲಯದ ಕಟ್ಟಡ ಹಾಗೂ ಲಾರ‍್ಸ್ ಚೇಂರ‍್ಸ್,ಎಪಿಪಿ ನೂತನ ಕಟ್ಟಡವನ್ನು ನ್ಯಾಯಮೂರ್ತಿ ಅರುಣ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮುದ್ದೇಬಿಹಾಳಕ್ಕೆ ಪ್ರಥಮ ಬಾರಿ ಭೇಟಿ ನೀಡಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ವಕೀಲರ ಸಂಘದವರು ಸನ್ಮಾನಿಸಿದರು.


ಕಾರ್ಯಕ್ರಮ ನಿಗದಿಯಾಗಿದ್ದು ಬೆಳಗ್ಗೆ 11 ಗಂಟೆಗೆ ಇದ್ದರೂ ಬ.ಬಾಗೇವಾಡಿ ಕಾರ್ಯಕ್ರಮ ಮುಗಿಸಿಕೊಂಡು ಬರುವಷ್ಟರಲ್ಲೇ ಮದ್ಯಾಹ್ನ 3.20ರ ಹೊತ್ತಾಗಿತ್ತು. ನ್ಯಾಯಾಲಯದ ಕಟ್ಟಡ ವೀಕ್ಷಣೆ ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ತಡವಾಗಿ ಆಗಮಿಸಿದ್ದಕ್ಕೆ ವಕೀಲ ವೃಂದದವರಲ್ಲಿ ಕ್ಷಮೆ ಕೋರಿದರು.

Latest News

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ