Ekadanta, come home to spend the Vighna of the devotees

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ವಿಷೇಶ ಲೇಖನ: ರೇವಣಸಿದ್ದ ಬಗಲಿ

ಭಾರತೀಯರು ಹಬ್ಬ ಪ್ರೀಯರು. ಗಣೇಶ ಚತುರ್ಥಿ ಅನ್ನುವದು ರಾಷ್ಟ್ರೀಯ ಹಬ್ಬ. ಬ್ರೀಟಿಷರಿಗೆ ಭಾರತವನ್ನು ಬಿಟ್ಟು ತೊಲಗಿಸಲು ಅಂದು ನಮ್ಮ ನೆಚ್ಚಿನ ರಾಷ್ಟ್ರಾಭಿಮಾನಿಯಾದ ಬಾಲಗಂಗಾಧರ ತಿಲಕ ರವರು ಭಾರತೀಯರನ್ನು ಒಂದುಗೂಡಿಸುವ ಸಲ್ಲುವಾಗಿ ಈ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸುವ ಉತ್ಸವವನ್ನು ಪ್ರಾರಂಭಿಸಿದರು.

ಇನ್ನಷ್ಟು ‌ಸುದ್ದಿಗಳಿಗಾಗಿ ನಮ್ಮ‌ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಅಂದಿನಿಂದ ರಾಷ್ಟ್ರ ವ್ಯಾಪಿಯಾಗಿ ಪ್ರತಿವರ್ಷವೂ ಭಾದ್ರಪದ ಮಾಸದ ಚತುರ್ಥಿಯಂದು ಶಿವ-ಗೌರಿಸುತ್ತನಾದ ಗಣಪತಿಯನ್ನು ನಗರ-ಗ್ರಾಮೀಣ ಪ್ರದೇಶವೆನ್ನದೇ ಎಲ್ಲಡೇಯೂ ಭಕ್ತಿ ಪೂರ್ವಕವಾಗಿ ಆರಾಧನೆ ಮಾಡುವುದು ಜೋರಾಗಿರುತ್ತದೆ.

ಗಣೇಶ ಚತುರ್ಥಿ ಬಂದರೆ ಸಾಕು ಪಟ್ಟಣವೇಲ್ಲ ವಿಘ್ನೇಶನ ಆರಾಧನೆಯಲ್ಲಿ ಮಗ್ನಗೊಳುವದು. ಅದರಲ್ಲೂ ಚಿಕ್ಕ ಪುಟ್ಟ ಮಕ್ಕಳಿಗಂತು ಗಣೇಶ ಕೂರಿಸುವದು ಒಂದು ಸಡಗರ ಹಾಗೂ ಸಂಭ್ರಮದ ಹಬ್ಬವಾಗಿದೆ. ಪ್ರತಿ ವರ್ಷವೂ ಪಟ್ಟಣದಲ್ಲಿ ನೂರಾರೂ ಕಡೆಗಳಲ್ಲಿ ವಿಘ್ನ ನಿವಾರಕನನ್ನು ಕೂಡಿಸುವದು ಸರ್ವೆ ಸಾಮಾನ್ಯ.

ಈ ಬಾರಿಯೂ ವ್ಯಾಪಾರಿ ನಗರಿ ಚಡಚಣ ಪಟ್ಟಣದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಗಣೇಶನ ಮೂರ್ತಿಯನ್ನು ಮನೆ, ಗಲ್ಲಿ, ಸರ್ಕಾರಿ ಕಛೇರಿ, ಸಂಘ-ಸಂಸ್ಥೆ, ಪ್ರಮುಖ ಬಿದಿಗಳಲ್ಲಿ ಐದು ದಿನ, ಏಳು ದಿನ, ಒಂಬತ್ತು ದಿನ ಹೀಗೆ ಆಯಾ ಮಂಡಳಿಗಳು ಪ್ರತಿಷ್ಠಾಪಿಸಿ ಮೋದಕ ಪ್ರೀಯ ಗಣೇಶನಿಗೆ ವಿಶೇಷ ತಿಂಡಿ ಕಡಬು, ಲಾಡು, ಗರಿಕೆ, ಹಣ್ಣು ಹಂಪಲ್‌ಗಳು ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಲಾಗುವುದು.

ಭಾದ್ರಪದ ಶುಕ್ಲದ ಚೌತಿಯಂದು ಹಸ್ತಾ ನಕ್ಷತ್ರವಿರುವ ದಿನವೇ ಗಣೇಶ ಚತುರ್ಥಿ ದಿವಸ. ಈ ದಿವಸ ಶಿವ-ಗೌರಿ ದಂಪತಿಗಳಿಗೆ ವಿನಾಯಕನಾಗಿ ಜನಿಸಿದ ಗಣೇಶನ ಹುಟ್ಟಿದ ದಿನ. ಈ ದಿನವನ್ನು ಕರ್ನಾಟಕ, ಮಹಾರಾಷ್ಟ್ರ ಎನ್ನದೇ ಭಾರತದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಣೇಶನನ್ನು ಕೂರಿಸಿ, ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.

ನಮ್ಮ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಂತು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ, ನಿತ್ಯವೂ ರಾತ್ರಿ ಒಂದೊಂದು ತರಹದ ಮನರಂಜನೆ, ನಾಟಕ, ಡ್ಯಾನ್ಸ್, ಹಾಡು, ಮಿಮಿಕ್ರೀಗಳು ಗಣೇಶ ಮಂಡಳಿಯವರು ಆಯೋಜಿಸುತ್ತಾ ಜನರನ್ನು ಭೇದ-ಭಾವವಿಲ್ಲದೇ ಒಂದೂಗೂಡಿಸುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಸಂಭ್ರಮಿಸುವ ಜತೆಯಲ್ಲಿ ಕೊನೆಯ ದಿನದಂದು ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಯೆಯೂ ಮಾಡುವವರು.

ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಣಪತಿ ಊರೋಳಗಡೆ ಕುಳಿತರೆ, ಜನರು ತಮ್ಮ ಮನೆಗಳಲ್ಲಿ ಪುಟ್ಟ ಪುಟ್ಟ ವಿನಾಯಕನ್ನು ಕೂರಿಸಿ ಹಬ್ಬವನ್ನು ಎಲ್ಲ ಹಬ್ಬಕ್ಕಿಂತ ವಿಜೃಂಭಣೆಯಿಂದ ಆಚರಿಸುವರು.

ಈ ಬಾರಿ ಪ್ರತಿಯೊಬ್ಬರೂ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗಣಪನ ಮೂರ್ತಿ ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿ, ಶಾಂತಿಯುತ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎನ್ನುವದು ನನ್ನ ಆಶಯ.

Latest News

ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಮುದ್ದೇಬಿಹಾಳ : ಯಾರು ರಂಜಾನ್ ಮಾಸದಲ್ಲಿ ಶ್ರದ್ಧೆಯಿಂದ ನಮಾಜ್, ರೋಜಾ, ಕುರಾನ್ ತಿಲಾವತ್ ಹಾಗೂ

ಜಾನುವಾರುಗಳಿಗೆ ಕುಡಿವ ನೀರು ಸೌಲಭ್ಯ ಕಲ್ಪಿಸಿ

ಜಾನುವಾರುಗಳಿಗೆ ಕುಡಿವ ನೀರು ಸೌಲಭ್ಯ ಕಲ್ಪಿಸಿ

ಮುದ್ದೇಬಿಹಾಳ : ಬೇಸಿಗೆಯ ಧಗೆಯಲ್ಲಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರು, ಆಹಾರ ಇಲ್ಲದೇ ಬಹಳ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ(ವೆಂಕಟೇಶ ನಗರ) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬಸು

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು

ಮಾ.19 ರಿಂದ ಬೈಲಕೂರ ಬೈಲಾದ್ರೇಶ್ವರ ಜಾತ್ರೋತ್ಸವ

ಮಾ.19 ರಿಂದ ಬೈಲಕೂರ ಬೈಲಾದ್ರೇಶ್ವರ ಜಾತ್ರೋತ್ಸವ

ಮುದ್ದೇಬಿಹಾಳ : ತಾಲ್ಲೂಕಿನ ಬೈಲಕೂರ ಗ್ರಾಮದ ಬೈಲಾದ್ರೇಶ್ವರ ಜಾತ್ರಾ ಮಹೋತ್ಸವ ಮಾ.19 ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.19 ರಂದು ಬೆಳಗ್ಗೆ 8ಕ್ಕೆ ಮ್ಯಾಟ್ ಮೇಲೆ ಕಬಡ್ಡಿ ಪಂದ್ಯಾವಳಿ,ಮದ್ಯಾಹ್ನ 3ಕ್ಕೆ ಗಡಿಗೆ ಒಡೆಯುವ ಸ್ಪರ್ಧೆ, ರಾತ್ರಿ 9.30ಕ್ಕೆ ಸನ್ಮಾನ ಸಮಾರಂಭ, ರಾತ್ರಿ 10.30ಕ್ಕೆ ಅರುಣೋದಯ ಸಾಂಸ್ಕೃತಿಕ ಜಾನಪದ ನೃತ್ಯ ನಡೆಯಲಿದೆ. ಮಾ.20 ರಂದು ಬೆಳಗ್ಗೆ 10ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಬೈಲಾದ್ರೇಶ್ವರ ಬೆಳ್ಳಿ ಮೂರ್ತಿ ಹಾಗೂ ಗಂಗಸ್ಥಳಕ್ಕೆ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

ಮುದ್ದೇಬಿಹಾಳ : ಪಟ್ಟಣದ ಐದು ಪರೀಕ್ಷಾ ಕೇಂದ್ರಗಳು ಸೇರಿದಂತೆ ಮುದ್ದೇಬಿಹಾಳ,ತಾಳಿಕೋಟಿ,ನಾಗರಬೆಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆಗಳು ಅತ್ಯಂತ ಬಿಗಿ ಭದ್ರತೆಯಲ್ಲಿ ಕಟ್ಟುನಿಟ್ಟಾಗಿ ನಡೆದಿರುವುದಾಗಿ ವರದಿಯಾಗಿದೆ. ಪಟ್ಟಣದ ವಿಬಿಸಿ ಪ್ರೌಢಶಾಲೆ,ಜ್ಞಾನ ಭಾರತಿ ವಿದ್ಯಾಮಂದಿರ, ಚಿನ್ಮಯ ಜೆ.ಸಿ.ಆಂಗ್ಲಮಾಧ್ಯಮ ಪ್ರೌಢಶಾಲೆ,ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಶಿರೋಳ,ಅಭ್ಯುದಯ ಆಂಗ್ಲಮಾಧ್ಯಮ ಪ್ರೌಢಶಾಲೆ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಗೊಂದಲವಿಲ್ಲದೇ ಕಟ್ಟುನಿಟ್ಟಾಗಿ ಪರೀಕ್ಷೆಗಳು ನಡೆದಿವೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಧ್ಯಕ್ಷರು,ತಹಶೀಲ್ದಾರ್ ಕೀರ್ತಿ ಚಾಲಕ ತಿಳಿಸಿದರು.