ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ನಾಮಪತ್ರ ತಿರಸ್ಕೃತಗೊಂಡು ಹೈಕೋರ್ಟ್ ಆದೇಶದೊಂದಿಗೆ ಕಣದಲ್ಲಿ ಉಳಿದಿದ್ದ ನಾಲ್ವರು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಅಂಜುಮನ್ ಹೈಸ್ಕೂಲ್ನಲ್ಲಿ ಸೋಮವಾರ ಸಂಜೆ 4.30ಕ್ಕೆ ಆರಂಭಗೊoಡ ಮತ ಎಣಿಕೆ ಕಾರ್ಯ ರಾತ್ರಿ 12 ಗಂಟೆಗೆ ಪೂರ್ಣಗೊಂಡಿತು.ಮತಎಣಿಕೆ ಕಾರ್ಯವನ್ನು ಕಂದಾಯ ಇಲಾಖೆಯವರಿಗೆ ವಹಿಸಿದ್ದರಿಂದ ಯಾವುದೇ ಗೊಂದಲಗಳಿಲ್ಲದoತೆ ಫಲಿತಾಂಶ ಪ್ರಕಟಿಸಲಾಯಿತು.
ಚುನಾವಣಾಧಿಕಾರಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್, ಅಂಜುಮನ್ ಸಂಸ್ಥೆಯ ಕೇರಟೇಕರ್ ತಬಸ್ಸುಮ್ ಮುಲ್ಲಾ,ತಹಶೀಲ್ದಾರ ಆನಂದ ಕೋಲಾರ,ಸಿಪಿಐ ಮೊಹ್ಮದ ಫಸಿವುದ್ದೀನ್,ಪಿಎಸ್ಐ ಸಂಜಯ ತಿಪರೆಡ್ಡಿ,ಆಲಮಟ್ಟಿ,ತಾಳಿಕೋಟಿ ಪಿಎಸೈಗಳು ಮತ ಎಣಿಕೆ ಕಾರ್ಯಪೂರ್ಣಗೊಳ್ಳುವವರೆಗೂ ಮತ ಎಣಿಕೆ ಕೇಂದ್ರದಲ್ಲಿದ್ದು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನೋಡಿಕೊಂಡರು.
ಫಲಿತಾoಶ ಪ್ರಕಟಿಸಿರುವ ಚುನಾವಣಾಧಿಕಾರಿ ಔದ್ರಾಮ್, ಕಲ್ಬುರ್ಗಿ ಹೈಕೋರ್ಟ್ ಪೀಠದ ಎರಡು ಪ್ರಕರಣಗಳ ಅಂತಿಮ ಆದೇಶಕ್ಕೆ ಈ ಫಲಿತಾಂಶವು ಒಳಗೊಂಡಿದೆ ಎಂದು ಘೋಷಿಸಿದರು.ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ ಸಂಜೆಯವರೆಗೂ ಮತ ಎಣಿಕೆ ಕೇಂದ್ರದಲ್ಲಿದ್ದು ಕಿರಿಯ ಅಧಿಕಾರಿಗಳಿಗೆ ಭದ್ರತೆ ಉಸ್ತುವಾರಿ ಮಾರ್ಗದರ್ಶನ ಮಾಡಿದರು.
ಒಟ್ಟು 2625 ಮತದಾರರ ಪೈಕಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.ಶೇ.92.95ರಷ್ಟು ದಾಖಲೆ ಪ್ರಮಾಣದ ಮತದಾನ ದಾಖಲಾಗಿತ್ತು.ಚುನಾವಣಾಧಿಕಾರಿಯಿಂದ ನಾಮಪತ್ರ ತಿರಸ್ಕಾರಗೊಂಡು ಕಣದಿಂದ ಹೊರಗೆ ಬಿದ್ದಿದ್ದ ಅಂಜುಮನ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ,ಪತ್ರಕರ್ತ ಗುಲಾಮಮೊಹ್ಮದ ದಫೇದಾರ, ಟೆಂಟ್ ಹೌಸ್ ಮಾಲೀಕರ ಸಂಘದ ಅಧ್ಯಕ್ಷ ಯಾಸೀನ ಸೋಠೆ,ಕಾರ್ಮಿಕ ಮುಖಂಡ ಇಸ್ಮಾಯಿಲ್ ಗೋಲಂದಾಜ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾತ್ರಿ 12ಗಂಟೆಯಾದರೂ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆಯನ್ನು ಕಾದು ಕೂತಿದ್ದ ಸಾವಿರಾರು ಬೆಂಬಲಿಗರು ವಿಜಯಪುರ ರಸ್ತೆಯಲ್ಲಿ ಗೆಲುವಿನ ಸಂಭ್ರಮಾಚರಣೆ ಆಚರಿಸುವುದು ಕಂಡು ಬಂದಿತು.
ಗೆಲುವು ಸಾಧಿಸಿದವರು:
ಅಬ್ದುಲಮಜೀದ ಮಕಾನದಾರ(ಮುನ್ನಾ)-1052,ಡೋಂಗ್ರಿಸಾಬ ಢವಳಗಿ-962,ಅಲ್ಲಾಭಕ್ಷ ದೇಸಾಯಿ-954,ಇರ್ಫಾನಲಿ ಕೂಡಗಿ-940,ರಮಜಾನ್ ನದಾಫ-882.ನೂರೇಹುಸೇನ್ ನದಾಫ(ಸದ್ದಾಂ)-872,ಅಬ್ದುಲಗಫೂರ ಮಕಾನದಾರ-871,ಲಾಲಸಾ ಮೋಮಿನ(ದಾದಾ)-851,ಅಬ್ದುಲಅಜೀಜ ನಾಯ್ಕೋಡಿ-815,ಇಶಾಕಸಾ ಮಕಾನದಾರ-794,ಮೊಹ್ಮದರಫೀಕ ನಾಗರಾಳ-773,ಹುಸೇನಬಾದಷಾ ಸಾಲಿಮನಿ-755,ಯಾಸೀನ ಸೋಠೆ-755,ಅತಾವುಲ್ಲಾಷಾ ಮಕಾನದಾರ-734,ಇಸ್ಮಾಯಿಲ್ ಗೊಳಸಂಗಿ-722,ಅಸ್ಲಾo ನಾಗೂರ-717,ಶಬ್ಬೀರ ಕಲ್ಮನಿ-696,ಇಸ್ಮಾಯಿಲ್ ಗೋಲಂದಾಜ-687,ಮಹೆಬೂಬ ಎಂ.ಮುಲ್ಲಾ-672,ಮಹೆಬೂಬ ಆರ್.ಮುಲ್ಲಾ(ಟಾಪ್ಇನ್ಟೌನ್)-672,ಉಮರಫಾರೂಕ್ ಚೌಧರಿ-667,ಸುಲೇಮಾನ ಮಮದಾಪುರ-660,ಗುಲಾಮಮೊಹ್ಮದ ದಫೇದಾರ-640,ಅಬ್ದುಲಜಬ್ಬಾರ ಗೋಲಂದಾಜ-630,ಅಮೀರಸೂಹೈಲ್ ದಖನಿ-626 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.







