ಮುದ್ದೇಬಿಹಾಳ : ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ಸಂಘ ಮುದ್ದೇಬಿಹಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.22 ರಂದು ಸಂಜೆ 4ಕ್ಕೆ ಪಟ್ಟಣದ ವಿದ್ಯಾನಗರದಲ್ಲಿರುವ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾನಿಧ್ಯವನ್ನು ಕೋಳೂರು ಬಸವೇಶ್ವರ ದೇವಸ್ಥಾನದ ಆರ್ಚಕ ಸಂತೋಷಸ್ವಾಮಿ ಹಿರೇಮಠ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಉದ್ಘಾಟಿಸುವರು.ಗಾಯಕ ಸಂಗಮೇಶ ಶಿವಣಗಿ ಅಧ್ಯಕ್ಷತೆ ವಹಿಸುವರು.
ಗಣ್ಯರಾದ ಎಸ್.ಎಸ್. ಹೂಗಾರ, ಎ.ಆರ್. ಮುಲ್ಲಾ,ರಂಗಭೂಮಿ ಕಲಾವಿದ ವೀರೇಶಗೌಡ ಹಿರೇಗೌಡರ, ಹಾಸ್ಯನಟರಾದ ಗೋಪಾಲ ಹೂಗಾರ್,ಶ್ರೀಶೈಲ ಹೂಗಾರ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಮುನೀರ ಅವಟಿಗೇರ್, ಉಪಾಧ್ಯಕ್ಷರಾಗಿ ಎಸ್.ಕೆ. ಘಾಟಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಲ್. ಮಮದಾಪುರ, ಜಂಟಿ ಕಾರ್ಯದರ್ಶಿಯಾಗಿ ಭರತ ಉಪ್ಪಲದಿನ್ನಿ, ಖಜಾಂಚಿಯಾಗಿ ಹನುಮಂತ ಮಹಾಲಿಂಗಾಪುರ,ಸದಸ್ಯರಾಗಿ ವಿನಾಯಕ ಭಟ್, ಪ್ರದೀಪ್ ದಾಸರ, ಶರಣು ಅಮರಣ್ಣನವರ, ಶಾರದಾ ಬಿದರಕುಂದಿ, ಸಲಹಾ ಸಮಿತಿ ಸದಸ್ಯರು ಮಹಾಂತೇಶ್ ಸಜ್ಜನ , ಕಿರಣ ಗರಸಂಗಿ, ಮೌನೇಶ ಬಡಿಗೇರ್ ದೀಪರತ್ನಶ್ರೀ ಆಲೂರ, ಶಾಂತಾ ನಾಗೋಡ, ಅಕ್ಬರ ಗುರಿಕಾರ, ಮಲ್ಲು ತಟ್ಟಿ, ಬಸವರಾಜ್ ಹಂದ್ರಾಳ ಮಂಜು ಉಪ್ಪಲದಿನ್ನಿ, ಸುನೀಲ ಚಲವಾದಿ, ವಿಠ್ಠಲ ಬಿಸಲದಿನ್ನಿ, ನಾಗೇಶ ಮೇಟಿ ಎಂ ಐ ಖಾಜಿ ವಾಸುದೇವ ಬಡಿಗೇರ್, ಬಸನಗೌಡ ಬಿರಾದಾರ್ ಆಯ್ಕೆಯಾಗಿದ್ದಾರೆ.







