ಮುದ್ದೇಬಿಹಾಳ : ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ಜನಪದ ಕರಗ ಕೃತಿ ಲೋಕಾರ್ಪಣೆ ಹಾಗೂ ಸಾಧಕ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆ.22 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಂಟೋಜಿ ಭಾವೈಕ್ಯತೆ ಮಠದ ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು.ಬಸರಕೋಡ ಪವಾಡ ಬಸವೇಶ್ವರ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಉದ್ಘಾಟಿಸುವರು.ಎಸ್.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ ಕೃತಿ ಲೋಕಾರ್ಪಣೆ ಮಾಡುವರು.ಕರ್ನಾಟಕ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳು :
ಅಶೋಕ ತಡಸದ (ಗೌರವಾಧ್ಯಕ್ಷರು), ಎ.ಆರ್.ಮುಲ್ಲಾ (ಅಧ್ಯಕ್ಷರು), ಪ್ರಕಾಶ ನರಗುಂದ (ಉಪಾಧ್ಯಕ್ಷರು), ಎಸ್.ಬಿ.ಕಂಚಾಣಿ (ಕಾರ್ಯಾಧ್ಯಕ್ಷರು), ಎಸ್.ಕೆ.ಘಾಟಿ (ಜಂಟಿ ಕಾರ್ಯದರ್ಶಿಗಳು), ಎಲ್.ಎಂ.ಚಲವಾದಿ (ಪ್ರಧಾನ ಕಾರ್ಯದರ್ಶಿಗಳು), ಎಸ್.ವಾಯ್.ವಗ್ಗರ (ಖಜಾಂಚಿ), ಎಂ.ಎನ್.ಮಾಗಿ (ಸಂಘಟನಾ ಕಾರ್ಯದರ್ಶಿ), ಸರಸ್ವತಿ ಪೀರಾಪೂರ (ಸಂಚಾಲಕಿ), ಚೇತನ ಶಿವಶಿಂಪಿ (ಕಾನೂನು ಸಲಹೆಗಾರರು), ಹುಸೇನ ಮುಲ್ಲಾ (ಪತ್ರಿಕಾ ಸಲಹೆಗಾರರು), ಸದಸ್ಯರುಗಳಾಗಿ ಚಂದ್ರಶೇಖರ ಕಲಾಲ, ರಮೇಶ ಇಂಗಳಗಿ, ಪರಶುರಾಮ ಚೌಡಕೇರ, ಎಂ.ವ್ಹಿ.ಬಿಳೇಭಾವಿ, ಎಸ್.ಆರ್.ಪಾಟೀಲ, ರೂಪರಾಣಿ ಪಟೆಗಾರ, ನರಸಮ್ಮ ಗುಬಚಿ, ವಿಜಯ ಸೋನಾರ







