ಮುದ್ದೇಬಿಹಾಳ : ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಸಾಲ ಕೊಡಲು ನೂರೆಂಟು ಷರತ್ತುಗಳನ್ನು ವಿಧಿಸುವುದಲ್ಲೇ ತ್ವರಿತವಾಗಿ ಸಾಲದ ಸೌಲಭ್ಯ ದೊರೆಯುವುದಿಲ್ಲ.ಆದರೆ ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕನ ವಿಶ್ವಾಸವೇ ಪ್ರಧಾನವಾಗಿದ್ದು ಸಾಲ ವಿತರಣೆ ತ್ವರಿತವಾಗಿಯೂ ಆಗುತ್ತದೆ ಎಂದು ಸಹಕಾರ ಇಲಾಖೆಯ ನಿವೃತ್ತ ಉಪ ನಿಬಂಧಕ ಪಿ.ಬಿ.ಕಾಳಗಿ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಮದರಿ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಹಂಡೇಸಿರಿ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪತ್ತಿನ ಲಭ್ಯತೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಪತ್ತಿನ ಸಹಕಾರ ಸಂಘಗಳ ಜೀವಂತಿಕೆ ಇರುತ್ತದೆ.ಜಾತ್ಯಾತೀತವಾಗಿ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಸಂಘ ಬೆಳವಣಿಗೆ ಸಾಧಿಸುತ್ತದೆ ಎಂದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಹಂಡೇಸಿರಿ ಸಹಕಾರ ಸಂಘದಿAದ ಜನರಿಗೆ ಸಾಲ ಸೌಲಭ್ಯಗಳು ದೊರೆತು ಬಡವರ ಅಭಿವೃದ್ಧಿಗೆ ಆದ್ಯತೆ ಸಿಗಲಿ ಎಂದರು.
ಹAಡೇಸಿರಿ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಹಂಡರಗಲ್ಲ ಮಾತನಾಡಿ, ಸಮಾನ ಮನಸ್ಕ ನೌಕರರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸೇರಿಸಿದ್ದ ಹಣವೇ ಇಂದು ಸಂಘ ಸ್ಥಾಪನೆಗೆ ಪ್ರೇರಣೆಯಾಗಿದೆ.ಗ್ರಾಹಕರ ವಿಶ್ವಾಸಗಳಿಸಿಕೊಂಡು ಸಂಘವನ್ನು ಮುನ್ನಡೆಸಲಾಗುವುದು ಎಂದರು. ಸೇರಿಕೊಂಡು ಆರಂಭಿಸಿದ ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ಕೊಡೇಕಲ್ದ ವೃಷಭೇಂದ್ರ ಸ್ವಾಮೀಜಿ,ಆರ್.ಎಸ್.ಬಿರಾದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಆರ್.ಬಿ.ಪಾಟೀಲ,ಹಂಡೇಸಿರಿ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಆರ್.ಕೂಡಗಿ, ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಿ ತೊಂಡಿಹಾಳ,ಹAಡೇವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ, ಮುಖಂಡರಾದ ಮಹ್ಮದರಫೀಕ ನಾಡಗೇರ,ಎಚ್.ಟಿ.ಬಿರಾದಾರ,ಮುದಕಪ್ಪಗೌಡ ತಂಗಡಗಿ,ಬಿ.ಆರ್.ರೂಡಗಿ , ನಿರ್ದೇಶಕರಾದ ಎಂ.ಬಿ.ಪಾಟೀಲ, ಎಂ.ಬಿ.ಬಿರಾದಾರ, ಬಿ.ಜಿ.ಬಿರಾದಾರ,ಎಸ್.ಟಿ.ಪಾಟೀಲ,ಆರ್.ಎಸ್.ಬಿರಾದಾರ,ಬಿ.ಎಚ್.ಭಗವತಿ,ಆರ್.ಬಿ.ಪಾಟೀಲ,ಬಿ.ಜಿ.ಬಿರಾದಾರ,ದ್ರಾಕ್ಷಾಯಣಿ ಗೌಡರ ಇದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಆರ್.ಎಸ್.ಬಿರಾದಾರ ಸ್ವಾಗತಿಸಿದರು.ಸಿದ್ದನಗೌಡ ಕಾಶಿನಕುಂಟಿ ನಿರೂಪಿಸಿದರು.ರವಿ ಗೌಡರ ವಂದಿಸಿದರು.







