ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ ತಾಲೂಕಿನ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಗ್ಯಾಸ್ ವಿತರಣಾ ಸೇವೆಯಲ್ಲಿ ವಿಳಂಬ ಮಾಡುತ್ತಿರುವದು ಮತ್ತು ಗ್ರಾಹಕರಿಂದ ಮನೆಗೆ ಸಿಲಿಂಡರ್ ವಿತರಣೆ ಮಾಡಿದಾಗ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವದಲ್ಲದೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಆಕ್ರಮ ಮಾರಾಟ ಮಾಡುತಿದ್ದು ಸದರಿ ವಿತರಕರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಮಾರುತಿ ಹಿಪ್ಪರಗಿ ಆಗ್ರಹಿಸಿದ್ದಾರೆ.

ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕರಿಗೆ ದೂರು ನೀಡಿರುವ ಅವರು,ಮುದ್ದೇಬಿಹಾಳ ತಾಲೂಕಿನಲ್ಲಿ ಸರ್ಕಾರದವತಿಯಿಂದ ನೇಮಕವಾಗಿರುವ ಅಧಿಕೃತ ಸಿಲಿಂಡರ್ ವಿತರಕರಾದ ಶ್ರೀ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಸಿಲಿಂಡರ್ ವಿತರಣೆಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ತೋಂದರೆ ಕೋಡುತ್ತಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆ,ಮನೆಗೆ ಗ್ಯಾಸ್ ವಿತರಿಸುವ ಸಂಧರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ. ಪ್ರತಿ ಸಿಲೆಂಡರ್‌ನಿAದ 20 ಹಾಗೂ ಕೆಲವು ಕಡೆ 50 ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಸಿಲಿಂಡರ್ ಬುಕ್ ಮಾಡಿ ಸಮಯ ಮೀರಿದರು ಸರಿಯಾದ ಸಮಯಕ್ಕೆ ಸಿಲಿಂಡರ್ ತಲುಪಿಸುವದಿಲ್ಲ ಈ ಕುರಿತು ಗ್ಯಾಸ್ ವಿತರಕರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವದಿಲ್ಲ. ಈ ಕುರಿತು ಮೌಖಿಕವಾಗಿ ಗ್ಯಾಸ್ ವಿತರಕರಿಗೆ ತಿಳಿಸಿದರು ಯಾವುದೆ ಪ್ರಯೋಜನವಾಗಿರುವದಿಲ್ಲ. ಸಿಲಿಂಡರ್‌ಗಳನ್ನು ಹೋಟೆಲ್ ಹಾಗೂ ಇನ್ನಿತರರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ವಾಣಿಜ್ಯ ಬಳಕೆ ಸಿಲೆಂಡರಗಳನ್ನAತು ಯಾವುದೆ ದಾಖಲೆಗಳಿಲ್ಲದೆ ಬೆಕಾ ಬಿಟ್ಟಿ ಕಾಳಸಂತೆಯಲ್ಲಿ ಮಾರಾಟ ಮತ್ತು ವಿತರಣೆ ಮಾಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಶ್ರೀಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ವಿತರಣೆ, ಬಿಲ್ಲಿಂಗ್, ಸ್ಟಾಕ್ ನಿರ್ವಹಣೆ ಗ್ರಾಹಕರಿಗೆ ಸೇವೆ ನೀಡುವಲ್ಲಿ ಮತ್ತು ಗ್ಯಾಸ್ ಸುರಕ್ಷಿತವಾಗಿ ವಿತರಣೆಯಾಗುವಲ್ಲಿ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಕಾರಣ ಈ ಕೂಡಲೆ ಈ ಕುರಿತು ತನಿಖೆ ನಡೆಸಿ ಸದರಿ ಗ್ಯಾಸ್ ಎಜೆನ್ಸಿ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು, ಒಂದು ವಾರದವಳಗೆ ಶ್ರೀಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ತನಿಖೆ ಕೈಗೋಂಡು ಕ್ರಮ ಜರುಗಿಸದೆ ಇದ್ದಲ್ಲಿ ಮುದ್ದೇಬಿಹಾಳ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

Latest News

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

​ಮುದ್ದೇಬಿಹಾಳ : ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ;                                                                                 ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.ಪರೀಕ್ಷೆಗೆ ಕೂತಿದ್ದ 229 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಆಸೀಫಾ ಕಾಶೀಮ್ ಖತೀಬ ಶೇ.98ರಷ್ಟು ಅಂಕ ಪಡೆದು ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಇನ್ನುಳಿದAತೆ ಶೇ.97.83 ಅಂಕ ಪಡೆದ ಲಕ್ಷಿö್ಮÃ ಉಂಡಿ ದ್ವಿತೀಯ,ಶೇ.97.33 ಅಂಕ ಪಡೆದ ಸುಷ್ಮಿತಾ ದನ್ನೂರ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಉತ್ತೀರ್ಣರಾದ 229ರಲ್ಲಿ ಅದರಲ್ಲಿ 142 ಡಿಸ್ಟಿಂಕ್ಷನ್,76 ಪ್ರಥಮ,11 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗಣಿತದಲ್ಲಿ 54,ಬಯೋಲಜಿ

ಯೂರಿಯಾ,ಡಿಎಪಿ ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯ

ಯೂರಿಯಾ,ಡಿಎಪಿ ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯ

ಮುದ್ದೇಬಿಹಾಳ : ಮುಂಗಾರು ಹಂಗಾಮಿನಲ್ಲಿ ಯೂರಿಯಾ ವಿತರಣೆಗೆ ಆಪ್ ಅಭಿವೃದ್ಧಿಪಡಿಸಲಾಗಿದ್ದು ಎಲ್ಲ ಕೃಷಿ ಪರಿಕರ ಮಾರಾಟಗಾರರು ಅದನ್ನು ಬಳಸಿಕೊಂಡು ಯೂರಿಯಾ ಮಾರಾಟ ಮಾಡಬೇಕು.ಯೂರಿಯಾ ,ಡಿಎಪಿ ಗೊಬ್ಬರ ಖರೀದಿಸಲು ರೈತರ ಖಾತೆಗಳು ಎಫ್.ಐ.ಡಿ ನೋಂದಣಿಯಾಗಿರುವುದು ಕಡ್ಡಾಯವಾಗಿದೆ ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್, ಎಂದು ಹೇಳಿದರು. ಪಟ್ಟಣದ ಹುಡ್ಕೋದಲ್ಲಿರುವ ಬಿ.ಜಿ.ಮಠ್ ಸಭಾಭವನದಲ್ಲಿ ಮಂಗಳವಾರ ಕೃಷಿಪರಿಕರ ಮಾರಾಟಗಾರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸನ್ 2026-27ನೇ ಸಾಲಿನಲ್ಲಿ ರೈತರಿಗೆ ಯೂರಿಯಾ