ತಾಳಿಕೋಟಿ : ಕೊಡುಗೈ ದಾನಿಗಳಲ್ಲಿ ಈ ಭಾಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಅಸ್ಕಿ ಫೌಂಡೇಶನ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರು ನುಡಿದರು.
ತಾಳಿಕೋಟಿ ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಗುರುವಾರ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠದ ಆಡಳಿತಾಧಿಕಾರಿ ವೇ.ಮರುಗೇಶ ವಿರಕ್ತಮಠ ಮಾತನಾಡಿ, ಹಣವುಳ್ಳವರು ಸಮಾಜದಲ್ಲಿ ಅಗಣಿತ ಸಂಖ್ಯೆಯಲ್ಲಿದ್ದಾರೆ. ಆದರೆ ಕೊಡುವ ಮನಸ್ಸು ಎಲ್ಲರಲ್ಲಿಯೂ ಬರುವುದಿಲ್ಲ.ಅಸ್ಕಿ ಅವರು ಸಮಾಜದ ಸೇವೆ ಶ್ಲಾಘನೀಯವಾಗಿದೆ.ಈ ಕಾರ್ಯದಿಂದ ಮತ್ತಷ್ಟು ಜನರಿಗೆ ಹತ್ತಿರ ಆಗುವ ಕೆಲಸ ಆಗಿದೆ.ಶ್ರೀ ಮಠದ ಆಶೀರ್ವಾದ ಅವರ ಮೇಲಿರಲಿದೆ ಎಂದರು.
ಅಸ್ಕಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ,ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಅಸ್ಕಿ ಫೌಂಡೇಶನ್ ಜಾತ್ಯಾತೀತವಾಗಿ ಕೆಲಸ ಮಾಡಲಿದೆ.ಈ ವರ್ಷದಿಂದ ಮತಕ್ಷೇತ್ರದಲ್ಲಿ ಮನೆ ಮನೆಗಳಲ್ಲಿ ಹಾಕಲು ಎಲ್ಲ ಪ್ರಮುಖ, ಜಾತ್ರೆ,ಉತ್ಸವ,ಹಬ್ಬ,ಹರಿದಿನಗಳನ್ನು ಕ್ಯಾಲೆಂಡರ್ ಹೊಂದಿದೆ ಎಂದರು.
ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ,ಹೋರಾಟಗಾರ ಜೈಭೀಮ ಮುತ್ತಗಿ, ಮಾತನಾಡಿದರು.
ಮುಸ್ಲಿಂ ಸಮಾಜದ ಧರ್ಮಗುರು ಸಯ್ಯದ ಶಕೀಲ ಅಹ್ಮದ್ ಖಾಜಿ, ಮುಖಂಡರಾದ ಇಬ್ರಾಹಿಂ ಮನ್ಸೂರ,ವಿಜಯಸಿಂಗ ಹಜೇರಿ, ಶಿವರಾಜ ಗುಂಡಕನಾಳ,ವಿರೇಶ ಬಾಗೇವಾಡಿ, ಜಮಾದಾರ ಚಾಚಾ,ಮಹೆಬೂಬ ಕೆಂಭಾವಿ,ಪರಶುರಾಮ ತಂಗಡಗಿ,ಬಸವರಾಜ ಜೀರಲಭಾವಿ,ರಹಿಂಸಾಬ ಅವಟಿ,ಯಲ್ಲಪ್ಪ ಮಾದರ,ವೀರೇಶಗೌಡ ಅಸ್ಕಿ, ಆನಂದ ಅಸ್ಕಿ, ರಾಮನಗೌಡ ಹೊಸಮನಿ, ಆಸೀಫ ಕೆಂಭಾವಿ,ಶಮ್ಸುದ್ದೀನ ನಾಲಬಂದ, ಮಹಾಂತೇಶ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಢವಳಗಿ ಇದ್ದರು.







