ಯುವಕರಿಗೆ ಉದ್ಯೋಗ ನೀಡಿಕೆ ಹೆಚ್ಚಳ : ಕರ್ನಾಟಕಕ್ಕೆ 63,049.58 ಕೋಟಿ ರೂ.ತೆರಿಗೆ ಪಾಲು-ನಡಹಳ್ಳಿ

ಯುವಕರಿಗೆ ಉದ್ಯೋಗ ನೀಡಿಕೆ ಹೆಚ್ಚಳ : ಕರ್ನಾಟಕಕ್ಕೆ 63,049.58 ಕೋಟಿ ರೂ.ತೆರಿಗೆ ಪಾಲು-ನಡಹಳ್ಳಿ

ಮುದ್ದೇಬಿಹಾಳ : 2047ರ ಹೊತ್ತಿಗೆ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಬಿಜೆಪಿಯ ಸಂಕಲ್ಪಕ್ಕೆ ಈ ಬಜೆಟ್ ಭದ್ರ ಬುನಾದಿಯಾಗಿದ್ದು ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅದ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ವಿಷಯವಾಗಿ ಮಾತನಾಡಿದ ಅವರು, 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಕೇಂದ್ರ ತೆರಿಗೆಗಳ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.3.64% ರಿಂದ 4.13% ಕ್ಕೆ ಏರಿಕೆಯಾಗಿದೆ.ಇದರಿಂದಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ತೆರಿಗೆಗಳ ಪಾಲಿನ ರೂಪದಲ್ಲಿ ₹63,049.58
ಕೋಟಿ ಹಂಚಿಕೆಯಾಗಲಿದೆ. ಕರ್ನಾಟಕದ ಹೈ-ಸ್ಪೀಡ್ ರೈಲು ಕಾರಿಡಾರ್ಗಳ ಸಂಪರ್ಕ
ದೇಶದಲ್ಲಿ ಪ್ರಸ್ತಾಪಿಸಲಾದ ಏಳು ಹೈ-ಸ್ಪೀಡ್ ರೈಲು ಕಾರಿಡಾರ್ಗಳಲ್ಲಿ ಕರ್ನಾಟಕಕ್ಕೆ ನೇರ ಪ್ರಯೋಜನ ನೀಡುವ ಎರಡು ಪ್ರಮುಖ ಮಾರ್ಗಗಳು ಹೈದರಾಬಾದ್ – ಬೆಂಗಳೂರು ಮತ್ತು ಚೆನ್ನೆöÊ – ಬೆಂಗಳೂರು ಘೋಷಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಬಜೆಟ್ ಬೆಂಬಲವಾಗಿ ₹500 ಕೋಟಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

2025–26 ಹಣಕಾಸು ವರ್ಷದಲ್ಲಿ ₹350 ಕೋಟಿ ಅನುದಾನ ನೀಡಲಾಗಿತ್ತು. ಈ ಹೆಚ್ಚುವರಿ ಅನುದಾನದಿಂದ ಬೆಂಗಳೂರಿನ ಮಧ್ಯಮವರ್ಗದ ಜನತೆಗೆ ಹೆಚ್ಚಿನ ಸೌಲಭ್ಯಗಳು ಹಾಗೂ ಸುಗಮ ಸಾರಿಗೆ ವ್ಯವಸ್ಥೆ ಲಭಿಸಲಿದೆ. ಉನ್ನತ ಮೌಲ್ಯದ ಕೃಷಿಗೆ ಉತ್ತೇಜನ ಕರ್ನಾಟಕದ ಹೆಮ್ಮೆಯಾದ ಶ್ರೀಗಂಧದ ಕೃಷಿಯನ್ನು ಉತ್ತೇಜಿಸಲು ಮತ್ತು ಅದರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ. ‘ತೆಂಗು ಪ್ರಚಾರ ಯೋಜನೆ’ಯನ್ನು ಘೋಷಿಸಲಾಗಿದೆ.ಭಾರತೀಯ ಗೋಡಂಬಿಯನ್ನು 2030ರ ವೇಳೆಗೆ ಜಾಗತಿಕ ಬ್ರಾಂಡ್ ಆಗಿ ಪರಿವರ್ತಿಸಲು ಮತ್ತು ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಸೆಮಿಕಂಡಕ್ಟರ್ ಹಬ್‌ಗೆ ಬಲ ನೀಡಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ಘೋಷಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉತ್ಪಾದನಾ ಯೋಜನೆಗೆ 40,000 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಜಾಗತಿಕ ಕ್ಲೌಡ್ ಸೇವೆ ನೀಡುವ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ನೀಡಿರುವುದು, ಬೆಂಗಳೂರಿನ ಐಟಿ ಉದ್ಯಮ ಮತ್ತು ಡಿಜಿಟಲ್ ಆರ್ಥಿಕತೆಗೆ ಭಾರಿ ಬೂಸ್ಟ್ ನೀಡಲಿದೆ.ಜೈವಿಕ ಔಷಧಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು 10,000 ಕೋಟಿ ರೂ.ಮೊತ್ತದ ಬಯೋ ಫಾರ್ಮಾಶಕ್ತಿ ಯೋಜನೆಯನ್ನು ಘೋಷಿಸಲಾಗಿದೆ. ಇದು ದೇಶದ ಬಯೋಟೆಕ್ ಹಬ್ ಆಗಿರುವ ಕರ್ನಾಟಕದ ಬಯೋಫಾರ್ಮಾ ಉದ್ಯಮಕ್ಕೆ ಭಾರಿ ಶಕ್ತಿ ನೀಡಲಿದೆ.ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ವಿಮಾನದ ಬಿಡಿಭಾಗಗಳು, ಎಂಜಿನ್ ಮತ್ತು ಕಚ್ಚಾವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿರುವುದರಿಂದ ಏರೋಸ್ಪೇಸ್ ಕೇಂದ್ರವಾಗಿರುವ ಕರ್ನಾಟಕದ ಬೆಂಗಳೂರಿಗೆ ಲಾಭವಾಗಲಿದೆ ಎಂದು ತಿಳಿಸಿದರು.

‘ಸಿಟಿ ಎಕನಾಮಿಕ್ ರೀಜನ್’ ಯೋಜನೆಯನ್ನು ತರಲಾಗಿದ್ದು , ಪ್ರತಿ ಪ್ರದೇಶಕ್ಕೆ ಐದು ವರ್ಷ ಗಳ ಅವಧಿಗೆ 5,000 ಕೋಟಿ ರೂ.ಹÀಂಚಿಕೆ ಮಾಡಲಾಗಿದೆ.10 ಲಕ್ಷಕ್ಕೂ ಹೆಚ್ಚು ಮತ್ತು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ವಿಶೇಷ ಮೂಲಸೌಕರ್ಯ ಬೆಂಬಲ ನೀಡಲಾಗುತ್ತಿದ್ದು , ಕರ್ನಾಟಕದ ಪ್ರಮುಖ ನಗರಗಳು ಈ ಯೋಜನೆಗಳಡಿ ಆಧುನಿಕ ಸೌಲಭ್ಯಗಳನ್ನು ಪಡೆಯಲಿವೆ ಎಂದು ಮಾಹಿತಿ ನೀಡಿದರು.

Latest News

ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಮುದ್ದೇಬಿಹಾಳ : ಸಮೀಪದ ಬಿಜ್ಜೂರ ಗ್ರಾಮದಲ್ಲಿ ಫೆ.1 ರಂದು ಕೃಷಿ ಚಟುವಟಿಕೆ ಕೈಗೊಂಡಿದ್ದ ಸಂದರ್ಭದಲ್ಲಿ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತ್ ವಿಜಯಪುರ

ಬಿ.ಎಸ್.ಎಫ್‌ಗೆ ಆಯ್ಕೆ :                                                                  ಫೆ.5 ರಂದು ಅಭಿನಂದನಾ ಸಮಾರಂಭ

ಬಿ.ಎಸ್.ಎಫ್‌ಗೆ ಆಯ್ಕೆ : ಫೆ.5 ರಂದು ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಬಿ.ಎಸ್.ಎಫ್‌ಗೆ ಆಯ್ಕೆಯಗೊಂಡ ತಾಲೂಕಿನ ಪ್ರಥಮ ಯುವತಿ ಸಿದ್ದಾಪೂರ ಪಿ.ಟಿ ಗ್ರಾಮದ ಕುಮಾರಿ

ಮುಸ್ಲಿಂ ಸಮಾಜದವರಿಂದ ಮನವಿ:                                               ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ಆಗ್ರಹ

ಮುಸ್ಲಿಂ ಸಮಾಜದವರಿಂದ ಮನವಿ: ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ಆಗ್ರಹ

ಮುದ್ದೇಬಿಹಾಳ : ಪೂರ್ವದ ಕಾಲದಿಂದಲೂ ಹಿರಿಯರು ನಮ್ಮ ಸಮಾಜದವರು ಯಾರೇ ನಿಧನ ಹೊಂದಿದರೂ ಅವರ

ಯುವಕರಿಗೆ ಉದ್ಯೋಗ ನೀಡಿಕೆ ಹೆಚ್ಚಳ :                             ಕರ್ನಾಟಕಕ್ಕೆ 63,049.58 ಕೋಟಿ ರೂ.ತೆರಿಗೆ ಪಾಲು-ನಡಹಳ್ಳಿ

ಯುವಕರಿಗೆ ಉದ್ಯೋಗ ನೀಡಿಕೆ ಹೆಚ್ಚಳ : ಕರ್ನಾಟಕಕ್ಕೆ 63,049.58 ಕೋಟಿ ರೂ.ತೆರಿಗೆ ಪಾಲು-ನಡಹಳ್ಳಿ

ಮುದ್ದೇಬಿಹಾಳ : 2047ರ ಹೊತ್ತಿಗೆ 'ವಿಕಸಿತ ಭಾರತ'ವನ್ನು ನಿರ್ಮಿಸುವ ಬಿಜೆಪಿಯ ಸಂಕಲ್ಪಕ್ಕೆ ಈ ಬಜೆಟ್ ಭದ್ರ ಬುನಾದಿಯಾಗಿದ್ದು ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅದ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ವಿಷಯವಾಗಿ ಮಾತನಾಡಿದ ಅವರು, 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಕೇಂದ್ರ ತೆರಿಗೆಗಳ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.3.64% ರಿಂದ 4.13% ಕ್ಕೆ

ಸಮುದಾಯದ ಏಳ್ಗೆಗೆ ಬದ್ಧ-ಮಲೀಕಸಾಬ ನದಾಫ

ಸಮುದಾಯದ ಏಳ್ಗೆಗೆ ಬದ್ಧ-ಮಲೀಕಸಾಬ ನದಾಫ

ಮುದ್ದೇಬಿಹಾಳ : ಸಮಾಜದಲ್ಲಿ ನದಾಫ/ಪಿಂಜಾರ್ ಸಮುದಾಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ತಾಲ್ಲೂಕು ಘಟಕ ಶ್ರಮಿಸುತ್ತಿದೆ ಎಂದು ಮುದ್ದೇಬಿಹಾಳ ತಾಲೂಕಾ ಘಟಕದ ಅಧ್ಯಕ್ಷ ಮಲೀಕಸಾಬ ನದಾಫ ಹೇಳಿದರು. ಪಟ್ಟಣದಲ್ಲಿ ಶನಿವಾರ ನದಾಫ / ಪಿಂಜಾರ್ ಸಂಘದಿAದ 2026ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಂಘವು ಸಮಾಜದ ಶೈಕ್ಷಣಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ದಿಗೆ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.ನೂತನ ಕ್ಯಾಲೆಂಡರ್ ಮೂಲಕ