ಮುದ್ದೇಬಿಹಾಳ : ಸಮೀಪದ ಬಿಜ್ಜೂರ ಗ್ರಾಮದಲ್ಲಿ ಫೆ.1 ರಂದು ಕೃಷಿ ಚಟುವಟಿಕೆ ಕೈಗೊಂಡಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟ ರೈತ ಗಂಗಪ್ಪ ಗುರಿಕಾರ ಅವರ ಕುಟುಂಬಕ್ಕೆ ಶಾಸಕ ಸಿ.ಎಸ್.ನಾಡಗೌಡ ಗುರುವಾರ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ದೌರ್ಜನ್ಯ ತಡೆ ಸಮೀತಿ ನಾಮನಿರ್ದೇಶಿತ ಸದಸ್ಯ ಮಲ್ಲು ತಳವಾರ, ವಿಪತ್ತು ನಿರ್ವಹಣಾ ಕಾಯ್ದೆ 12ರ ಪ್ರಕಾರ, ವಿಪತ್ತುಗಳಿಂದ ಉಂಟಾಗುವ ಮಾನವ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯದ ಕಾನೂನುಬದ್ಧ ಕರ್ತವ್ಯವಾಗಿದ್ದು ಎಸ್.ಡಿ.ಆರ್.ಎಫ್ ನಿಧಿಯಡಿ ಮೃತ ರೈತನ ಕುಟುಂಬಕ್ಕೆ ನಾಲ್ಕು ಲಕ್ಷ ರೂ.ಪರಿಹಾರ ನೀಡಬೇಕು.ಸದರಿ ರೈತನು ಅವರ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದು ಅವರ ಅಕಾಲಿಕ ನಿಧನದಿಂದ ಪತ್ನಿ ಹಾಗೂ ಅವಲಂಬಿತ ಕುಟುಂಬದ ಸದಸ್ಯರು ತೀವ್ರ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ರಾಜ್ಯ ಸರ್ಕಾರದಿಂದ ಸಹಾನುಭೂತಿಯಿಂದ ಪರಿಹಾರ ಮಂಜೂರಿ ಮಾಡಲು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ನಾಡಗೌಡರು, ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಮೃತ ರೈತನ ಕುಟುಂಬದವರಿಗೆ ಸಾಧ್ಯವಾಷ್ಟು ಹೆಚ್ಚಿನ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ನಾಲತವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಶೋಕ ಕಾಂಬಳೆ, ಗ್ರಾಮದ ಮುಖಂಡರಾದ ಬಸಪ್ಪ ಕಛೇರಿ, ಯಮನಪ್ಪ ಕಮರಿ, ಶರಣಪ್ಪ ನಂದಿಹಾಳ,ಸೋಮಪ್ಪ ಚಲವಾದಿ,ಹುಲಗಪ್ಪ ಕಮರಿ,ಗದೆಪ್ಪ ಗುರಿಕಾರ, ವಿರೇಶ ಬಡಿಗೇರ,ಗಂಗಪ್ಪ ವಾಲಿಕಾರ,ಶರಣಪ್ಪ ಕಂಬಾರ, ತಾಲ್ಲೂಕು, ೆ ಇದ್ದರು.



