ಮುದ್ದೇಬಿಹಾಳ : ಕೆಪಿಟಿಸಿಎಲ್ ಹಾಗೂ ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುವ ನಮ್ಮ ಸಮಾಜದ ಬಾಂಧವರು ಇನ್ನಿತರ ಸಮುದಾಯದವರೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯದೊoದಿಗೆ ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ನೀಡಬೇಕು ಎಂದು ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಮಂಡಳಿ ಸಂಘದ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈನೂದ್ದೀನ ಜಹಾಗೀರದಾರ ಹೇಳಿದರು.
ಪಟ್ಟಣದ ದಿ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ನಾವು ಸೇವೆ ಸಲ್ಲಿಸುವುದು ಸಾರ್ವಜನಿಕರು,ರೈತರಿಗಾಗಿ ಎಂಬುದನ್ನು ಮರೆಯಬಾರದು.ನಮ್ಮ ನಡುವಳಿಕೆ ಬಗ್ಗೆ ಇತರರು ಬೆರಳು ಮಾಡಿ ತೋರಿಸದಂತೆ ಇರಬೇಕು.ಮುಸ್ಲಿಂ ನೌಕರರ ಕಲ್ಯಾಣ ಸಂಘಟನೆ ಸಲುವಾಗಿ ಈ ಸಂಘ ಅಸ್ತಿತ್ವದಲ್ಲಿದ್ದು ಜಿಲ್ಲೆಯಲ್ಲಿ ನಮ್ಮ ಸಮಾಜದವರನ್ನು ಒಗ್ಗೂಡಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಬೆರೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೇoದ್ರ ಸಮೀತಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ನಾಯ್ಕೋಡಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ಸಂಬoಧಿ ಇಲಾಖೆಯಲ್ಲಿ ನಮ್ಮ ಸಮಾಜದ ನೌಕರರ ಸಂಖ್ಯೆ ಹೆಚ್ಚಿದ್ದರೂ ಸಂಘಟನೆಯಾಗಿಲ್ಲ ಎಂಬ ಕೊರಗು ಇತ್ತು.ಅದನ್ನು ಕವಿಪ್ರನಿನಿ ಮೆವಾ ಸಂಘಟನೆ ನೀಗಿಸುವತ್ತ ಹೆಜ್ಜೆ ಇರಿಸಿದೆ.ಪ್ರತಿ ಶಾಖೆಗಳಲ್ಲೂ ನಮ್ಮ ನೌಕರರನ್ನು ಸಂಘಟಿಸುವ ಜೊತೆಗೆ ಇನ್ನಿತರರ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ಸಂಘದಿAದ ನೀಡಲಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ಮೈನೂದ್ದೀನ ನಾಯ್ಕೋಡಿ, ನಮ್ಮ ಸಮಾಜದ ನೌಕರ ವರ್ಗದವರ ಸಂಘಟನೆಗಾಗಿ ನಿಡಗುಂದಿ,ತಾಳಿಕೋಟಿ,ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ಶಾಖೆಗಳಲ್ಲಿ ಆರಂಭಿಕವಾಗಿ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದ್ದು ನೌಕರರ ಬೇಕು ಬೇಡಗಳಿಗೆ ನಮ್ಮ ಸಂಘ ಸ್ಪಂದಿಸಲಿದೆ ಎಂದರು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಇಲಿಯಾಸ್ ಮೋಮಿನ,ಸಂಘದ ಹಿರಿಯ ನಾಯಕ ಬಬ್ಲು ಇನಾಮದಾರ, ಎ.ಬಿ.ಮುಜಾವರ, ಝಡ್.ಎಂ.ರಿಸಾಲ್ದಾರ್,ಆರ್.ಆರ್.ಮಕಾನದಾರ, ಅಯ್ಯೂಬ ಮನಗೂಳಿ, ಅಸ್ಲಂ ವತನದಾರ,ಅಲ್ತಾಪ ಕಿತ್ತೂರ ಇದ್ದರು.
ಸಭೆಯಲ್ಲಿ ಈಚೇಗೆ ಬಿಎಸ್ಎಫ್ಗೆ ಆಯ್ಕೆಯಾದ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಹಾಗೂ ಕೆಪಿಟಿಸಿಎಲ್ ಅಂತರರಾಜ್ಯ ಕಬಡ್ಡಿ ಕ್ರೀಡಾಪಟು ಯಾಸೀನ ಸುರಪೂರ ಅವರನ್ನು ಸನ್ಮಾನಿಸಲಾಯಿತು.
ನಯೀಮ ಮಕಾನದಾರ ಹಾಗೂ ನಿಶಾತ್ ನಾಯ್ಕೋಡಿ ಖುರಾನ್ ಪಠಿಸಿದರು.ಡಿ.ಎಲ್.ಮಮದಾಪೂರ ನಿರೂಪಿಸಿದರು.ಮುತ್ತು ಅವಟಗೇರ ಸ್ವಾಗತಿಸಿದರು.ಅಬ್ದುಲಗಣಿ ಖಾನ್ಯಾಳ ವಂದಿಸಿದರು.ನಿಡಗುoದಿ,ತಾಳಿಕೋಟಿ,ಬಸವನಬಾಗೇವಾಡಿ,ಮುದ್ದೇಬಿಹಾಳ ತಾಲ್ಲೂಕಿನ ಕವಿಪ್ರನಿನಿ ಹಾಗೂ ಹೆಸ್ಕಾಂ ನೌಕರರು ಇದ್ದರು.



