ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಮುದ್ದೇಬಿಹಾಳ : ಕೆಪಿಟಿಸಿಎಲ್ ಹಾಗೂ ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುವ ನಮ್ಮ ಸಮಾಜದ ಬಾಂಧವರು ಇನ್ನಿತರ ಸಮುದಾಯದವರೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯದೊoದಿಗೆ ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ನೀಡಬೇಕು ಎಂದು ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಮಂಡಳಿ ಸಂಘದ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈನೂದ್ದೀನ ಜಹಾಗೀರದಾರ ಹೇಳಿದರು.

ಪಟ್ಟಣದ ದಿ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ನಾವು ಸೇವೆ ಸಲ್ಲಿಸುವುದು ಸಾರ್ವಜನಿಕರು,ರೈತರಿಗಾಗಿ ಎಂಬುದನ್ನು ಮರೆಯಬಾರದು.ನಮ್ಮ ನಡುವಳಿಕೆ ಬಗ್ಗೆ ಇತರರು ಬೆರಳು ಮಾಡಿ ತೋರಿಸದಂತೆ ಇರಬೇಕು.ಮುಸ್ಲಿಂ ನೌಕರರ ಕಲ್ಯಾಣ ಸಂಘಟನೆ ಸಲುವಾಗಿ ಈ ಸಂಘ ಅಸ್ತಿತ್ವದಲ್ಲಿದ್ದು ಜಿಲ್ಲೆಯಲ್ಲಿ ನಮ್ಮ ಸಮಾಜದವರನ್ನು ಒಗ್ಗೂಡಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಬೆರೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೇoದ್ರ ಸಮೀತಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ನಾಯ್ಕೋಡಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ಸಂಬoಧಿ ಇಲಾಖೆಯಲ್ಲಿ ನಮ್ಮ ಸಮಾಜದ ನೌಕರರ ಸಂಖ್ಯೆ ಹೆಚ್ಚಿದ್ದರೂ ಸಂಘಟನೆಯಾಗಿಲ್ಲ ಎಂಬ ಕೊರಗು ಇತ್ತು.ಅದನ್ನು ಕವಿಪ್ರನಿನಿ ಮೆವಾ ಸಂಘಟನೆ ನೀಗಿಸುವತ್ತ ಹೆಜ್ಜೆ ಇರಿಸಿದೆ.ಪ್ರತಿ ಶಾಖೆಗಳಲ್ಲೂ ನಮ್ಮ ನೌಕರರನ್ನು ಸಂಘಟಿಸುವ ಜೊತೆಗೆ ಇನ್ನಿತರರ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ಸಂಘದಿAದ ನೀಡಲಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ಮೈನೂದ್ದೀನ ನಾಯ್ಕೋಡಿ, ನಮ್ಮ ಸಮಾಜದ ನೌಕರ ವರ್ಗದವರ ಸಂಘಟನೆಗಾಗಿ ನಿಡಗುಂದಿ,ತಾಳಿಕೋಟಿ,ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ಶಾಖೆಗಳಲ್ಲಿ ಆರಂಭಿಕವಾಗಿ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದ್ದು ನೌಕರರ ಬೇಕು ಬೇಡಗಳಿಗೆ ನಮ್ಮ ಸಂಘ ಸ್ಪಂದಿಸಲಿದೆ ಎಂದರು.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಇಲಿಯಾಸ್ ಮೋಮಿನ,ಸಂಘದ ಹಿರಿಯ ನಾಯಕ ಬಬ್ಲು ಇನಾಮದಾರ, ಎ.ಬಿ.ಮುಜಾವರ, ಝಡ್.ಎಂ.ರಿಸಾಲ್ದಾರ್,ಆರ್.ಆರ್.ಮಕಾನದಾರ, ಅಯ್ಯೂಬ ಮನಗೂಳಿ, ಅಸ್ಲಂ ವತನದಾರ,ಅಲ್ತಾಪ ಕಿತ್ತೂರ ಇದ್ದರು.

ಸಭೆಯಲ್ಲಿ ಈಚೇಗೆ ಬಿಎಸ್‌ಎಫ್‌ಗೆ ಆಯ್ಕೆಯಾದ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಹಾಗೂ ಕೆಪಿಟಿಸಿಎಲ್ ಅಂತರರಾಜ್ಯ ಕಬಡ್ಡಿ ಕ್ರೀಡಾಪಟು ಯಾಸೀನ ಸುರಪೂರ ಅವರನ್ನು ಸನ್ಮಾನಿಸಲಾಯಿತು.
ನಯೀಮ ಮಕಾನದಾರ ಹಾಗೂ ನಿಶಾತ್ ನಾಯ್ಕೋಡಿ ಖುರಾನ್ ಪಠಿಸಿದರು.ಡಿ.ಎಲ್.ಮಮದಾಪೂರ ನಿರೂಪಿಸಿದರು.ಮುತ್ತು ಅವಟಗೇರ ಸ್ವಾಗತಿಸಿದರು.ಅಬ್ದುಲಗಣಿ ಖಾನ್ಯಾಳ ವಂದಿಸಿದರು.ನಿಡಗುoದಿ,ತಾಳಿಕೋಟಿ,ಬಸವನಬಾಗೇವಾಡಿ,ಮುದ್ದೇಬಿಹಾಳ ತಾಲ್ಲೂಕಿನ ಕವಿಪ್ರನಿನಿ ಹಾಗೂ ಹೆಸ್ಕಾಂ ನೌಕರರು ಇದ್ದರು.

Latest News

ವಿಜ್ಞಾನ ಶಿಕ್ಷಕಿ ಸಂಧ್ಯಾಗೆ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ವಿಜ್ಞಾನ ಶಿಕ್ಷಕಿ ಸಂಧ್ಯಾಗೆ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಮುದ್ದೇಬಿಹಾಳ : ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ ವಿಜಯಪುರ ಜಿಲ್ಲಾ ಘಟಕದಿಂದ ಕೊಡಮಾಡುವ ರಾಜ್ಯಮಟ್ಟದ

Online Casino Zabavite se uz najvece bonuse

Za pridobitev licence uglednega regulatorja mora igralnica izpolnjevati stroge mednarodne standarde,

ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಮುದ್ದೇಬಿಹಾಳ : ಕೆಪಿಟಿಸಿಎಲ್ ಹಾಗೂ ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುವ ನಮ್ಮ ಸಮಾಜದ ಬಾಂಧವರು ಇನ್ನಿತರ ಸಮುದಾಯದವರೊಂದಿಗೆ

Online Casino Slovenija 2026 Najboljši spletni casinoji in bonusi

Preprost način brezplačnega igranja, da preizkusite igralnost in odkrijete nove igre.

Best Pokies Bonuses 100 free spins no deposit wild spirit 2026 Most significant Bien au Gambling establishment Incentives

Posts100 free spins no deposit wild spirit | Who'll get no-deposit incentives at the Australian online casinos?SpellWin Gambling establishment No-deposit Incentive PasswordEligible Online gamePopular inside the Grammar & Incorporate There are a few reasons to below are a few these types of games in the trial function or have fun

Play Online slots Better Free online Slot $1 deposit isis machines

A real income within this function are changed by digital credit. Instead subscription, a new player can only utilize the demo setting. If a winning integration comes up then the winnings for that type of line would be added to your account balance. You can attempt from slot or create