ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಕುರಿತು ಸಮಾಜದ ಶ್ರೀ ಅಂಬಾಭವಾನಿ ಮಂದಿರದ ಆವರಣದಲ್ಲಿ ಶುಕ್ರವಾರರಂದು ಜರುಗಿದ ಪೂರ್ವಭಾವಿ ಸಭೆಯಲ್ಲಿ ಕೆಳಗೆ ನೀಡಿದಂತ ವಿವರಣೆಯಂತೆ ನಿರ್ಧರಿಸಲಾಯಿತು.
ಅಂದು ಬೆಳಗಿನ ಜಾವ ಶ್ರೀ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಜರುಗುವದಲ್ಲದೇ ನಂತರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಕುರಿತು ಬಜಾರ್ ಶ್ರೀ ಹನುಮಾನ್ ಮಂದಿರದಿAದ ಮೆರವಣಿಗೆ ಪ್ರಾರಂಭಗೊAಡು ಶಿವಾಜಿ ಸರ್ಕಲ್ ನಲ್ಲಿ ಧ್ವಜಾರೋಹಣ ನೆರವೇರಿಸಲಾಗುವದಲ್ಲದೇ ಬಸವೇಶ್ವರ ಸರ್ಕಲ್ ಮಾರ್ಗವಾಗಿ, ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್, ಡಾ. ಅಂಬೇಡ್ಕರ್ ಸರ್ಕಲ್, ಹುಡ್ಕೋ ಮಾರ್ಗವಾಗಿ ತಹಶೀಲ್ದಾರ ಕಚೇರಿಗೆ ತೆರಳಿ ಅಲ್ಲಿಯೂ ಕೂಡಾ ಸರ್ಕಾರದ ವತಿಯಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಗುವದಲ್ಲದೇ ಇದೇ ಸಮಯದಲ್ಲಿ ಉಪನ್ಯಾಸವನ್ನು ರಾಜನಾರಾಯಣ ನಲವಡೆ ಹಾಗೂ ಉದಯ ರಾಯಚೂರ ಅವರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆಂದು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷರಾದ ನೇತಾಜಿ ನಲವಡೆ ಅವರು ಹೇಳಿದರು.
ಸಭೆಯಲ್ಲಿ ಕ್ಷತ್ರೀಯ ಮರಾಠಾ ಸಮಾಜದ ಉಪಾಧ್ಯಕ್ಷರಾದ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣಾಜಿ ಪವಾರ, ಸಹ ಕಾರ್ಯದರ್ಶಿ ಹಣಮಂತ ನಲವಡೆ ಹಾಗೂ ಸಮಾಜದ ಪದಾಧಿಕಾರಿಗಳಾದ ಅನೀಲ್ ಜಾಧವ, ಅನೀಲ್ ಪವಾರ್, ಸುನೀಲ್ ಜಾಧವ, ಅಂಬಾಜಿ ಘಾಟಗೆ, ರಾಘವೇಂದ್ರ ನಲವಡೆ, ಅಶೋಕ ಘಾಟಗೆ, ಸಂತೋಷ ಜಾಧವ, ಸಚೀನ್ ಸಾಳುಂಕೆ, ಗಜಾನನ ನಲವಡೆ, ಕಿರಣ್ ಪವಾರ, ಭೀಮಾಜಿ ಘಾಟಗೆ, ಸಂತೋಷ ಚವ್ಹಾಣ, ಶಿವಾಜಿ ಘಾಟಗೆ, ಜೀಜಾಮಾತಾ ಮಹಿಳಾ ಮಂಡಳದ ಪದಾಧಿಕಾರಿಗಳಾದ ಶೋಭಾ ಘಾಟಗೆ, ಶಿಲ್ಪಾ ಜಾಧವ, ಸುನೀತಾ ಘಾಟಗೆ, ಶಾರದಾ ಘಾಟಗೆ, ಶಾರದಾ ಪವಾರ, LAXMI ನಲವಡೆ, ಅಂಬು ಘಾಟಗೆ, ಅನುಶ್ರೀ ಜಾಧವ, ಸಂಗೀತಾ ಘಾಟಗೆ, ಅಂಬಿಕಾ ಜಾಧವ, ದ್ರಾಕ್ಷಾಯಣಿ ಪವಾರ, ಭವಾನಿ ಘಾಟಗೆ, ಜ್ಯೋತಿ ಘಾಟಗೆ ಮೊದಲಾದವರು ಉಪಸ್ತಿತರಿದ್ದರು. ಸಮಾಜದ ವಿನಾಯಕ ಘಾಟಗೆ ಸ್ವಾಗತಿಸಿ ವಂದಿಸಿದರು.





