ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ ಅವರ ಆರ್ಥಿಕ ಮಟ್ಟದ ವೃದ್ಧಿಗೆ ಸಹಕಾರ ಸಂಸ್ಥೆಗಳು ಶ್ರಮಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಂಗಡಗಿ ರಸ್ತೆಯಲ್ಲಿ ಸೋಮವಾರ ಕಮತಗಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಮುದ್ದೇಬಿಹಾಳ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುದ್ದೇಬಿಹಾಳ ತಾಲ್ಲೂಕು ಆರ್ಥಿಕವಾಗಿ ಸುಧಾರಣೆಯಾಗುತ್ತಿರುವುದಕ್ಕೆ ಇಂದು ಹತ್ತಾರು ಸಹಕಾರಿ ಶಾಖೆಗಳು ಇಲ್ಲಿ ಆರಂಭಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ತೋರಿಸುತ್ತದೆ.ಸಮಾನ ಮನಸ್ಕರ ಗೆಳೆಯರ ಬಳಗದವರನ್ನು ಕರೆತಂದು ಶಾಖೆ ಆರಂಭಿಸಿರುವುದನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಮತಗಿ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ನರಗುಂದ ಮಾತನಾಡಿ, ನಮ್ಮ ಸಂಘದ ಆರನೇ ಶಾಖೆ ಮುದ್ದೇಬಿಹಾಳದಲ್ಲಿ ಆರಂಭಿಸಿದ್ದೇವೆ.ಏಳನೇ ಶಾಖೆ ನಿಡಗುಂದಿಯಲ್ಲಿ ಆರಂಭಿಸಲಿದ್ದೇವೆ.ನಮ್ಮ ಸಂಘದಿoದ ಕೋರ್ ಬ್ಯಾಂಕಿAಗ್ ವ್ಯವಸ್ಥೆ ಜಾರಿಯಲ್ಲಿದೆ.40 ಕೋಟಿಗೂ ಅಧಿಕ ಬಂಡವಾಳ ನಮ್ಮ ಸಂಘದಲ್ಲಿದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು,ಸಂಘದ ಉಪಾಧ್ಯಕ್ಷ ಸಂಗಮೇಶ ಗಡೇದ,ಕೆಯುಸಿ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ,ಮುದ್ದೇಬಿಹಾಳ ಶಾಖೆಯ ಸಲಹಾ ಸಮೀತಿ ಅಧ್ಯಕ್ಷ ರವಿ ತಡಸದ, ಉಪಾಧ್ಯಕ್ಷ ಬಸವರಾಜ ಮುರಾಳ, ಸದಸ್ಯರಾದ ಅಂಜನಾ ಬಿರಾದಾರ, ಸದು ಮಠ, ಬೀರಪ್ಪ ಯರಝರಿ, ಎಂ.ಎಸ್.ಕತ್ತಿ, ರಾಜು ಪಾತ್ರೋಟ, ಗುರಣ್ಣ ಹತ್ತೂರ, ಹುಲಗೇಶ ಈಳಗೇರ, ಬಸವರಾಜ ಬೆಲ್ಲದ, ಬಸಪ್ಪ ಬಾಗೇವಾಡಿ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಿಕಾರ್ಜುನ ತೋಟಗಿ, ಸದ್ದಾಂಹುಸೇನ ಕುಂಟೋಜಿ,ಬಸಲಿoಗಪ್ಪ ರಕ್ಕಸಗಿ, ಮಲ್ಲು ಅಪರಾಧಿ, ಸಂಪತ್ತ ಕೋರಿ, ಸಂಗಮ್ಮ ದೇವರಳ್ಳಿ,ಹಣಮಂತ್ರಾಯ ಸಿದ್ಧನಾಥ, ಕೊಟ್ರಯ್ಯ ಹಿರೇಮಠ,ಅಂಬರೀಶ ಬಂಟನೂರ ಮೊದಲಾದವರು ಇದ್ದರು.







