ಮುದ್ದೇಬಿಹಾಳ : ನನ್ನ ಕನಸು ಸೈನ್ಸ್ ಕಾಲೇಜು ಆರಂಭಿಸಬೇಕು ಎಂಬುದಿತ್ತು.ದುಡ್ಡು ಮಾಡುವುದಕ್ಕಾಗಿ ಸೈನ್ಸ್ ಕಾಲೇಜು ಮಾಡಿಲ್ಲ.ರಾಯಚೂರು,ವಿಜಯಪುರ,ಬಾಗಲಕೋಟೆ,ಕೊಪ್ಪಳ ಜಿಲ್ಲೆಗಳಂತಹ ಹಿಂದುಳಿದ ಜಿಲ್ಲೆಗಳ ರೈತಾಪಿ ವರ್ಗದ ಮಕ್ಕಳನ್ನು ಮೇಲೆ ತರಬೇಕು ಎಂಬ ಉದ್ದೇಶದಿಂದ ಸೈನ್ಸ್ ಕಾಲೇಜು ಆರಂಭಿಸಿದ್ದೇವೆ ಎಂದು ನಾಗರಬೆಟ್ಟ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಆಕ್ಸಫರ್ಡ್ ಕಲಾಸಂಭ್ರಮ-2026 ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇವತ್ತು 1100 ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಕೊಟ್ಟಿರುವ ಹೆಗ್ಗಳಿಕೆ ನಮ್ಮ ಸಂಸ್ಥೆಗೆ ಇದೆ. ಐಐಟಿ ಫೌಂಡೇಶನ್ ಎನ್ನುವುದು ಕಾರ್ಪೋರೇಟ್ ಮಕ್ಕಳು ಮಾತ್ರ ಬರೆಯುವುದಕ್ಕೆ ಮಾತ್ರ ಇದೆ.ಆದರೆ ನಮ್ಮ ಭಾಗದ ಮಕ್ಕಳು ನೀಟ್,ಜೆಇಇ ಪರೀಕ್ಷೆ ಎದುರಿಸಬೇಕಾದರೆ ನಗರ ಪ್ರದೇಶದ ಮಕ್ಕಳೊಂದಿಗೆ ಪೈಪೋಟಿ ಮಾಡಬೇಕಾಗುತ್ತದೆ.ಎಲ್ಲ ಸಂಸ್ಥೆಯವರು ಇದನ್ನು ಬರೆಯುಸುವುದಕ್ಕೆ ಆಗುವುದಿಲ್ಲ.ಆದರೆ ನಮ್ಮಲ್ಲಿ ಈ ಉನ್ನತಮಟ್ದ ತರಬೇತಿ ಸೌಲಭ್ಯವಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಡವ,ಸಿರಿವಂತ ಇದ್ದವರು ಫೆ.22 ರಂದು ಟ್ಯಾಲೆಂಟ್ ಅವಾರ್ಡ ಪರೀಕ್ಷೆ ಬರೆಯಿರಿ.ನಿಜವಾದ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಕಡು ಬಡವರಿದ್ದರೆ ಅವರಿಗೆ ಉಚಿತ ಶಿಕ್ಷಣಕ್ಕೆ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಮಾತನಾಡಿ, 187 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆತಿದೆ.ನಮ್ಮಸಂಸ್ಥೆಯಲ್ಲಿ ಓದಿದ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ವಿದ್ಯಾರ್ಥಿಗಳು ಮಕ್ಕಳನ್ನು ಬೈಬೇಡಿ,ನಿಂದಿಸಬೇಡಿ ಎಂದು ಹೇಳಿದರು.
ಎಂ.ಜಿ.ಎo.ಕೆ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಮಾತನಾಡಿ, ದುಡ್ಡು ಬೇಕಾದಷ್ಟು ಗಳಿಸಬಹುದು ಆದರೆ ಜ್ಞಾನ ಎಂಬುದನ್ನು ಗಳಿಸಲು ಅಷ್ಟು ಸುಲಭವಾಗಿ ಗಳಿಸುವುದಕ್ಕೆ ಸಾಧ್ಯವಿಲ್ಲ.ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನೂರಾರು ಜನರಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟವರು ಎಂ.ಎಸ್.ಪಾಟೀಲರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಇಲಕಲ್ ಶ್ರೀಗಳು, ಸಂಸ್ಥೆಯ ನಿರ್ದೇಶಕಿ ಸೌಮ್ಯಾ ಅಮಿತಗೌಡ ಪಾಟೀಲ, ನಿರ್ದೇಶಕ ದರ್ಶನಗೌಡ ಪಾಟೀಲ, ವಕೀಲ ಎಸ್.ಆರ್.ಜೋಗಿ, ಢವಳಗಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುರೇಶಗೌಡ ಪಾಟೀಲ,ಮುಖಂಡ ಎಂ.ಕೆ.ಗುಡಿಮನಿ, ಶಿಕ್ಷಕರಾದ ಜೆ.ಡಿ.ಮುಲ್ಲಾ, ಸಂಗಮೇಶ ಹೂಗಾರ, ಪ್ರೊ.ಎನ್.ಎ.ಬಿರಾಜದಾರ, ಎಎಸ್ಐ ಕೆ.ಎಸ್.ಅಸ್ಕಿ,ಗ್ರಂಥಪಾಲಕ ಸಗರಿ ಮೊದಲಾದವರು ಇದ್ದರು.







