ಮುದ್ದೇಬಿಹಾಳ : ಸಮಾಜದಲ್ಲಿ ಸಾಕಷ್ಟು ಜನ ಸಂಪತ್ತು ಹೊಂದಿದವರಿದ್ದಾರೆ.ಆದರೆ ಕೊಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ.ನಿಸ್ವಾರ್ಥದಿಂದ ದಾನ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಹೇಳಿದರು.
ಪಟ್ಟಣದ ನೇತಾಜಿ ನಗರದಲ್ಲಿ ಮಂಗಳವಾರ ಕಡುಬಡ ಮಹಿಳೆಯರಿಗೆ ಶಿವರಾತ್ರಿ ಹಬ್ಬದ ಅಂಗವಾಗಿ ದಿನಸಿ ಕಿಟ್,ಬಟ್ಟೆ ವಿತರಣೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಕಷ್ಟು ಜನ ನಿರ್ಗತಿಕರಿರುತ್ತಾರೆ.ನಾವು ಬರುವಾಗ ಏನು ತಂದಿಲ್ಲ,ಹೋಗುವಾಗಲೂ ಏನೂ ಒಯ್ಯುವುದಿಲ್ಲ.ಆದರೆ ಜೀವಿತಾವಧಿಯಲ್ಲಿ ನಾಲ್ಕು ಜನರಿಗೆ ಸಹಾಯ ಆಗುವ ಕೆಲಸ ಮಾಡಿದರೆ ನಮಗೆ ಆತ್ಮತೃಪ್ತಿ ದೊರೆಯುತ್ತದೆ.ಕೆಲವೇ ಜನಕ್ಕೆ ಹಬ್ಬಕ್ಕೆ ಆಗುವಷ್ಟು ದಿನಸಿ,ಬಟ್ಟೆ ಕೊಟ್ಟಿರುವ ಉದ್ದೇಶ ನಮ್ಮ ಕುಟುಂಬದಿOದ ಕಳೆದ ಮೂವ್ವತ್ತು ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ನೇತಾಜಿ ನಗರದ ನಿವಾಸಿ ರೇಣುಕಾ ಬಾಗೇವಾಡಿ ಮಾತನಾಡಿ, ಸಮಾಜದಲ್ಲಿ ಉಳ್ಳವರು ಸಾಕಷ್ಟು ಜನ ಇದ್ದಾರೆ.ಆದರೆ ಕೊಡುವ ಮನಸ್ಸು ಇರುವುದಿಲ್ಲ.ಆದರೆ ಕಾಶೀಬಾಯಿ ರಾಂಪೂರ ಅವರು ನಮ್ಮ ಹಿಂದುಳಿದ ಪ್ರದೇಶಕ್ಕೆ ಬಂದು ಕಡುಬಡ,ನಿರ್ಗತಿಕರನ್ನು ಗುರುತಿಸಿ ಕಿಟ್ ವಿತರಿಸಿರುವುದನ್ನು ಅಭಿನಂದಿಸುತ್ತೇವೆ.ಅವರ ಜನಸೇವೆ ನಿರಂತರವಾಗಿ ಸಾಗಲಿ ಎಂದು ಹೇಳಿದರು.
ನೇತಾಜಿ ನಗರದ ನಿವಾಸಿ ಸುಜಾತಾ ಬಂಡಿವಡ್ಡರ ಮಾತನಾಡಿದರು.ವಿ.ಎಚ್.ಪಿ ತಾಲ್ಲೂಕು ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ,ಸುವರ್ಣಾ ಕತ್ತಿ,ಬಿಜೆಪಿ ಮುಖಂಡ ಶೇಖರ ಢವಳಗಿ,ಶಿವಮ್ಮ ವಡ್ಡರ ಇದ್ದರು.ಶಿವರಾತ್ರಿ ಹಬ್ಬದ ಆಚರಣೆ ಸಲುವಾಗಿ ಹತ್ತು ಜನಕ್ಕೆ ದಿನಸಿ ಕಿಟ್, ಸೀರೆ,ನಗದು ಹಣಕಾಸಿನ ಸಹಾಯ ಮಾಡಿದರು.







