ಮುದ್ದೇಬಿಹಾಳ : ಇಂದಿನ ಯುವಕ, ಯುವತಿಯರು ಏಡ್ಸ್ ಹಾಗೂ ಟಿಬಿಯಂತ ಮಾರಕ ರೋಗಗಳ ಬಗ್ಗೆ ಅರಿವು ಹೊಂದಿ ಅವುಗಳ ಬಾರದಂತೆ ಜಾಗೃತಿಯಿಂದಿರಬೇಕು ಎಂದು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ ಹೇಳಿದರು.
ಪಟ್ಟಣದ ಮಾದರಿ ಪಜಾ/ಪಪಂ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಡಲಗೇರಿಯ ರೆಡ್ ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಶುಕ್ರವಾರ ಎಚ್ಐವಿ / ಏಡ್ಸ್. ಟಿಬಿ ಮತ್ತು ರಕ್ತದಾನದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿ ಹರೆಯದವರು ಮುಂದಿನ ಜೀವನದ ಗುರಿಯತ್ತ ಗಮನವಿಟ್ಟುಕೊಂಡು ಮುನ್ನಡೆಯೇಕು ಎಂದು ಹೇಳಿದರು.
ಉಪನ್ಯಾಸಕಿ ಮಂಜುಳಾ ಕಟಗೇರಿ ಮಾತನಾಡಿ, ಸದೃಢ ಯುವ ಸಮೂಹದಿಂದ ಸದೃಢ ದೇಶ ನಿರ್ಮಾಣವಾಗುತ್ತದೆ.ಆರೋಗ್ಯವೇ ಎಲ್ಲ ಸಂಪತ್ತಿಗಿoತಲೂ ಮಿಗಿಲು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್ ರಿಬ್ಬನ್ ಘಟಕದ ಸಂಯೋಜಕ ಪ್ರೊ. ರವಿ ಕಟ್ಟಿಮನಿ, ಎ.ಆರ್.ಟಿ ಕೌನ್ಸಿಲರ್ Vijayalakxmi ಬೀದಗೊಂಡ, ಪ್ರೊ.ಅನಿಲ್ ಕುಮಾರ್ ಡಿಗ್ಗೆ, ಪ್ರೊ. ರೇವಣಸಿದ್ದಪ್ಪ ಅಮ್ಮಣ್ಣಿ,ಪ್ರೊ. ಮಹೇಶ್ವರಿ ಹಿರೇಮಠ ,ಪ್ರೊ. ಲತಾಶ್ರೀ ಡಿ.ಪಿ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.







