ಮುದ್ದೇಬಿಹಾಳ : ಕೂಲಿಕಾರ್ಮಿಕನೊಬ್ಬ ಸಾಲದ ಬಾಧೆ ತಾಳದೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಜಮೀನೊಂದರಲ್ಲಿ ಗುರುವಾರ ನಡೆದಿದೆ.
ಮೃತನನ್ನು ತಾಲ್ಲೂಕಿನ ಹಂಡರಗಲ್ ದ ನಿವಾಸಿ, ಮೂಲತಃ ಬ.ಬಾಗೇವಾಡಿ ತಾಲ್ಲೂಕಿನ ನಾಗರಾಳಹುಲಿ ಗ್ರಾಮದವನಾದ ರವಿ ನಿಂಗಪ್ಪ ವಡಿಗೇರಿ(35) ಎಂದು ಗುರುತಿಸಲಾಗಿದೆ.
ಸಾಲ ಜಾಸ್ತಿಯಾಗಿದೆ ಎಂದು ಮಾನಸಿಕ ಮಾನಸಿಕ ಮಾಡಿಕೊಂಡು ಬಿದರಕುಂದಿ ಗ್ರಾಮದ ಗುರಿಕಾರ ಎನ್ನುವವರ ಜಮೀನದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತನ ಪತ್ನಿ ಸಿದ್ದಮ್ಮ ವಡಿಗೇರಿ ಫೆ.27 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.







