ನಾಡಗೌಡರೇ, ನನ್ನ ತಾಳ್ಮೆಗೂ ಮೀತಿ ಇದೆ-ನಡಹಳ್ಳಿ ಹೇಳಿಕೆ ಅನುದಾನ ತಂದಿದ್ದರೆ ದಾಖಲೆ ಬಿಡುಗಡೆ ಮಾಡಿ-ಸವಾಲು

ನಾಡಗೌಡರೇ, ನನ್ನ ತಾಳ್ಮೆಗೂ ಮೀತಿ ಇದೆ-ನಡಹಳ್ಳಿ ಹೇಳಿಕೆ ಅನುದಾನ ತಂದಿದ್ದರೆ ದಾಖಲೆ ಬಿಡುಗಡೆ ಮಾಡಿ-ಸವಾಲು

ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಮತಕತ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ಕೋಟಿ ರೂಪಾಯಿ ಅನುದಾನ ತಂದಿದ್ದರೆ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಲಿ ಶಾಸಕ ಸಿ.ಎಸ್.ನಾಡಗೌಡರಿಗೆ ಸವಾಲು ಹಾಕಿದ್ದಾರೆ.

ಪಟ್ಟಣದ ದಾಸೋಹ ನಿಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನ ಆತ್ಮಾವಲೋಕ ಮಾಡಿಕೊಳ್ಳಬೇಕು.ಮುದ್ದೇಬಿಹಾಳ ಅತೀ ಹಿಂದುಳಿದ ತಾಲ್ಲೂಕು ಎಂದು ಗೋವಿಂದರಾವ್ ವರದಿಯಲ್ಲಿ ತಿಳಿಸಲಾಗಿದೆ.ಜಗತ್ತೆಲ್ಲಾ ಅಭಿವೃದ್ದಿ ಹೊಂದಿದರೂ ಮುದ್ದೇಬಿಹಾಳ ಎಲ್ಲಿ ಇರಬೇಕೋ ಅಲ್ಲಿಯೇ ಇರಬೇಕಾಗುತ್ತದೆ.ಇದಕ್ಕಾಗಿ ಜನತೆ ಜಾಗೃತಿಯಾಗದಿದ್ದರೆ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮಕ್ಕಳ ಶಾಪ ನಿಮಗೆ ತಟ್ಟುತ್ತದೆ.ನಿಷ್ಕಿçಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೋದರೆ ಭವಿಷ್ಯದಲ್ಲಿ ನಿಮ್ಮ ಮಕ್ಕಳು ಅನುಭವಿಸುತ್ತಾರೆ ಎಂದು ಹೇಳಿದರು.

ಒಳಚರಂಡಿಯಲ್ಲಿ ನೀವು ಕೂಡುವ ಶೌಚವೇ ನಿಮ್ಮ ಮನೆ ಮುಂದೆ ಚೇಂಬರ್ ಮೂಲಕ ಬುಗ್ಗೆಯಾಗಿ ಉಕ್ಕುತ್ತದೆ.ಅದರ ಸುವಾಸನೆ ತಗೆದುಕೊಳ್ಳುವ ಸ್ಥಿತಿ ನಿಮಗೆ ಬೇಕಾ ಎಂದು ಪ್ರಶ್ನಿಸಿದ ನಡಹಳ್ಳಿ, ನಮ್ಮ ಸರ್ಕಾರದ ಅವಧಿಯಲ್ಲಿ ಟೆಂಡರ್ ಮೂಲಕ ಕೆಲಸ ಕೊಟ್ಟಿದ್ದೇವೆ.ಆದರೆ ಇವರು ಮಾತ್ರ ಎಲ್ಲವೂ ಲ್ಯಾಂಡ್ ಆರ್ಮಿಗೆ ಕೆಲಸ ಕೊಡುತ್ತಿದ್ದಾರೆ.ಸುರೇಶ ನಾಡಗೌಡ ಒಬ್ಬರೇ ಈ ತಾಲ್ಲೂಕು ಆಳುತ್ತಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕಷ್ಟ,ತೊಂದರೆ ಎಂದಾಗ ಸಹಾಯ,ಸಹಕಾರ ಮಾಡಿದ್ದೇನೆ.ಅದನ್ನೇ ಬೇರೊಂದು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ್ದರೆ ಸಾಯೋತನಕ ನನ್ನನ್ನು ಎಂ.ಎಲ್.ಎ ಮಾಡುತ್ತಿದ್ದರು.ಆದರೆ ನೀವು ಆಯ್ಕೆ ಮಾಡಿ ಕಳಿಸುವ ಜನಪ್ರತಿನಿಧಿ ಜನಪರ,ಬುದ್ಧಿವಂತನಾಗಿದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ.ಆದರೆ ನಿದ್ದೆ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸಿದ್ದೀರಿ ಎಂದು ಹೇಳಿದರು.

ಮುದ್ದೇಬಿಹಾಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2.86 ಕೋಟಿ ರೂ.ಕೈಕಾಲು ಬಿದ್ದು ಅನುದಾನ ಬಿಡುಗಡೆ ಮಾಡಿಸಿದ್ದೆ.ಆದರೆ ಅದು ಏನಾಯಿತು ಎಂದು ಗೊತ್ತಿಲ್ಲ.ಅದನ್ನು ಪೂರ್ತಿ ಲೂಟಿ ಹೊಡೆದಿದ್ದಾರೆ ಎನ್ನಿಸುತ್ತದೆ.ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿಸಿದ್ದೆ.ಉರ್ದು ಶಾಲೆಯ ಅಭಿವೃದ್ಧಿಗೆ 60 ಲಕ್ಷ ಹಣಕಾಸು ಮಂಜೂರಾತಿ ದೊರೆತಿತ್ತು. ಮುಸಲ್ಮಾನ ಬಂಧುಗಳ ಒಂದೇ ಒಂದು ಓಟು ಹಾಕಲಿಲ್ಲ. ಆದರೆ ಅಭಿವೃದ್ಧಿ ವಿಷಯ ಬಂದಾಗ ಜಾತಿ,ಮತ ಧರ್ಮ ನೋಡದೇ ಸಹಾಯ ಮಾಡಿದ್ದೇನೆ.ಉರ್ದು ಶಾಲೆಯ ಅಭಿವೃದ್ಧಿಗೆ ಕೊಟ್ಟ ಅನುದಾನ ಏನಾಯಿತು ಎಂದು ಮೌನವಾಗಿರುವ ಮುಸ್ಲಿಂ ಸಮಾಜದ ಕಾಂಗ್ರೆಸ್ ಮುಖಂಡರು ನಿದ್ದೆ ಮಾಡುತ್ತಿದ್ದೀರಾ. ನಿಮ್ಮ ನಾಯಕನನ್ನು ಕೊರಳುಪಟ್ಟಿ ಹಿಡಿದು ಕೇಳಿ ಎಂದು ಹೇಳಿದರು.

ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು.ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಜೀವನ ಪರ್ಯಂತ ರಾಜಕಾರಣ ಬಿಡುವುದಿಲ್ಲ ಎಂಬುದು ನನಗೆ ಗೊತ್ತಿದೆ.ಅಣ್ಣ,ಕಾಕಾ,ತಮ್ಮ ಎಂದರೆ ಸಾಕು ಕೆಲಸ ಮಾಡಿ ,ಬಿಡಿ ಬೆಂಗಳೂರಲ್ಲಿ ನಿದ್ದೆ ಮಾಡಿದರೂ ಯಾರೂ ಕೇಳುವವರಿಲ್ಲ.ತಾಲ್ಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು.ಜಾತಿ ಧರ್ಮದ ಆಧಾರದ ಮೇಲೆ ಓಟು ಹಾಕುವುದನ್ನು ಬಿಡಿ.ಪುರಸಭೆ,ಜಿಪಂ, ತಾಪಂ ಚುನಾವಣೆಗಳಲ್ಲಿ ನನ್ನ ಜೊತೆಗೆ ಕೈ ಜೋಡಿಸಬೇಕು.ಜನರು ಎಚ್ಚೆತ್ತುಕೊಳ್ಳಿ ಎಂದು ಕೈ ಮುಗಿದು ಜನರಲ್ಲಿ ವಿನಂತಿಸುತ್ತೇನೆ.ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ನಡಹಳ್ಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಭು ಕಡಿ, ಸಂಜೀವ ಬಾಗೇವಾಡಿ, ಗಿರೀಶಗೌಡ ಪಾಟೀಲ,ಮದನಸ್ವಾಮಿ ಹಿರೇಮಠ, ಪರಶುರಾಮ ನಾಲತವಾಡ, ಬಸಯ್ಯ ನಂದಿಕೇಶ್ವರಮಠ,ಅಶೋಕ ಚಿನಿವಾರ, ಹುಲಗಪ್ಪ ಕಿಲಾರಟ್ಟಿ, ನಾಗೇಶ ಕವಡಿಮಟ್ಟಿ, ಪುನೀತ ಹಿಪ್ಪರಗಿ, ನಿಖಿಲ ಮಲಗಲದಿನ್ನಿ, ಶಿವು ಬಿರಾದಾರ,ಅನಿಲ ರಾಠೋಡ, ಶಿವು ಲದ್ದಿಮಠ, ಗೌರಮ್ಮ ಹುನಗುಂದ, ಕಾವೇರಿ ಕುಂಬಾರ, ಪ್ರೀತಿ ಕುಂಬಾರ ಮೊದಲಾದವರು ಇದ್ದರು.

ಅವನ್ಯಾವನೋ ಪಟ್ಟಿ ಕೊಡುತ್ತಾ ತಿರುಗಾಡುತ್ತಿದ್ದಾನೆ ; ನಡಹಳ್ಳಿ ಲೇವಡಿ
ಮುದ್ದೇಬಿಹಾಳ ಬಜಾರ್‌ದ ವ್ಯಾಪಾರಸ್ಥರು ರಸ್ತೆ ಧೂಳುಮಯವಾಗಿತ್ತು.ಈಗ ರಸ್ತೆ ಧೂಳುಮುಕ್ತವಾಗಿದೆ. ಅಂಬೇಡ್ಕರ್ ಮೂರ್ತಿ ಸ್ಥಾಪನೆ ಮಾಡಿದ್ದು ಅಲ್ಲಿ ಕೆಲಸ ಮಾಡಿದವರಿಗೆ ಬಿಲ್ ಕೊಟ್ಟಿಲ್ಲ.ನನ್ನ ತಾಳ್ಮೆಗೂ ಮಿತಿ ಇದೆ ನಾಡಗೌಡರೆ ? ಕಾಲ ಹೀಗೆ ಇರಲ್ಲ.ಇಡೀ ಊರು ಹಾಳಾಗಿದೆ.ಪುರಸಭೆ,ಪೊಲೀಸ್ ಠಾಣೆಯಂತೂ ಏನು ಉಳಿದಿಲ್ಲ.ಕಳಪೆ ಕಾಮಗಾರಿ ನಿಲ್ಲಿಸಬೇಕು. ನಾಲತವಾಡ ಭಾಗದಲ್ಲಿ 90 ಸಾವಿರ ರೂ.ಕಂಬದ ಎಸ್ಟಿಮೇಟ್ ಇತ್ತು,ಆದರೆ 10 ಸಾವಿರ ರೂ.ಕಂಬ ಹಾಕಿಸಿದ್ದೀರಿ.ಅವನ್ಯಾವನೋ ಪಟ್ಟಿ ಕೊಡುತ್ತಾ ತಿರುಗಾಡುತ್ತಿದ್ದಾನೆ.ನಾಲತವಾಡ ಕೆಇಬಿಯಿಂದ ಊರೊಳಕ್ಕೆ ಹಾಕಿರುವ ಕಂಬಗಳ ಗುಣಮಟ್ಟ ನೋಡಿ ಎಂದು ನಡಹಳ್ಳಿ ಹೇಳಿದರು.

Latest News

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

​ಮುದ್ದೇಬಿಹಾಳ : ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ಬಳಬಟ್ಟಿ ಗ್ರಾಮದೇವತೆ ಜಾತ್ರೆ :                                            ಕುಸ್ತಿ ಪಂದ್ಯದಲ್ಲಿ ರಿಯಾಜ ಮುಳಕೋಟಗೆ ಬಹುಮಾನ

ಬಳಬಟ್ಟಿ ಗ್ರಾಮದೇವತೆ ಜಾತ್ರೆ : ಕುಸ್ತಿ ಪಂದ್ಯದಲ್ಲಿ ರಿಯಾಜ ಮುಳಕೋಟಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ, ಮಾರುತೇಶ್ವರ ಹಾಗೂಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ (ಪುಣೆ ತಾಲೀಮು) ರಿಯಾಜ ಮುಳಕೋಟೆ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು 30 ಜೋಡಿ ಕುಸ್ತಿ ಪಟುಗಳು ರಾಜ್ಯದ ವಿವಿಧ ಕಡೆಯಿಂದ ಪಾಲ್ಗೊಂಡಿದ್ದರು. ಬಳಬಟ್ಟಿ ಗ್ರಾಮದ ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ ಹಾಗೂ ಯಮನಪ್ಪ ಮಾಳಗೊಂಡ ಇವರ ನೇತೃತ್ವದಲ್ಲಿ ಭರ್ಜರಿಯಾಗಿ ಕುಸ್ತಿ ಪಂದ್ಯಗಳು ನಡೆದವು. ಒನ್ ನಂಬರ ಕುಸ್ತಿ

ಮುದ್ದೇಬಿಹಾಳ : ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಶೋಕ ಮಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಶೋಕ ಮಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಗಿದೆ. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇರುವ ಸಂಘದ ಕಾರ್ಯಾಲಯದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಸಂಘದ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು,ಹಿರಿಯ ಸಾಹಿತಿ ಅಶೋಕ ಪಿ.ಮಣಿ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಾಪುಗೌಡ ಪಿ.ಪಾಟೀಲ್,ಉಪಾಧ್ಯಕ್ಷರಾಗಿ ಸದಾಶಿವ ಮಾಗಿ,ಪ್ರಧಾನ ಕಾರ್ಯದರ್ಶಿಗಳಾಗಿ ಎಸ.ಎ.ಬೇವಿನಗಿಡದ,ಖಜಾಂಚಿಯಾಗಿ ಬಿ.ಎಚ್.ಬಳಬಟ್ಟಿ,ಜಂಟಿ ಕಾರ್ಯದರ್ಶಿ ಡಿ.ಬಿ.ಓಲೇಕಾರ,ಯು.ಕೆ.ಬಾಗವಾನ,ಸಂಘಟನಾ ಕಾರ್ಯದರ್ಶಿಗಳಾಗಿ