ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಿಲ್ಲ-ನಾಡಗೌಡ

ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಿಲ್ಲ-ನಾಡಗೌಡ

ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.

ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.

ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.

ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.

ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.

ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.

ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ