‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಕಬ್ಬು ಬೆಳೆದಿರುವ ರೈತರು ಕೇಳುತ್ತಿರುವ ನ್ಯಾಯಯುತ ಬೆಲೆ 3500 ರೂ ಘೋಷಣೆ ಮಾಡದೇ ಸರ್ಕಾರ ಮೌನವಾಗಿದೆ.ಕ್ಷೇತ್ರದ ಶಾಸಕರು ರೈತರಿಂದಲೇ ಶಾಸಕರಾಗಿದ್ದೀರಿ ಅವರಿಗೆ ಬೆಂಬಲ ನೀಡುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.

ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆದಿರುವ ಮೂರನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ರೈತರ ಋಣದಲ್ಲಿದ್ದೀರಿ.ನೀವು ಬಂದು ಬೆಂಬಲ ಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಎಲ್ಲ ಕಾರ್ಖಾನೆಗಳು ರಾಜಕಾರಣಿಗಳದ್ದೇ ಇವೆ. ರೈತರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಚಿವ ಶಿವಾನಂದ ಪಾಟೀಲರು ಹಿಂದೆ ಕಬ್ಬಿನ ತೂಕದಲ್ಲಿ ಕಾರ್ಖಾನೆಯವರಿಂದ ಮೋಸವಾಗುತ್ತಿದೆ. ಸರ್ಕಾರದಿಂದಲೇ ತೂಕದ ಯಂತ್ರ ಹಾಕುವುದಾಗಿ ತಿಳಿಸಿದ್ದರು.ಅವರು ಕಬ್ಬಿನ ಕಾರ್ಖಾನೆಗಳ ಮಾಲೀಕರು ಭೇಟಿಯಾದ ನಂತರ ಮೌನಕ್ಕೆ ಶರಣವಾಗಿದ್ದಾರೆ ಎಂದು ದೂರಿದರು.

ಪಕ್ಕದ ನಾಯನೇಗಲಿ ಶುಗರ್ಸ್ನವರು ಟನ್ಗೆ 3200 ಕೊಡುತ್ತಿದ್ದಾರೆ.ಆದರೆ ಇಲ್ಲಿಯ ಬಾಲಾಜಿ ಕಾರ್ಖಾನೆಯವರು 300 ರೂ.ಕಡಿಮೆ ಕೊಡುತ್ತಿದ್ದಾರೆ.ಈ ಭಾಗದ ಕಾರ್ಖಾನೆಗೆ ದೂರ ಊರಿನ ಕಬ್ಬನ್ನು ಮೊದಲು ಸಾಗಿಸುತ್ತಾರೆ. ನಂತರ ಸ್ಥಳೀಯ ರೈತರ ಕಬ್ಬನ್ನು ತರಿಸಿಕೊಳ್ಳುವುದರಿಂದ ಇಳುವರಿ ಕಡಿಮೆ ಬರುತ್ತಿದೆ.ಅದೇ ನಮ್ಮ ಭಾಗದ ಕಬ್ಬು ನಾಯನೇಗಲಿ ಕಾರ್ಖಾನೆಗೆ ಹೋದಾಗ ಕಬ್ಬು ರಿಕವರಿ ಬರುತ್ತಿದೆ. ನಿಮ್ಮಲ್ಲೇಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ಭಾಗದ ಕಬ್ಬಿನಲ್ಲಿ ಮೈಸೂರು,ಮಂಡ್ಯ ಜಿಲ್ಲೆಗಳಲ್ಲಿ ಬೆಳೆಯುವ ಕಬ್ಬಿಗಿಂತ ಹೆಚ್ಚಿನ ಸಕ್ಕರೆ ಅಂಶ ಇದೆ.ಗೊಬ್ಬರ ಕೊಡುತ್ತೇವೆ ಎಂದು ಟನ್ 100 ರೂ.ಗೆ ಕಡಿತ ಮಾಡುತ್ತಿದ್ದಾರೆ.ಅವರು ಕೊಡುತ್ತಿರುವುದು ನಕಲಿ ಗೊಬ್ಬರವಾಗಿದೆ.ಸರಕಾರದ ಆದೇಶ ಇಲ್ಲದೇ ನೀವು ಏಕೆ ಗೊಬ್ಬರ ಕೊಡುತ್ತಿದ್ದೀರಿ ಎಂದು ಕೇಳಿದರು.ನಮ್ಮ ರೈತರು ಜಾಗೃತರಿರಬೇಕು.ನಮ್ಮನಮ್ಮಲ್ಲಿಯೇ ಜಗಳ ಹಚ್ಚುವ ಜನ ಇರುತ್ತಾರೆ ಎಂಬುದನ್ನು ಅರಿತುಕೊಂಡುನ್ಯಾಯಯುತ ಬೆಲೆ ದೊರಕುವವರೆಗೂ ನಾನು ಹೋರಾಟದಲ್ಲಿ ಇರುತ್ತೇನೆ ಎಂದು ಹೇಳಿದರು.

ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ರೈತರು ದೇಶಕ್ಕೆ ಅನ್ನ ಕೊಡುವ ಕೆಲಸ ಮಾಡುತ್ತಿದ್ದಾನೆ.ಆತನಿಗೆ ನ್ಯಾಯಯುತವಾಗಿ ದೊರೆಯಬೇಕಾದ ಬೆಲೆ ದೊರಕುವವರೆಗೂ ಶ್ರೀ ಮಠದ ಬೆಂಬಲ ಹೋರಾಟಕ್ಕೆ ಇರಲಿದೆ ಎಂದು ಹೇಳಿದರು.

ಹೋರಾಟವನ್ನುದ್ದೇಶಿಸಿ ಮುಖಂಡರಾದ ಶಿವನಗೌಡ ಬಿರಾದಾರ ಜಲಪೂರ, ಶಿವು ಕನ್ನೊಳ್ಳಿ, ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಶಶಿಧರ ಬಂಗಾರಿ ಮತ್ತಿತರರು ಮಾತನಾಡಿದರು.ಮುಖಂಡರಾದ ಸೋಮನಗೌಡ ಕೋಳೂರ,ಬಸನಗೌಡ ಪಾಟೀಲ,ಮೈಬೂಬ ಹಡಲಗೇರಿ,ಗುರುಸಂಗಪ್ಪ ಹಡಲಗೇರಿ, ಸಂಗಪ್ಪ ಬಾಗೇವಾಡಿ,ಮುತ್ತು ಮೇಟಿ,ಶ್ರೀಕಾಂತ ನಾಡಗೌಡ,ರಾಜು ತಿಳಗೂಳ,ಹಣಮಂತ್ರಾಯ ತುಂಬಗಿ,ಅಮರಪ್ಪ ನವಲಿ,ವಿಜಯ ಹಿರೇಗೌಡರ,ಇಮಾಮಸಾಬ ಮುಲ್ಲಾ, ಶಿವರಾಜ ಬಿರಾದಾರ ಪಾಲ್ಗೊಂಡಿದ್ದರು.

3 ಕಿ.ಮೀವರೆಗೂ ಸಾಲುಗಟ್ಟಿ ನಿಂತ ಟ್ರಾಕ್ಟರಗಳು :ಕಬ್ಬು ಕಟಾವು ಕಾರ್ಯ ಹಾಗೂ ನುರಿಸುವ ಕಾರ್ಯ ಬಂದ್ ಮಾಡಿದ್ದರಿಂದ ಅಮರಗೋಳ ಕ್ರಾಸ್ನಿಂದ ಗಂಗೂರ ಕ್ರಾಸ್ದವರೆಗೂ ಕಬ್ಬು ತುಂಬಿದ್ದ ಟ್ರಾಕ್ಟರಗಳು ಸಾಲುಗಟ್ಟಿ ನಿಂತಿದ್ದವು.ಅoದಾಜು 3 ಕಿ.ಮೀ ದೂರದವರೆಗೆ ಟ್ರಾö್ಯಕ್ಟರ್ಗಳು ನಿಂತುಕೊAಡಿದ್ದು ಅದರಲ್ಲಿ ಚಾಲಕರು ಸ್ಥಳದಲ್ಲಿಯೇ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡುತ್ತ ಕೂತಿರುವ ದೃಶ್ಯಗಳು ಕಂಡು ಬಂದವು.ಹೋರಾಟದ ಸ್ಥಳದಲ್ಲಿಯೇ ಕೆಲವು ಮುಖಂಡರು ರೈತರಿಗೆ,ಟ್ರಾö್ಯಕ್ಟರ್ ಚಾಲಕರಿಗೆ ದಾಸೋಹಕ್ಕಾಗಿ ಸಹಾಯ ಮಾಡುತ್ತಿರುವುದು ಕಂಡು ಬಂದಿತು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ