ಮುದ್ದೇಬಿಹಾಳ : ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಖಾಸಗಿ ಶಾಲೆ ಹಿಂದುಗಡೆ ಇರುವ ಜಮೀನೊಂದರಲ್ಲಿ ನಡೆದಿದೆ.
ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಸಾಬಣ್ಣ ಗಂಗನಹಳ್ಳಿ ಅವರ ಪುತ್ರ ಸುದೀಪ ಗಂಗನಹಳ್ಳಿ(14) ಮೃತಪಟ್ಟ ಬಾಲಕ.ಮದ್ಯಾಹ್ನದ ಸಮಯದಲ್ಲಿ ಕುಂಟೋಜಿ ರಸ್ತೆಯಲ್ಲಿರುವ ಸಾತಪ್ಪ ಸಾವಳಗಿ(ಹುನಗುಂದ) ಅವರ ಜಮೀನಿನಲ್ಲಿರುವ ನೀರಿನ ಹೊಂಡದಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋದ ಸಮಯದಲ್ಲಿ ಬಾಲಕ ಕಾಲು ಜಾರಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಮೃತ ಬಾಲಕನ ತಂದೆ ಸಾಬಣ್ಣ ಗಂಗನಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪರೆಡ್ಡಿ ಪರಿಶೀಲನೆ ನಡೆಸಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 194ರ ಅನ್ವಯ ದೂರು ದಾಖಲಾಗಿದೆ.







