ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ ತಾಲ್ಲೂಕಿನ ಬೆಳಗಲ್ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಹುನಗುಂದದ ಶ್ರೀ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘ ಇದರ 15ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹುನಗುಂದ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ಸೃಷ್ಟಿಯಾಗುತ್ತವೆ.ಅದರಲ್ಲಿಯೂ ಈ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಈ ಭಾಗದ ಶಾಸಕರಾದ ನಾಡಗೌಡರ ಸಮಕಾಲೀನ ರಾಜಕಾರಣ ಮಾಡಿದವರು ನಮ್ಮ ತಂದೆ ಎಸ್.ಆರ್.ಕಾಶಪ್ಪನವರ ಅವರು.ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬಲದಿನ್ನಿ ನಾಡಗೌಡ್ರು,ಹುನಗುಂದ ಕಾಶಪ್ಪನವರ ಕುಟುಂಬಗಳಲ್ಲಿ ಅವಳಿ ಜಿಲ್ಲೆಯ ಎರಡು ಹುಲಿಗಳು ಎಂಬ ಭಾವನೆ ಜನರಲ್ಲಿದೆ.ಹಾವರಗಿ,ಬಲದಿನ್ನಿ ಬೇರೆಯಲ್ಲ ಅದೇ ಭಾವನೆಯಲ್ಲಿ ನಾವು ಇಂದಿಗೂ ಇದ್ದೇವೆ.ಸರಳ ಸಜ್ಜನಿಕೆ ರಾಜಕಾರಣಿ ನಾಡಗೌಡ್ರು. ಎಲ್ಲರ ಸಹಕಾರದಿಂದ ಇಲ್ಲಿ 15ನೇ ಶಾಖೆಯನ್ನು ಆರಂಭಿಸಿದ್ದೇವೆ.ಆರoಭಿಕ ಠೇವಣಿ 4 ಕೋಟಿ ಇದ್ದದ್ದು 25 ಕೋಟಿ ರೂ.ಗೆ ಬದಲಾವಣೆ ಆಗಿದೆ.ನಾಲ್ಕು ಜಿಲ್ಲೆಗಳಲ್ಲಿ ಶಾಖೆಗಳನ್ನು ವಿಸ್ತರಿಸಲಾಗುತ್ತಿದೆ.ಬರಲಿರುವ ದಿನಗಳಲ್ಲಿ ಅಮಿನಗಡದಲ್ಲಿ ಶಾಖೆ ಆರಂಭಿಸಲಿದ್ದೇವೆ ಎಂದು ಹೇಳಿದರು .

ರೈತರಿಗೆ,ಕಾರ್ಮಿಕರಿಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಶಾಖೆಗಳನ್ನು ಆರಂಭಿಸಿದ್ದೇವೆ.ಹುನಗುoದದಲ್ಲಿ ಶಾಖೆಯ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ಅರಂಭಿಸಲು ಮೂರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.ರಾಷ್ಟ್ರೀಯ ಬ್ಯಾಂಕುಗಳಿಗಿoತ ಉತ್ತಮ ಕೆಲಸ ಮಾಡಲಿವೆ ಎಂದು ಹೇಳಿದರು.

ಶಾಖೆ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿದ್ದವರನ್ನು ಮೇಲೆತ್ತಬೇಕು ಎಂಬ ಉದ್ದೇಶದಿಂದ ಆರಂಭಗೊoಡಿರುವ ಎಸ್.ಆರ್.ಕೆ ಸೌಹಾರ್ದ ಸೊಸೈಟಿ ರಾಷ್ಟಿçÃಕೃತ ಬ್ಯಾಂಕುಗಳಿಗಿoತ ಉತ್ತಮ ಸೇವೆ ದೊರೆಯಲಿ ಎಂದು ಹೇಳಿದರು.

ಕಾಶಪ್ಪನವರ ಅವರ ತಾಯಿಯವರು ನಮ್ಮ ಜೊತೆಗೆ ಜಿಪಂ ಸದಸ್ಯರಾಗಿದ್ದವರು.ಕಾಶಪ್ಪನವರ ರಾಜಕೀಯವಾಗಿ ಹಿಂಬಾಲಕರನ್ನು ಅಲಕ್ಷ್ಯ ಮಾಡಲಿಲ್ಲ. ಮುನಿಸು ಬಂದವರ ಮನಿಗೆ ಹೋಗಿ ಮಾತನಾಡುತ್ತಿದ್ದರು. ರಾಜಕಾರಣ ಮಾಡುವಾಗ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂಬುದನ್ನು ಕಾಶಪ್ಪನವರ ನೋಡಿ ತಿಳಿಯಬೇಕು.ಸೌಹಾರ್ದ ಶಾಖೆಗಳಲ್ಲಿ ಬಂಡವಾಳ ತೊಡಗಿಸಿದವರಿಗೂ ಆದಾಯ ಹೆಚ್ಚಾಗುತ್ತದೆ.ಇಡೀ ದೇಶದಲ್ಲಿ ಸೌಹಾರ್ದ ಬ್ಯಾಂಕುಗಳು ಆರ್ಥಿಕ ಕ್ರಾಂತಿ ಮಾಡುತ್ತಿವೆ ಎಂದರು.

ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು.ಸಂಘದ ನಿರ್ದೇಶಕರಾದ ಅಮರೇಶ ನಾಗೂರ, ಮಲ್ಲಿಕಾರ್ಜುನ ಲೆಕ್ಕಿಹಾಳ,ಎನ್.ಎಮ್.ಕಲಗೋಡಿ,ಪ್ರಭು ಇದ್ದಲಗಿ , ನಿಂಗಪ್ಪ ಬಿದರಕುಂದಿ, ಮಹಾಂತೇಶ ಕಡಿವಾಲ,ಮುದ್ದೇಬಿಹಾಳ ಸಲಹಾ ಸಮಿತಿ ಸದಸ್ಯರಾದ ಶಿವಶಂಕರಗೌಡ ಹಿರೇಗೌಡರ,ಮಹಾಂತೇಶ ಗಂಗನಗೌಡರ, ಅಮರೇಶ ಗೂಳಿ,ಶ್ರೀಶೈಲ ಮರೋಳ, ಸಂಗಮೇಶ ಕಡಿ, ರಾಜುಗೌಡ ಕೊಂಗಿ,ಅಲ್ಲಾಭಕ್ಷ ದೇಸಾಯಿ, ಹಣಮಂತ ಹಂಡರಗಲ್ಲ,ಶಿವು ಶಿವಪೂರ, ಅಶೋಕ ಚಟ್ಟೇರ,ವೀರೇಶ ಹಡಲಗೇರಿ, ಶ್ರೀನಿವಾಸ ಗೌಂಡಿ, ಕೆ.ಆರ್.ಚೋಪದಾರ,ಬಸವರಾಜ ಸಜ್ಜನ,ವಾಸುದೇವ ಶಾಸ್ತಿçÃ,ಶಂಕರಗೌಡ ತಾವರಖೇಡ ಮೊದಲಾದವರು ಇದ್ದರು.ವ್ಯವಸ್ಥಾಪಕ ಮಂಜುನಾಥ ಬಿ ನಿರೂಪಿಸಿದರು.

Latest News

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹಳೇ ಸರಕಾರಿ

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ;                ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ; ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಮುದ್ದೇಬಿಹಾಳ : ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕಾರ್ಮಿಕನೊಬ್ಬನ ಕೈ ಸಿಲುಕಿಕೊಂಡು ಎಲುಬುಗಳು ತುಂಡಾಗಿರುವ ಘಟನೆ ಮಂಗಳವಾರ

ಪ್ರೇರಣಾ ಕಿಂಡರ್‌ಗಾರ್ಟನ್ ಶಾಲೆ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಶಿಕ್ಷಕರೇ ರೋಲ್ ಮಾಡೆಲ್-ಡಾ.ಪ್ರಕಾಶ ನರಗುಂದ

ಪ್ರೇರಣಾ ಕಿಂಡರ್‌ಗಾರ್ಟನ್ ಶಾಲೆ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಶಿಕ್ಷಕರೇ ರೋಲ್ ಮಾಡೆಲ್-ಡಾ.ಪ್ರಕಾಶ ನರಗುಂದ

ಮುದ್ದೇಬಿಹಾಳ : ಪ್ರಾಚೀನ ಗುರುಕುಲ ಪದ್ದತಿಯಿಂದ ಇಂದಿನವರೆಗೂ ಶಿಕ್ಷಕರಿಗೆ ಗೌರವದ ಭಾವನೆ ಇದೆ.ವಿದ್ಯಾರ್ಥಿಗಳಿಗೆ ಇಂದಿಗೂ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ

ಶಿವಯೋಗಿಮಠ ಕುಟುಂಬದಿoದ ಆಯೋಜನೆ:                  ಮಾ.2 ರಂದು ಆರೋಗ್ಯ ಉಚಿತ  ತಪಾಸಣಾ ಶಿಬಿರ

ಶಿವಯೋಗಿಮಠ ಕುಟುಂಬದಿoದ ಆಯೋಜನೆ: ಮಾ.2 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

ಮುದ್ದೇಬಿಹಾಳ : ಶ್ರೀ ಫಕಿರೇಶ್ವರ ವಿವಿದೋದ್ಧೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್ ಜಾನ್ ಅಂಬ್ಯುಲೆನ್ಸ್ ತಾಲ್ಲೂಕು ಸೆಂಟರ್ ಸಹಯೋಗದಲ್ಲಿ ದಿ.ಕೂಡ್ಲಯ್ಯ ಶಿವಯೋಗಿಮಠ,ದಿ.ಬೋರಮ್ಮ ಶಿವಯೋಗಿಮಠ ಹಾಗೂ ದಿ.ಕೂಡಲಯ್ಯ ಶಿವಯೋಗಿಮಠ ಅವರ ಪುಣ್ಯಸ್ಮರಣೋತ್ಸವ ನಿಮಿತ್ಯ ಮಾ.2 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 2ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಫಕಿರೇಶ್ವರ ಡಯಗ್ನೋಸ್ಟಿಕ್ ಸೆಂಟರ್‌ನ ಮುಖ್ಯಸ್ಥ ಡಾ.ಸಿ.ಕೆ.ಶಿವಯೋಗಿಮಠ , ಶಾಂತು ಶಿವಯೋಗಿಮಠ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರಿನಲ್ಲಿ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾ.1 ರಂದು ಸಾಯಂಕಾಲ 4ಕ್ಕೆ ಎಸ್.ಎನ್.ಡಿ ಸಂಸ್ಕೃತಿ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಜಮಖಂಡಿ ಓಲೇಮಠದ ಆನಂದ ದೇವರು, ಕಾಳಗಿಯ ದೇವಿ ಆರಾಧಕ ಮಹಾದೇವಪ್ಪ ವಿಶ್ವಕರ್ಮ,ಈರಣ್ಣ ಬಡಿಗೇರ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಧ್ಯಕ್ಷತೆ ವಹಿಸುವರು. ಚಡಚಣ ಸಿಪಿಐ